Latest News

ಗೃಹಿಣಿ ಸಾವಿನ ಹಿಂದೆ ಅಕ್ರಮ ಸಂಬಂಧದ ಸುಳಿವು :  pendrive ಲ್ಲಿ ಸತ್ಯ? ಪರಸ್ತ್ರೀ ಸಹವಾಸದಿಂದ ಹತ್ಯೆಗೈದ್ನಾ ಪತಿ?

ದಾವಣಗೆರೆಯಲ್ಲಿ ಮಹಿಳೆಯ ಅನುಮಾನಾಸ್ಪದ ಸಾವು: ಪತಿಯ ವಿರುದ್ಧ ಹತ್ಯೆ ಆರೋಪ, ಪರಸ್ತ್ರೀ ಸಹವಾಸದ ಸುಳಿವು ದಾವಣಗೆರೆ: ಮನೆಯೊಳಗೆ 26 ವರ್ಷದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯ ರೇಲ್ವೆ ಕ್ವಾಟರ್ಸ್ನಲ್ಲಿ ನಡೆದಿದೆ. ಕಾವ್ಯಾ ಎಂಬ ಯುವತಿ ಸಾವನ್ನಪ್ಪಿದ್ದು, ಪತಿ ಮನು ವಿರುದ್ಧ ಪರಸ್ತ್ರೀ ಸಹವಾಸ, ವರದಕ್ಷಿಣೆ ಕಿರುಕುಳ ಹಾಗೂ ಹಲ್ಲೆ ಮಾಡಿ ಕೊಲೆಗೈದಿದ್ದಾನೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಮೃತ ಕಾವ್ಯಾ ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದ ಬಡ ಕುಟುಂಬದವರು. ಎರಡು ವರ್ಷಗಳ ಹಿಂದೆ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದ ಮನುವಿನೊಂದಿಗೆ ವಿವಾಹವಾಗಿದ್ದರು. ಮನು ಅಂಚೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಕಾರಣ, ಕಾವ್ಯಾಳ ಪೋಷಕರು ಸಾಲ ಮಾಡಿ ಸುಮಾರು ₹2.50 ಲಕ್ಷ ನಗದು ಹಾಗೂ 70 ಗ್ರಾಂ ಚಿನ್ನ ನೀಡಿ ಮದುವೆ ಮಾಡಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮದುವೆಯ ಆರಂಭದಲ್ಲಿ ಜೀವನ ಸರಾಗವಾಗಿದ್ದರೂ,...
Latest News

ಕೆ.ಆರ್.ನಗರದಲ್ಲಿ ಕಾವೇರಿ ನದಿಯಲ್ಲಿ ದಾರುಣ ದುರಂತ: ಉರುಸ್ ಗೆ ಬಂದ 8ರಲ್ಲಿ 6 ಮಂದಿ ಸಾವು, ಇಬ್ಬರ ಸ್ಥಿತಿ ಗಂಭೀರ

ಕೆ.ಆರ್.ನಗರ: ಕಾವೇರಿ ನದಿಯಲ್ಲಿ ಈಜಲು ಇಳಿದ ಎಂಟು ಮಂದಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಇಬ್ಬರನ್ನು ಗಂಭೀರ ಸ್ಥಿತಿಯಲ್ಲಿ ಮೈಸೂರಿನ ಆಸ್ಪತ್ರೆಗೆ ರವಾನಿಸಿರುವ ದುರ್ಘಟನೆ ಕೆ.ಆರ್.ನಗರ ಪಟ್ಟಣ ಸಮೀಪದ...
Latest News

