ಪಿರಿಯಾಪಟ್ಟಣದಲ್ಲಿ ರೈತ ಆ*ಹ* : ಸಾಲಬಾಧೆ, ಬೆಳೆ ನಷ್ಟದಿಂದ ಮನನೊಂದು ದುರ್ಘಟನೆ
ವರದಿ: ರವಿಚಂದ್ರ ಬೂದಿತಿಟ್ಟು. ಪಿರಿಯಾಪಟ್ಟಣ: ಸಾಲಬಾಧೆ ಹಾಗೂ ನಿರಂತರ ಬೆಳೆ ನಷ್ಟದಿಂದ ಮನನೊಂದು ವಡ್ಡರಹಳ್ಳಿ ಗ್ರಾಮದ ರೈತ ರಮೇಶ್ (50) ವಿಷ ಸೇವಿಸಿ ಆಹ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ರಮೇಶ್ ಅವರು ತಮ್ಮ ತಂದೆಯ ಹೆಸರಿನಲ್ಲಿದ್ದ ಜಮೀನು ಸೇರಿದಂತೆ ಇತರರಿಂದ ಭೋಗ್ಯಕ್ಕೆ ಪಡೆದ ಜಮೀನಿನಲ್ಲಿ ತಂಬಾಕು, ಶುಂಠಿ ಮತ್ತು ರಾಗಿ ಬೆಳೆಗಳನ್ನು ಬೆಳೆಸುತ್ತಿದ್ದರು. ಕೃಷಿಯ ಮೇಲೆಯೇ ಅವಲಂಬಿತವಾಗಿದ್ದ ಅವರು, ಬೆಳೆಗಾಗಿ ಕಿತ್ತೂರು ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಸುಮಾರು 24 ಲಕ್ಷ ರೂ. ಸಾಲ ಪಡೆದಿದ್ದರು. ಇದಲ್ಲದೆ, ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದಲೂ ಪತ್ನಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಆದರೆ ಕಳೆದ ಎರಡು ಮೂರು ವರ್ಷಗಳಿಂದ ಸರಿಯಾದ ಸಮಯಕ್ಕೆ ಮಳೆಯಾಗದೆ ಬೆಳೆಗಳು ಕೈಕೊಟ್ಟ ಪರಿಣಾಮ ಭಾರೀ ನಷ್ಟ ಉಂಟಾಯಿತು. ಸಾಲ ತೀರಿಸಲು ಸಾಧ್ಯವಾಗದ ಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ರಮೇಶ್ ತೀವ್ರ ಮನೋವ್ಯಥೆಗೆ...







