Latest News

ನೋಡಲು ತನ್ನಂತಿಲ್ಲ ಎಂದು ಮಗನನ್ನೇ ಕೊಂದ ತಂದೆ: ಮಗನನ್ನೇ ನದಿಗೆ ತಳ್ಳಿ ಕೊಂದ ತಂದೆ

ವಿಜಯಪುರ, ಏಪ್ರಿಲ್:-  ಮಾನವೀಯತೆಯೇ ನಡುಗಿಸುವಂತಹ ಭೀಕರ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ. ಕೇವಲ “ಮಗ ನೋಡಲು ತನ್ನಂತಿಲ್ಲ” ಎಂಬ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡ ತಂದೆಯೊಬ್ಬ, ತನ್ನ ಆರು ವರ್ಷದ ಮಗನನ್ನೇ ಕೊ* ಮಾಡಿದ ದಾರುಣ ಘಟನೆ ನಡೆದಿದೆ. ಈ ಘಟನೆ ಸಮಾಜದ ನಿರ್ಲಕ್ಷ್ಯ ಮಾತುಗಳು ಎಷ್ಟು ಅಪಾಯಕರ ಪರಿಣಾಮ ಬೀರುತ್ತವೆ ಎಂಬುದಕ್ಕೆ ಕಠಿಣ ಉದಾಹರಣೆಯಾಗಿದೆ. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ನಿವಾಸಿಗಳಾದ ಮಲ್ಲಿಕಾರ್ಜುನ ಅರಕೇರಿ ಮತ್ತು ಭಾಗ್ಯಶ್ರೀ ದಂಪತಿಗೆ ಸಿದ್ದಾರ್ಥ ಎಂಬ ಆರು ವರ್ಷದ ಮಗನಿದ್ದ. ಗ್ರಾಮದಲ್ಲಿ ಕೆಲವರು ಮಗನ ಹೋಲಿಕೆ ಕುರಿತು ತಮಾಷೆ ಮಾತುಗಳನ್ನು ಆಡುತ್ತಿದ್ದರು. “ಮಗ ನೋಡಲು ನಿನ್ನಂತಿಲ್ಲ” ಎಂಬ ಛೇಡನೆಗಳನ್ನು ಮಲ್ಲಿಕಾರ್ಜುನ ಮನಸ್ಸಿನಲ್ಲಿ ಆಳವಾಗಿ ತೆಗೆದುಕೊಂಡಿದ್ದು, ಅದು ಕ್ರಮೇಣ ಅನುಮಾನವಾಗಿ ರೂಪಾಂತರಗೊಂಡಿತ್ತು. ಮಾರ್ಚ್ 16ರಂದು ಮಗನನ್ನು ಶಾಲೆಗೆ ಸೇರಿಸುವ ನೆಪದಲ್ಲಿ ಮಲ್ಲಿಕಾರ್ಜುನ ಮನೆದಿಂದ ಕರೆದುಕೊಂಡು ಹೋಗಿದ್ದಾನೆ. ನಂತರ ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ...
Latest News

