Latest News

ನನ್ನ ಆಸ್ತಿ ಸರ್ವೇಗೆ ಅಧಿಕಾರಿಗಳನ್ನು ಕಳುಹಿಸಬೇಡಿ, ಸ್ವತಃ ನಿವೇ ಬನ್ನಿ : ಸಾ.ರಾ. ಮಹೇಶ್

ಮೈಸೂರು: ಒಂದು ಗುಂಟೆ ಒತ್ತುವರಿ ಮಾಡಿ ದಟ್ಟಗಳ್ಳಿಯಲ್ಲಿರುವ ಸಾ.ರಾ. ಕನ್ವೆನ್ಷನ್ ಹಾಲ್ ನಿರ್ಮಾಣ ಮಾಡಲಿಲ್ಲ. ಈ ಬಗ್ಗೆ ಯಾವುದೇ ರೀತಿಯ ತನಿಖೆಗೂ ಸಿದ್ಧ. ಒಂದುವೇಳೆ ಒಂದು ಗುಂಟೆ ಒತ್ತುವರಿ ಕಂಡು ಬಂದರೂ ಸರ್ಕಾರಕ್ಕೆ ನನ್ನ ಆಸ್ತಿಯನ್ನು ಬರೆದುಕೊಡುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್ ಸವಾಲು ಹಾಕಿದ್ದಾರೆ. ಚೌಲ್ಟ್ರಿ ಜಾಗದಲ್ಲಿ ಒಂದೇ ಗುಂಟೆ ಒತ್ತುವರಿ ಆಗಿದ್ದರೆ ಆಸ್ತಿಯನ್ನು ರಾಜ್ಯಪಾಲರಿಗೆ ಬರೆದುಕೊಡುತ್ತೇನೆ. ಸಾರ್ವಜನಿಕ ಬದುಕು, ರಾಜಕೀಯ ಬದುಕಿನಿಂದ ನಿವೃತ್ತಿ ತೆಗೆದುಕೊಳ್ಳುನೆ ಎಂದು ನಾನು ಈ...
Latest News

ವಾರ್ಡ್ ನಂ.36ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ಗೆಲುವು

ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂ.36ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ಗೆಲುವು.  ಸೋಮವಾರ ಮಹಾನಗರ ಪಾಲಿಕೆ ವಾರ್ಡ್ ನಂ.36ರ ಉಪಚುನಾವಣೆಯ ಮತ ಎಣಿಕೆ ನಡೆದು ಫಲಿತಾಂಶ ಹೊರ ಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ರಜನಿ  ಅಣ್ಣಯ್ಯ 4,113 ಮತಗಳನ್ನ ಪಡೆದು ಜಯಭೇರಿ ಬಾರಿಸಿದ್ದಾರೆ. ಇನ್ನು ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿದ್ದ ಜೆಡಿಎಸ್‌ ಅಭ್ಯರ್ಥಿ ಎಸ್‌.ಲೀಲಾವತಿ ಅವರು 2,116 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಈ ವಾರ್ಡ್‌ನಲ್ಲಿ ಪ್ರಾಬಲ್ಯವಿಲ್ಲದ ಬಿಜೆಪಿ ಅಭ್ಯರ್ಥಿ...
Health

ಆರೋಗ್ಯ ನಂದನ ಕಾರ್ಯಕ್ರಮ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕೋವಿಡ್-19 ಎರಡನೇ ವ್ಯಾಪಕವಾಗಿ ಹರಡಿದ್ದು, ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಸಂಭವ ಇರುವುದಾಗಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮಕ್ಕಳು, ಹದಿಹರೆಯದವರು, ಗರ್ಭಿಣಿಯರ ಮತ್ತು ಬಾಣಂತಿಯ ಕುರಿತಾಗಿ ವಿಶೇಷ ಗಮನ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಆರೋಗ್ಯ ನಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನೂತನವಾಗಿ ಆರಂಭವಾದ ಆರೋಗ್ಯ...
Latest News

ದಸರಾಗೆ ಸ್ಥಳಿಯ ಕಲಾವಿದರಿಗೆ ಅವಕಾಶಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ

Appeals to District Collector for opportunity for local artists ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಕರ್ನಾಟಕ ಸರ್ಕಾರ ವಿವಿಧ ವೇದಿಕೆಗಳನ್ನು ಕಲ್ಪಿಸಿಕೊಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೈಸೂರಿನ ಕಲಾವಿದರುಗಳಿಗೆ ಪ್ರಥಮ ಆದ್ಯತೆ ಕೊಟ್ಟು ಕಲಾವಿದರ ಕಲಾ ಪ್ರದರ್ಶನಗಳನ್ನು ಅನಲೈನ್ ಪ್ರದರ್ಶನಕ್ಕೆ ಒತ್ತು ನೀಡಲಿ . ಹಾಗೂ ಗಣಪತಿ ಉತ್ಸವಗಳಲ್ಲಿ ಕಾರ್ಯಕ್ರಮವನ್ನು ಮಾಡಲು ಅವಕಾಶ ಮಾಡಿ ಕೊಡುವುದರ ಬಗ್ಗೆ ಮಾನ್ಯರೇ : ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ...
Health

