Latest News

ಅಣುಕು ನ್ಯಾಯಾಲಯ ಸ್ಪರ್ಧೆ: ಕಾನೂನು ವಿದ್ಯಾರ್ಥಿಗಳ ವಾದ ಕೌಶಲ್ಯಕ್ಕೆ ವೇದಿಕೆ

ಮೈಸೂರು:-  ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಭಾನುವಾರ ನಡೆದ ಪ್ರಥಮ ರಾಷ್ಟ್ರೀಯ ಅಣುಕು ನ್ಯಾಯಾಲಯ (Moot Court) ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ, ಕಾನೂನು...
Latest News

ಅಲೋಕ್ ಕುಮಾರ್ ಮೊಬೈಲ್ ಕೊಟ್ಟರು’ ಸುಳ್ಳು ವಿಡಿಯೋ ವೈರಲ್  ಕೈದಿಗಳ ಡ್ರಾಮಾ ಫೇಲ್

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿರುವ ಅಚ್ಚರಿಯ ಘಟನೆ ಜೈಲು ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ವಿಚಾರಣಾಧೀನ ಕೈದಿಗಳು ಮೊಬೈಲ್ ಬಳಸಿಕೊಂಡು ವಿಡಿಯೋ...
Latest News

ಐಸ್‌ಕ್ರೀಂ ಮಾರಾಟಗಾರನ ಶಿರಚ್ಛೇದ  ತಲೆಯನ್ನು ಮನೆಯಲ್ಲಿ ಇಟ್ಟು ಅಡುಗೆ ಮಾಡುತ್ತಿದ್ದ ಆರೋಪಿ ಬಂಧನ

ಬಾರಾಬಂಕಿ (ಉತ್ತರ ಪ್ರದೇಶ), ಮಾರ್ಚ್ 29:- ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಮಾನವೀಯತೆಯನ್ನೇ ನಡುಗಿಸುವಂತಹ ಭೀಕರ ಘಟನೆ ನಡೆದಿದೆ. ಐಸ್‌ಕ್ರೀಂ ಮಾರಾಟಗಾರನನ್ನು ಮಧ್ಯರಸ್ತೆಯಲ್ಲೇ ಕ್ರೂರವಾಗಿ ಕೊ* ಮಾಡಿ, ಶಿರಚ್ಛೇದ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸ್ಥಳೀಯರಲ್ಲಿ ಆತಂಕ ಮತ್ತು ಆಘಾತ ಮೂಡಿಸಿದೆ. ಪರ್ಸಾವಲ್ ಗ್ರಾಮದಲ್ಲಿ ಪ್ರತಿದಿನದಂತೆ ಐಸ್‌ಕ್ರೀಂ ಮಾರಾಟ ಮಾಡಲು ಬಂದಿದ್ದ ಬಬ್ಲು (ಮೃ*) ತನ್ನ ಜೀವನೋಪಾಯಕ್ಕಾಗಿ ದುಡಿಯುತ್ತಿದ್ದ. ಆದರೆ, ಇದೇ ವೇಳೆ ಸ್ಥಳೀಯ ನಿವಾಸಿ ಶಂಕರ್ ಯಾದವ್ ಜೊತೆ ಮಾತಿನ ಚಕಮಕಿ ಆರಂಭವಾಗಿದೆ. ಪ್ರಾರಂಭದಲ್ಲಿ ಸಾಮಾನ್ಯ ವಾಗ್ವಾದದಂತೆ ಕಂಡ ಈ ಘಟನೆ, ಕ್ಷಣಾರ್ಧದಲ್ಲಿ ಹಿಂಸಾತ್ಮಕ ತಿರುವು ಪಡೆದಿದೆ. ಕೋಪದ ಆವೇಶದಲ್ಲಿ ಶಂಕರ್ ಯಾದವ್ ತನ್ನ ಬಳಿ ಇದ್ದ ಕುಡುಗೋಲಿನಿಂದ ಬಬ್ಲು ಮೇಲೆ ದಾಳಿ ನಡೆಸಿದ್ದಾನೆ. ದಾಳಿಯ ತೀವ್ರತೆಗೆ ಬಬ್ಲು ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ಅಲ್ಲಿಯೇ ನಿಲ್ಲದೆ, ಆರೋಪಿ ಅವನ ಗಂಟಲು ಸೀಳಿ, ಸಾರ್ವಜನಿಕರ ಮುಂದೆ...
Latest News