15-04-2026 ರ ರಾಶಿ ದಿನಭವಿಷ್ಯ

ಮೇಷ (Aries) 15-04-2026 ದಿನಭವಿಷ್ಯ ನಿಮ್ಮ ದಿನ ಒಂದು “ಸಣ್ಣ ಯುದ್ಧ  ದೊಡ್ಡ ಗೆಲುವು” ತರ ಕಾಣಬಹುದು. ಬೆಳಗ್ಗೆದಿಂದಲೇ ಕೆಲವು ಕೆಲಸಗಳು ನಿಮ್ಮನ್ನು ಪರೀಕ್ಷಿಸುವಂತೆ ಇರಬಹುದು. ನೀವು ಯೋಜಿಸಿದಂತೆ ಎಲ್ಲವೂ ನಡೆಯದೇ ಇರಬಹುದು, ಆದರೆ ಅದೇ ನಿಮ್ಮ ಸಾಮರ್ಥ್ಯ ತೋರಿಸುವ ಸಮಯ. ಕೆಲಸದ ಕ್ಷೇತ್ರದಲ್ಲಿ (job/business) ಸ್ವಲ್ಪ ಒತ್ತಡ ಕಾಣಬಹುದು. ವಿಶೇಷವಾಗಿ ಮೇಲಧಿಕಾರಿಗಳಿಂದ ನಿರೀಕ್ಷೆಗಳು ಹೆಚ್ಚಿರಬಹುದು. ಆದರೆ ಆತಂಕ ಬೇಡ  ನೀವು ನಿಮ್ಮ ನಿಷ್ಠೆ ಮತ್ತು ತಾಳ್ಮೆಯಿಂದ ಅದನ್ನು ನಿಭಾಯಿಸುತ್ತೀರಿ. ಇಂದು ತಕ್ಷಣದ ನಿರ್ಧಾರಗಳಿಗಿಂತ ಸ್ವಲ್ಪ ಯೋಚಿಸಿ ತೆಗೆದುಕೊಂಡ ನಿರ್ಧಾರಗಳು ಹೆಚ್ಚು ಫಲ ಕೊಡುತ್ತವೆ. ಹಣಕಾಸಿನ ವಿಷಯದಲ್ಲಿ ದಿನ ಸರಾಸರಿ. ದೊಡ್ಡ ಖರ್ಚುಗಳನ್ನು ಮುಂದೂಡುವುದು ಒಳಿತು. ಅಕಸ್ಮಾತ್ ಸಣ್ಣ ಖರ್ಚುಗಳು ಬರಬಹುದು, ಆದ್ದರಿಂದ ಹಣದ ಯೋಜನೆ ಮಾಡಿಕೊಳ್ಳಿ. ಸಾಲ-ಕಡೆ ವಿಷಯದಲ್ಲಿ ಎಚ್ಚರಿಕೆ ಇರಲಿ. ಕುಟುಂಬದ ವಿಷಯದಲ್ಲಿ ಸ್ವಲ್ಪ ಸಂವೇದನಾಶೀಲತೆ ಬೇಕಾಗುತ್ತದೆ. ನಿಮ್ಮ ಮಾತುಗಳು ಕಠಿಣವಾಗದಂತೆ ಗಮನ ಕೊಡಿ....
Latest News

ಪಿರಿಯಾಪಟ್ಟಣದಲ್ಲಿ ರೈತ ಆ*ಹ* : ಸಾಲಬಾಧೆ, ಬೆಳೆ ನಷ್ಟದಿಂದ ಮನನೊಂದು ದುರ್ಘಟನೆ

ವರದಿ: ರವಿಚಂದ್ರ ಬೂದಿತಿಟ್ಟು. ಪಿರಿಯಾಪಟ್ಟಣ: ಸಾಲಬಾಧೆ ಹಾಗೂ ನಿರಂತರ ಬೆಳೆ ನಷ್ಟದಿಂದ ಮನನೊಂದು ವಡ್ಡರಹಳ್ಳಿ ಗ್ರಾಮದ ರೈತ ರಮೇಶ್ (50) ವಿಷ ಸೇವಿಸಿ ಆಹ  ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ರಮೇಶ್ ಅವರು ತಮ್ಮ ತಂದೆಯ ಹೆಸರಿನಲ್ಲಿದ್ದ ಜಮೀನು ಸೇರಿದಂತೆ ಇತರರಿಂದ ಭೋಗ್ಯಕ್ಕೆ ಪಡೆದ ಜಮೀನಿನಲ್ಲಿ ತಂಬಾಕು, ಶುಂಠಿ ಮತ್ತು ರಾಗಿ ಬೆಳೆಗಳನ್ನು ಬೆಳೆಸುತ್ತಿದ್ದರು. ಕೃಷಿಯ ಮೇಲೆಯೇ ಅವಲಂಬಿತವಾಗಿದ್ದ ಅವರು, ಬೆಳೆಗಾಗಿ ಕಿತ್ತೂರು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಸುಮಾರು 24 ಲಕ್ಷ ರೂ. ಸಾಲ ಪಡೆದಿದ್ದರು. ಇದಲ್ಲದೆ, ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದಲೂ ಪತ್ನಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಆದರೆ ಕಳೆದ ಎರಡು ಮೂರು ವರ್ಷಗಳಿಂದ ಸರಿಯಾದ ಸಮಯಕ್ಕೆ ಮಳೆಯಾಗದೆ ಬೆಳೆಗಳು ಕೈಕೊಟ್ಟ ಪರಿಣಾಮ ಭಾರೀ ನಷ್ಟ ಉಂಟಾಯಿತು. ಸಾಲ ತೀರಿಸಲು ಸಾಧ್ಯವಾಗದ ಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ರಮೇಶ್ ತೀವ್ರ ಮನೋವ್ಯಥೆಗೆ...
Latest News