ರಾಷ್ಟ್ರೀಯ ಪೋಷಣಾ ಸಪ್ತಾಹ – 01 ರಿಂದ 07 ಸೆಪ್ಟೆಂಬರ್ 2021

‘FEED SMART RIGHT FROM START’ ಒಂದು ದೇಶ ಅಭಿವೃದ್ಧಿಯುತ ರಾಷ್ಟ್ರ ಎಂದು ಹೇಳಬೇಕಾದರೆ ಬೇರೆಲ್ಲವುಗಳ ಜೊತೆಗೆ ಆ ದೇಶದ ಜನರ ಆರೋಗ್ಯವೂ ಕೂಡ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕ್ಕೆ ಆಹಾರವೇ ಮೂಲವಾದುದರಿಂದ ಪ್ರಾರಂಭದಿಂದಲೇ ಉತ್ತಮ ಆಹಾರಾಭ್ಯಾಸವನ್ನು ರೂಢಿಸುವುದು, ರೂಢಿಸಿಕೊಳ್ಳುವುದು ಅತ್ಯಗತ್ಯ. ಪ್ರತಿಯೊಂದು ಋತುಮಾನಕ್ಕೆ ತಕ್ಕಂತೆ, ಆಯಾ ಪ್ರದೇಶಗಳ ವಾತಾವರಣಕ್ಕೆ ಅನುಗುಣವಾಗಿ ಆಹಾರ ವೈವಿಧ್ಯತೆಯನ್ನು ನಮ್ಮ ಪೂರ್ವಿಕರು ಪರಿಚಯಿಸಿದ್ದರೂ ಕೂಡ ‘ಡಯಟ್, ‘ನ್ಯೂಟ್ರಿಷನ್’ ಹೆಸರಿನಲ್ಲಿ (ಸರಿಯಾಗಿ ಅರ್ಥೈಸಿಕೊಳ್ಳದೇ) ಆಹಾರದ...
Agriculture

ಬಗೆಬಗೆಯ ಮಣ್ಣಿನ ಬಣ್ಣಗಳು

ಪ್ರಶ್ನೆ: ಮಣ್ಣಿನ ಮೊದಲ ಬಣ್ಣ ಯಾವುದು ? ಉತ್ತರ: ಕಂದು - ಕಪ್ಪು - ಕೆಂಪು - ಹಳದಿ - ಬಿಳಿ - ಬೂದು - ಹಸಿರು - ನೀಲಿ . . . . ನಿಜ. ಮಣ್ಣುಗಳು ವೈವಿಧ್ಯಮಯ ಬಣ್ಣಗಳಲ್ಲಿ ಕಂಗೊಳಿಸುತ್ತವೆ. ಈ ಉತ್ತರಗಳೆಲ್ಲವೂ ಸರಿಯೇ . . . ಹಾಗೆಯೇ ಈ ಮಣ್ಣು ಸೃಷ್ಟಿಯಾದ ಪ್ರದೇಶ - ವಾತಾವರಣ - ಹವಾಗುಣ ಇವುಗಳ ಆಧಾರದ ಮೇರೆಗೆ ಮಣ್ಣಿನ...
Latest News

10 ವರ್ಷಕ್ಕೊಮ್ಮೆ ಜಾತಿ ಜನಗಣತಿ ಮಾಡಿದ್ರೆ ಮೀಸಲಾತಿ ನೀಡಲು ಅನುಕೂಲ: ಸಿದ್ದರಾಮಯ್ಯ

'ಪ್ರತಿ ಹತ್ತು ವರ್ಷಕ್ಕೊಮ್ಮೆ ಸೆನ್ಸನ್ ನಡೆಯುವ ರೀತಿಯಲ್ಲೇ ಜಾತಿಗಣತಿ ನಡೆದರೆ ಒಳ್ಳೆಯದು. ಜಾತಿ ಜನಗಣತಿ ಅನುಷ್ಠಾನದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ಹೋರಾಟ ಮಾಡುತ್ತೇವೆ. ಧ್ವನಿ ಎತ್ತುತ್ತೇವೆ' - ಸಿದ್ದರಾಮಯ್ಯ   ಹೈಲೈಟ್ಸ್‌: 90 ವರ್ಷಗಳ ಹಿಂದಿನ ಜಾತಿ ಜನಗಣತಿ ವರದಿ ಇದೆ ಇದರ ಆಧಾರದ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮ ರೂಪಿಸಲಾಗುತ್ತಿದೆ ಸ್ವಾತಂತ್ರ್ಯಾ ನಂತರ ಎಲ್ಲಾ ಜಾತಿ, ವರ್ಗಗಳಿಗೂ ಸೂಕ್ತ ಅವಕಾಶಗಳು ಸಿಗುತ್ತಿಲ್ಲ: ಸಿದ್ದರಾಮಯ್ಯ ಬೆಂಗಳೂರು: ‌ಪ್ರತಿ ಹತ್ತು ವರ್ಷಕ್ಕೊಮ್ಮೆ...
Latest News

ಕಾರಿಗೆ ಆಕಸ್ಮಿಕ ಬೆಂಕಿ ಕ್ಷಣಾರ್ಧದಲ್ಲಿ ಕಾರು ಸುಟ್ಟು ಭಸ್ಮ…!

ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಚಾಮರಾಜನಗರದ ಹನೂರು ತಾಲೂಕಿನ‌ ಸೂಳೇರಿಪಾಳ್ಯದಲ್ಲಿ ನಡೆದಿದೆ. ಸೂಳೇರಿಪಾಳ್ಯ ಪಂಚಾಯಿತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದಿಂದ ಬೆಂಗಳೂರಿಗೆ ಹೊರಟಿದ್ದ ಕಾರಿಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರು ಕಾಂಚಳ್ಳಿ ಗ್ರಾಮದ ರಾಜು ಎಂಬುವರಿಗೆ ಸೇರಿದ್ದಾಗಿದೆ. ಇನ್ನು ಚಾಲಕ ವೆಂಕಟರಾಜು, ಶ್ರೀನಿವಾಸ್ ಮತ್ತು ರಘು ಎಂಬುವವರು ಕಾರ್ಯನಿಮಿತ್ತ...
Latest News

ಹಸುಗೂಸಿಗೆ ಚಿತ್ರಹಿಂಸೆ ನೀಡಿದ ಕ್ರೂರಿ ತಾಯಿಯ ಬಂಧನ

ಪುಟ್ಟ ಮಗುವಿಗೆ ತಾಯಿಯ ಚಿತ್ರಹಿಂಸೆ ವೀಡಿಯೋ ವೈರಲ್, ಮಹಿಳೆಯ ಬಂಧನ ಇನ್ನೂ ಮಾತೂ ಬರದ ಮಗುವೆಂಬುದನ್ನೂ ಮರೆತು ಚಪ್ಪಲಿಯಿಂದ ಹೊಡೆದು, ಗಲ್ಲದ ಮೇಲೆ ರಕ್ತ ಬರುವಂತೆ ಬಾಯಿಗೆ  ಗುದ್ದಿ ತಾನೇ ಮೋಬೈಲ್ ನಲ್ಲಿ ವೀಡಿಯೋ ಚಿತ್ರೀಕರಿಸಿದ್ದ ಆ ತಾಯಿಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿತ್ತು. ತನ್ನ ಹದಿನೆಂಟು ತಿಂಗಳ ಮಗನನ್ನು ಕ್ರೂರವಾಗಿ ಥಳಿಸಿದ 22 ವರ್ಷದ ಮಹಿಳೆಯನ್ನು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಭಾನುವಾರ ತಮಿಳುನಾಡು ಪೋಲಿಸರು ಬಂಧಿಸಿದ್ದಾರೆ. ಬಂಧಿತ ಮಹಿಳೆ ತುಳಸಿಗೆ ವಡಿವಾಜಗನ್ ಎಂಬಾತನೊಂದಿಗೆ 5...
Latest News

ಮೈಸೂರಿನಲ್ಲಿ ದರೋಡೆ ಪ್ರಕರಣ – 6 ಮಂದಿ ಪೊಲೀಸರ ವಶಕ್ಕೆ!

ಡಕಾಯಿತಿ, ಫೈರಿಂಗ್ ವಿಚಾರವಾಗಿ ಮೈಸೂರಿನಲ್ಲಿ ಡಿಜಿ & ಐಜಿ ಸುದ್ದಿಗೋಷ್ಠಿ ನಡೆಸಿದ್ದು, ಐದು ಟೀಂನಿಂದ ದೇಶದ ಬೇರೆ ಬೇರೆ ಭಾಗಕ್ಕೆ ಹೋಗಿದ್ರು. ಮೈಸೂರು ಪೊಲೀಸ್ ಆಯುಕ್ತರು ತಂಡ ರಚನೆ ಮಾಡಿದ್ರು. ಪ್ರಕರಣ ಸಂಬಂಧ ಆರು ಮಂದಿಯ ಬಂಧನ. ಮೈಸೂರಿನ ಒಬ್ಬರು ಈ ಪ್ರಕರಣದಲ್ಲಿ ಭಾಗಿಯಾಗಿದ್ದರು. ವೆಸ್ಟ್ ಬೆಂಗಾಲ್, ಮುಂಬಯಿ, ರಾಜಸ್ಥಾನ, ಜಮ್ಮು ಅಂಡ್ ಕಾಶ್ಮೀರ್‌ನಲ್ಲಿ ಅರೆಸ್ಟ್ ಮಾಡಲಾಗಿದೆ. 8 ಮಂದಿಯಲ್ಲಿ 6 ಮಂದಿಯನ್ನ ಈಗಾಗಲೇ ವಶಕ್ಕೆ ಪಡೆದಿದ್ದೇವೆ. ಪ್ಲಾನ್ ಮಾಡಿದ್ದು...
1 47 48 49 50 51 62
Page 49 of 62