ತುಮಕೂರು: ಮಗಳ ಪ್ರಿಯಕರನ ಜೊತೆ ಸೇರಿ ಅಳಿಯನ ಹತ್ಯೆ : ತಾಯಿ, ತಮ್ಮ ಸೇರಿ ಮೂವರು ಬಂಧನ

ತುಮಕೂರು, ಏಪ್ರಿಲ್ 19: ಮಗಳ ಸಾವಿನ ಬಳಿಕ ಕುಟುಂಬದೊಳಗಿನ ಅಕ್ರಮ ಸಂಬಂಧ ಮತ್ತು ವೈಮನಸ್ಸು ಕೊನೆಗೆ ರಕ್ತಪಾತಕ್ಕೆ ಕಾರಣವಾದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದಂಡೀಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಗಳ ಪ್ರಿಯಕರನ ಜೊತೆ ಸೇರಿ ಆಕೆಯ ತಾಯಿ ಹಾಗೂ ಸಹೋದರನೇ ಅಳಿಯನನ್ನು ಕೊಲೆ ಮಾಡಿರುವ ಪ್ರಕರಣವನ್ನು ಕೊಡಿಗೇನಹಳ್ಳಿ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು 32 ವರ್ಷದ ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ. ಕೆಲ ವರ್ಷಗಳ ಹಿಂದೆ ನರಸಿಂಹಮೂರ್ತಿ ಸುಜಾತಾಳನ್ನು ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು ವಿವಾಹವಾಗಿದ್ದ. ಮದುವೆಯ ನಂತರ ಸುಜಾತಾ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಸೇರಿದ್ದಳು. ಈ ವೇಳೆ ಅಮರ್ ಎಂಬ ಯುವಕನ ಪರಿಚಯವಾಗಿದ್ದು, ನಂತರ ಅವರಿಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಈ ಮಧ್ಯೆ ಸುಜಾತಾ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಕೆಲವು ತಿಂಗಳ ಹಿಂದೆ ಅನಾರೋಗ್ಯದಿಂದ ಸುಜಾತಾ...
Latest News

ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ, ಸಂಘಗಳಿಗೆ ದೇಣಿಗೆ : ಶೇಷಾದ್ರಿಯ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಏ. 19:- ಬಸವಣ್ಣನವರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡಿರುವ ಉದ್ಯಮಿ ಮಾಜಿ ಪುರಸಭಾ ಸದಸ್ಯ ಜಿ ಶೇಷಾದ್ರಿ ಅವರು ಇತರೆ...
Latest News

ಪ್ರಿಯಕರ ಜೊತೆ ಸೇರಿ ಪತಿಯ ಹತ್ಯೆ : ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಪ್ರಕರಣ

ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ನಡೆದ ಈ ಹತ್ಯೆ ಪ್ರಕರಣ ಮೊದಲಿಗೆ ಅನುಮಾನಾಸ್ಪದ ಸಾವು ಎಂದು ಕಾಣಿಸಿಕೊಂಡಿತ್ತು. ಆದರೆ ಪೊಲೀಸರು ನಡೆಸಿದ ಸೂಕ್ಷ್ಮ ತನಿಖೆಯಿಂದ ಇದು ಪೂರ್ವಯೋಜಿತ ಕೊಲೆ ಎಂಬುದು ಬಹಿರಂಗವಾಗಿದೆ. ಮೃತ ವ್ಯಕ್ತಿಯನ್ನು ಕುರ್ಣೇಗಾಲ ಗ್ರಾಮದ ಜವರಪ್ಪ ಎಂದು ಗುರುತಿಸಲಾಗಿದೆ. ಅವರಿಗೆ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಅಮೃತಾ ಜೊತೆ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕುಟುಂಬದಲ್ಲಿ ಸಾಮಾನ್ಯವಾಗಿ ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆಗಳು ನಡೆಯುತ್ತಿದ್ದುದು ತಿಳಿದುಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಅಮೃತಾ ಮತ್ತು ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32) ನಡುವೆ ಅಕ್ರಮ ಸಂಬಂಧವಿತ್ತು. ಈ ಸಂಬಂಧಕ್ಕೆ ಪತಿ ಜವರಪ್ಪ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ, ಇಬ್ಬರೂ ಸೇರಿ ಅವನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು. ಸುಮಾರು 12 ದಿನಗಳ ಹಿಂದೆ ಅಮೃತಾ ತನ್ನ ಮಕ್ಕಳೊಂದಿಗೆ ತವರಿನ ಮನೆಗೆ ಹಬ್ಬದ ನಿಮಿತ್ತ ತೆರಳಿದ್ದಳು. ಏಪ್ರಿಲ್ 16ರಂದು ಜವರಪ್ಪ...
Latest News