ಆಸ್ತಿ ವಿವಾದ: ತಂಗಿ ಮಗನ ಕೊಲ್ಲಲು ಸುಪಾರಿ ಕೊಟ್ಟ ಮಾವ, ಅಳಿಯನ ವಿರುದ್ಧ ದೂರು ದಾಖಲು.,

 ವರದಿ: ರವಿಚಂದ್ರ ಬೂದಿತಿಟ್ಟು. ಪಿರಿಯಾಪಟ್ಟಣ : ತಂಗಿಗೆ ಆಸ್ತಿಯನ್ನು ನೀಡಲೇ ಬಾರದು ಎಂದು ತೀರ್ಮಾನಿಸಿ ತನ್ನ ಸೋದರ ಅಳಿಯನನ್ನು ಕೊಲ್ಲಲು ಸುಪಾರಿ ಕೊಟ್ಟ ಮಾವ ಹಾಗೂ ಆತನ...
Latest News

ಜಾತಿ ಭೇದ ತೊಡೆದು ಒಗ್ಗಟ್ಟಾಗಿ ಬದುಕೋಣ: ಟಿ.ಡಿ. ಗಣೇಶ್ ಕರೆ

ವರದಿ: ರವಿಚಂದ್ರ ಬೂದಿತಿಟ್ಟು ಪಿರಿಯಾಪಟ್ಟಣ: “ನಾವೆಲ್ಲರೂ ಮನುಷ್ಯರು ಒಂದೇ. ಜಾತಿ ಎಂಬ ಭೇದವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಾರದು” ಎಂದು ಮೈಸೂರು ಪೇಂಟ್ ಅಂಡ್ ವಾರ್ನಿಸ್ ಅಧ್ಯಕ್ಷ ಟಿ.ಡಿ. ಗಣೇಶ್...
Latest News

ಮೈಸೂರು ಹಾಸನ ರಸ್ತೆಯಲ್ಲಿ ಅಂಬೇಡ್ಕರ್ ಜಯಂತಿ: ಅರಳಿ ಮರ ತೆರವು ಮಾಡಿ ಉದ್ಯಾನವನ ನಿರ್ಮಾಣ ಘೋಷಣೆ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್.ನಗರ:ಏ.,14:- ಪ್ರತಿ ದೇಶವಾಸಿಯು ನೆಮ್ಮದಿ ಮತ್ತು ಸಮಾನತೆಯ ಜೀವನ ನಡೆಸಲು ಅನುಕೂಲವಾಗುವಂತಹ ವಿಶ್ವ ಶ್ರೇಷ್ಠ ಸಂವಿಧಾನ ನೀಡಿದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಅಜರಾಮರ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಪಟ್ಟಣದ ಮೈಸೂರು-ಹಾಸನ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಮತ್ತು ತಾಲೂಕು ಆಡಳಿತ ಮತ್ತು ದಲಿತ ಸಂಘಟನೆಗಳ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತದ ಜನತೆಯ ಸುಭದ್ರ ಭವಿಷ್ಯಕ್ಕಾಗಿ ಹತ್ತು ಹಲವು‌ ಶಾಶ್ವತ ಕೊಡುಗೆ ಗಳನ್ನು ನೀಡಿದ ಬಾಬಾ‌ ಸಾಹೇಬರು ಸೂರ್ಯ ಮತ್ತು ಚಂದ್ರರು ಇರುವವರೆಗೂ ಶಾಶ್ವತ ಎಂದು ಬಣಿಸಿದ ಶಾಸಕರು ಸಮಾಜದ ಬಾಂದವರ ಬೇಡಿಕೆಯಂತೆ ಅಂಬೇಡ್ಕರ್ ಪುತ್ಥಳಿ ಬಳಿ ಇರುವ‌ ಅರಳಿ ಮರವನ್ನು ತೆರವು ಮಾಡಿ ಇಲ್ಲಿ ಸುಂದರ ಉದ್ಯಾನವನ ನಿರ್ಮಾಣ ಮಾಡುವುದಾಗಿ...
Latest News