29-03-2026 ರಿಂದ 04-04-2026 ಈ ವಾರದ ರಾಶಿ ಭವಿಷ್ಯ

ಮೇಷ ರಾಶಿ ವಾರಭವಿಷ್ಯ 29-03-2026 ರಿಂದ 04-04-2026 ಈ ವಾರ ಮೇಷ ರಾಶಿಯವರಿಗೆ ಜೀವನ ಒಂದು ನಿಧಾನವಾಗಿ ತಿರುಗುವ ಚಕ್ರದಂತೆ ಅನುಭವವಾಗಬಹುದು. ನೀವು ಓಡಲು ಸಿದ್ಧವಾಗಿದ್ದರೂ ಪರಿಸ್ಥಿತಿಗಳು “ಸ್ವಲ್ಪ ತಾಳು” ಎಂದು ಹೇಳುವಂತಿರುತ್ತವೆ. ಆದರೂ, ಈ ನಿಧಾನಗತಿ ನಿಮ್ಮ ಮುಂದಿನ ದೊಡ್ಡ ಹೆಜ್ಜೆಗಳಿಗೆ ನೆಲಹಾಸು ಹಾಕುತ್ತದೆ. ವಾರದ ಆರಂಭದಲ್ಲಿ ನಿಮ್ಮಲ್ಲಿ ಉತ್ಸಾಹ ಮತ್ತು ಹೊಸ ಆಲೋಚನೆಗಳ ಹೊಳೆ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಭಾನುವಾರ ಮತ್ತು ಸೋಮವಾರದಂದು ಕೆಲಸದ ಬಗ್ಗೆ ಸ್ಪಷ್ಟತೆ ಬರುತ್ತದೆ. ಆಫೀಸ್ ಅಥವಾ ವ್ಯವಹಾರದಲ್ಲಿ ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚಾಗಬಹುದು. ಹಿರಿಯರಿಂದ ಸ್ವಲ್ಪ ಒತ್ತಡ ಇದ್ದರೂ, ನಿಮ್ಮ ಸಾಮರ್ಥ್ಯವನ್ನು ತೋರಿಸಲು ಇದು ಒಳ್ಳೆಯ ಅವಕಾಶ. ಶಾಂತ ಮನಸ್ಸಿನಿಂದ ಕಾರ್ಯನಿರ್ವಹಿಸಿದರೆ ಮೆಚ್ಚುಗೆ ಖಚಿತ. ಮಂಗಳವಾರ ಮತ್ತು ಬುಧವಾರ ಹಣಕಾಸಿನ ವಿಷಯದಲ್ಲಿ ಮಧ್ಯಮ ಫಲಿತಾಂಶ. ಸಣ್ಣ ಪ್ರಮಾಣದ ಲಾಭ ಕಂಡರೂ ಖರ್ಚು ಕೂಡ ಅಷ್ಟೇ ವೇಗವಾಗಿ ಬರಬಹುದು. ಅನಗತ್ಯ ಖರೀದಿಗಳನ್ನು...
Latest News

ಐಪಿಎಲ್ 2026 ಆರಂಭವೇ ಸಿಡಿಲು: ಆರ್‌ಸಿಬಿಗೆ 6 ವಿಕೆಟ್ ಭರ್ಜರಿ ಗೆಲುವು!

ಬೆಂಗಳೂರು, ಮಾ.28: ಐಪಿಎಲ್ 2026ರ ಮೊದಲ ಪಂದ್ಯವೇ ರನ್ ಮಳೆಯೊಂದಿಗೆ ಅಭಿಮಾನಿಗಳಿಗೆ ರೋಮಾಂಚನ ನೀಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್‌ರೈಸರ್ಸ್ ಹೈದರಾಬಾದ್ ( Royal Challengers...
Latest News

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನ ಸುಪಾರಿ ಕೊಟ್ಟು ಫಿನಿಷ್  : ಪತ್ನಿ ಪ್ರಿಯತಮ ಇಬ್ಬರು ಅಂದರ್