18-04-2026 ರ ರಾಶಿ ದಿನಭವಿಷ್ಯ

ಮೇಷ (Aries) – 18-04-2026 ದಿನಭವಿಷ್ಯ ನಿಮ್ಮೊಳಗಿನ ಶಕ್ತಿ ಒಂದು ಕುದುರೆಯಂತೆ ಓಡಲು ತುದಿಗಾಲಿನಲ್ಲಿ ನಿಂತಿರುತ್ತದೆ. ನೀವು ಯಾವುದನ್ನೇ ಕೈಗೆತ್ತಿಕೊಂಡರೂ ಅದರಲ್ಲಿ ವೇಗ ಮತ್ತು ಉತ್ಸಾಹ ಕಾಣಿಸುತ್ತದೆ. ಆದರೆ ಈ ವೇಗಕ್ಕೆ ಒಂದು ದಿಕ್ಕು ಕೊಡುವುದು ಮುಖ್ಯ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಕಡೆ ಬರಬಹುದು. ನೀವು ಅದನ್ನು ಆತ್ಮವಿಶ್ವಾಸದಿಂದ ಸ್ವೀಕರಿಸಿದರೆ ಮೇಲಾಧಿಕಾರಿಗಳ ಗಮನ ನಿಮ್ಮತ್ತ ಸೆಳೆಯಬಹುದು. ಹಣಕಾಸಿನ ವಿಷಯದಲ್ಲಿ ಇಂದು ಸ್ವಲ್ಪ ಜಾಗ್ರತೆ ಅವಶ್ಯಕ. ತಕ್ಷಣ ಲಾಭ ಕಾಣಿಸುವ ಯೋಜನೆಗಳು ಎಲ್ಲವೂ ನಿಜವಾಗಿಯೂ ಲಾಭಕರವಾಗಿರಲಿಕ್ಕಿಲ್ಲ. ಹೀಗಾಗಿ ದೊಡ್ಡ ಹೂಡಿಕೆ ಮಾಡುವ ಮೊದಲು ಯೋಚಿಸಿ. ಸಣ್ಣ ಮಟ್ಟದ ಉಳಿತಾಯ ಇಂದು ನಿಮಗೆ ಭವಿಷ್ಯದಲ್ಲಿ ದೊಡ್ಡ ಬೆಂಬಲವಾಗಬಹುದು. ಸಂಬಂಧಗಳ ವಿಚಾರದಲ್ಲಿ ಇಂದು ಮೃದುವಾದ ಮಾತುಗಳು ಮಾಯೆಯಂತೆ ಕೆಲಸ ಮಾಡುತ್ತವೆ. ಮನೆಯವರ ಜೊತೆ ಅಥವಾ ಪ್ರಿಯಜನರ ಜೊತೆ ಸಣ್ಣ ಮಾತಿನ ತಪ್ಪುಗಳಿಂದ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ...
Latest News

ಮೈಸೂರು: ಮನೆಗೆ ನುಗ್ಗಿದ ಚಿರತೆ : ಕುಟುಂಬದವರು ಸುರಕ್ಷಿತ, ಅರಣ್ಯ ಇಲಾಖೆಯಿಂದ ಸೆರೆ

ಮೈಸೂರು: ನಗರದ ಸಿದ್ದಾರ್ಥ ಬಡಾವಣೆಯಲ್ಲಿ ಭಯಾನಕ ಘಟನೆ ಒಂದು ನಡೆದಿದ್ದು, ಮನೆಯೊಳಗೆ ಚಿರತೆ ನುಗ್ಗಿದ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಸಿದ್ದಾರ್ಥ ಬಡಾವಣೆಯ ನಿವಾಸಿ ಸುರೇಶ್ ಅವರ...
1 2 3 64
Page 1 of 64