ಟೌನ್ ಹಾಲ್ ಮುಂಭಾಗ ಅಂಬೇಡ್ಕರ್ ಜಯಂತಿ ಆಚರಣೆ: ಸಮಾನತೆ ಶಿಕ್ಷಣದ ಸಂದೇಶ ಮೊಳಗಿತು

ಮೈಸೂರು:- ನಗರದ ಟೌನ್ ಹಾಲ್ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು. ವಿವಿಧ ವರ್ಗಗಳ ಸಾರ್ವಜನಿಕರು, ಸಂಘಟನೆಯ ಪದಾಧಿಕಾರಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ವೈಭವ ತುಂಬಿದರು. ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರ್ ಅವರ ಪುತಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಅವರ ಸೇವೆಯನ್ನು ಸ್ಮರಿಸಲಾಯಿತು. ಬಳಿಕ ಮಾತನಾಡಿದ ಕನ್ನಡಾಂಬೆ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಶೇಖರ್, “ಡಾ. ಅಂಬೇಡ್ಕರ್ ಕೇವಲ ಒಬ್ಬ ವ್ಯಕ್ತಿ ಅಲ್ಲ, ಅವರು ಒಂದು ಮಹಾನ್ ಚಿಂತನೆ. ಬಡತನ, ಜಾತಿ ಭೇದಭಾವ ಮತ್ತು ಅನ್ಯಾಯಗಳನ್ನು ಎದುರಿಸಿ, ತಮ್ಮ ಪರಿಶ್ರಮ ಹಾಗೂ ಶಿಕ್ಷಣದ ಬಲದಿಂದ ಶ್ರೇಷ್ಠ ಸ್ಥಾನಕ್ಕೇರಿದ ಮಹನೀಯರು,” ಎಂದು ಹೇಳಿದರು. ಅವರು “ಶಿಕ್ಷಣ ಪಡೆಯಿರಿ, ಸಂಘಟಿತರಾಗಿ, ಹೋರಾಡಿ” ಎಂಬ ಅಂಬೇಡ್ಕರ್ ಅವರ ಮಹತ್ವದ ಸಂದೇಶವನ್ನು ಸ್ಮರಿಸಿ, ಇಂದಿನ...
Latest News

ಮೈಸೂರು: ಕಬ್ಬಿನ ಹಣ ಪಾವತಿ ವಿಳಂಬ :  ಏಪ್ರಿಲ್ 21ರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರಂತರ ಧರಣಿಗೆ ರೈತರ ತೀರ್ಮಾನ

ಮೈಸೂರು, ಏಪ್ರಿಲ್ 13: ಕಬ್ಬು ಬೆಳೆಗಾರರಿಗೆ ಬಾಕಿ ಇರುವ ಹಣವನ್ನು ತಕ್ಷಣ ಪಾವತಿಸಬೇಕೆಂದು ಒತ್ತಾಯಿಸಿ ಏಪ್ರಿಲ್ 21ರಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರಂತರ ಪ್ರತಿಭಟನೆ ಧರಣಿ...
1 2 3 62
Page 1 of 62