ಯಾದಗಿರಿ, ಮಾ.28: ಸುಖವಾಗಿದ್ದ ಕುಟುಂಬ ಜೀವನಕ್ಕೆ ಅಕ್ರಮ ಸಂಬಂಧದ ನೆರಳು ಬೀಳುತ್ತಿದ್ದಂತೆಯೇ, ಕೊನೆಗೆ ಅದೇ ಸಂಬಂಧ ಜೀವವನ್ನೇ ಕಸಿದುಕೊಂಡಿದೆ. ಯಾದಗಿರಿ ಜಿಲ್ಲೆಯ ಚಾಮನಹಳ್ಳಿ ತಾಂಡದಲ್ಲಿ ನಡೆದ ಈ ಭೀಕರ ಪ್ರಕರಣದಲ್ಲಿ, ಪತ್ನಿಯೇ ತನ್ನ ಪತಿಯ ಕೊ* ಗಾಗಿ ಸುಪಾರಿ ನೀಡಿಸಿದ್ದ ಸಂಗತಿ ಬೆಳಕಿಗೆ ಬಂದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಮೃತನನ್ನು ಸಾಗರ್ ರಾಠೋಡ್ (35) ಎಂದು ಗುರುತಿಸಲಾಗಿದ್ದು, ಆತ ಆಟೋ ಚಾಲಕರಾಗಿ ಕುಟುಂಬವನ್ನು ಸಾಗಿಸುತ್ತಿದ್ದನು. ಅವನ ಪತ್ನಿ ಪೂಜಾ ಹಾಗೂ ಅದೇ ಗ್ರಾಮದ ರೆಡ್ಡಿ ರಾಠೋಡ್ ನಡುವೆ ಕಳೆದ ಮೂರು ವರ್ಷಗಳಿಂದ ಅಕ್ರಮ ಸಂಬಂಧವಿದ್ದುದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಸಂಬಂಧದ ವಿಚಾರವಾಗಿ ಕುಟುಂಬದಲ್ಲಿ ಅನೇಕ ಬಾರಿ ಗಲಾಟೆಗಳು ನಡೆದಿದ್ದವು. ಪೂಜಾ ಹಲವು ಬಾರಿ ಪ್ರಿಯತಮನೊಂದಿಗೆ ಮನೆ ಬಿಟ್ಟು ಹೋಗಿದ್ದಳು ಎನ್ನಲಾಗಿದ್ದು, ಗ್ರಾಮಸ್ಥರು ಪಂಚಾಯಿತಿ ನಡೆಸಿ ಸಮಾಧಾನಪಡಿಸಲು ಯತ್ನಿಸಿದ್ದರೂ ಯಾವುದೇ ಬದಲಾವಣೆ ಕಾಣಿಸಿರಲಿಲ್ಲ. ಕೊನೆಗೆ ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿ...
Latest News

ವಿವಿಸಿಇಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ

ಮೈಸೂರು: ಇಲ್ಲಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು (ವಿವಿಸಿಇ)ಯಲ್ಲಿ ಶನಿವಾರ 2023–25ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಎರಡನೇ ಪದವಿ ಪ್ರದಾನ ಸಮಾರಂಭ (ಭಾಗ–2) ಕಾಲೇಜು ಆವರಣದಲ್ಲಿ ಸಂಭ್ರಮದಿಂದ ನೆರವೇರಿತು....
Latest News

ಮದುವೆಯ ನಂತರ ಮೊದಲ ಶೂಟಿಂಗ್: ವಿರೋಶ್ ಜೋಡಿಗೆ ಸೆಟ್‌ನಲ್ಲಿ ಅದ್ಧೂರಿ ಸ್ವಾಗತ

ಅಂಧ್ರಪ್ರದೇಶದ :- ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಚಿತ್ರರಂಗದ ಅಭಿಮಾನಿಗಳ ಕಣ್ಣಲ್ಲಿ ಬಹುಕಾಲದಿಂದ ನೆಲೆಗೊಂಡಿದ್ದ “ವಿರೋಶ್” ಜೋಡಿ ಈಗ ರೀಲ್‌ನಿಂದ ರಿಯಲ್‌ಗೆ ಹೆಜ್ಜೆ ಇಟ್ಟಿದೆ . ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯಾದ ಬಳಿಕ, ಮೊದಲ ಬಾರಿಗೆ ಒಟ್ಟಿಗೆ ಚಿತ್ರೀಕರಣಕ್ಕೆ ಹಾಜರಾಗಿದ್ದು, ಸಿನಿಮಾ ವಲಯದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದೆ. ಅನಂತಪುರದಲ್ಲಿ ಹೊಸ ಆರಂಭ ಅಂಧ್ರಪ್ರದೇಶದ  ಅನಂತಪುರನಲ್ಲಿ ನಡೆಯುತ್ತಿರುವ ರಣಬಲಿ (‘Ranabaali’) ಚಿತ್ರದ ಚಿತ್ರೀಕರಣದಲ್ಲಿ ಈ ಜೋಡಿ ಭಾಗಿಯಾಗಿದ್ದು, ಮದುವೆಯ ನಂತರದ ಮೊದಲ ಪ್ರಾಜೆಕ್ಟ್‌ಗೆ ಭರ್ಜರಿ ಆರಂಭ ನೀಡಿದೆ. ಮದುವೆಯ ಬಳಿಕ ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದ ಈ ಜೋಡಿ, ಇದೀಗ ಮತ್ತೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದೆ.  ಚಿತ್ರತಂಡವು  ಸಾಂಪ್ರದಾಯಿಕ ಸ್ವಾಗತ, ಭಾವನಾತ್ಮಕ ಕ್ಷಣ ಸೆಟ್‌ಗೆ ಬಂದಿಳಿದ ತಕ್ಷಣವೇ ಚಿತ್ರತಂಡವು ಹೊಸ ದಂಪತಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದೆ. ಆರತಿ, ತಿಲಕ ಹಾಗೂ ಹೂಮಾಲೆಗಳೊಂದಿಗೆ...
Latest News

ಸಕಲೇಶಪುರದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಗಲಾಟೆ: ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ, ಕ್ಯಾಮೆರಾಗಳು ಜಖಂ

ಸಕಲೇಶಪುರ, ಮಾ.28: ಪ್ರಕೃತಿ ಸೌಂದರ್ಯಕ್ಕೆ ಪ್ರಸಿದ್ಧವಾಗಿರುವ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ವೇಳೆ ನಡೆದ ಗಲಾಟೆ ಹಿಂಸಾತ್ಮಕ ತಿರುವು ಪಡೆದು, ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ ನಡೆದ ಘಟನೆ ಆತಂಕ ಹುಟ್ಟಿಸಿದೆ. ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆ ಸ್ಥಳೀಯರೊಂದಿಗಿನ ವಾಗ್ವಾದ ಕ್ಷಣಾರ್ಧದಲ್ಲಿ ಗಲಭೆಯಾಗಿ ಮಾರ್ಪಟ್ಟಿದೆ.  ಫ್ರೀ ವೆಡಿಂಗ್ ಶೂಟಿಂಗ್ ಮಧ್ಯೆ ಪುಂಡರ  ದಾಳಿ ಶನಿವಾರ ಮುಂಜಾನೆ ಬೆಂಗಳೂರು ಹಾಗೂ ಹಾಸನದಿಂದ ಬಂದಿದ್ದ ನಾಲ್ಕು ಫೋಟೋಗ್ರಫಿ ತಂಡಗಳು ಬೆಟ್ಟದ ಭೈರವೇಶ್ವರ ದೇಗುಲದ ಸುತ್ತಮುತ್ತಲಿನ ಸುಂದರ ಸ್ಥಳಗಳಲ್ಲಿ ಪ್ರೀ-ವೆಡ್ಡಿಂಗ್ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದವು. ಇದೇ ವೇಳೆ ಸ್ಥಳಕ್ಕೆ ಬಂದ ಕೆಲ ಸ್ಥಳೀಯರು, “ಇದು ಪ್ರವಾಸಿ ತಾಣವಲ್ಲ, ನಮ್ಮ ಭಕ್ತಿ ಕೇಂದ್ರ” ಎಂದು ಹೇಳಿ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತಿನ ಚರ್ಚೆ ತೀವ್ರಗೊಂಡು, ಕೆಲ ಕಿಡಿಗೇಡಿಗಳು ಫೋಟೋಗ್ರಾಫರ್‌ಗಳ ಮೇಲೆ ದೈಹಿಕ ದಾಳಿ ನಡೆಸಿದ್ದಾರೆ. ಹಲ್ಲೆಯಲ್ಲಿ...
Latest News

ಹಳೆಯ ನೆನಪುಗಳು, ಹೊಸ ಸಂಕಲ್ಪ: ಸಾಲಿಗ್ರಾಮ ಕಾಲೇಜಿನಲ್ಲಿ ಅಲ್ಯೂಮ್ನಿ ಸಂಭ್ರಮ : ಡಾ. ಜಿ.ಟಿ. ಮಹೇಶ್

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ.ಮಾ. 28:-ಹಿರಿಯ ವಿದ್ಯಾರ್ಥಿಗಳು ಕಾಲೇಜಿನ ಆಸ್ತಿ ಆದ್ದರಿಂದ ಕಾಲೇಜಿನ ಕೀರ್ತಿ ಮತ್ತು ಯಶಸ್ಸು ಹಿರಿಯ ವಿದ್ಯಾರ್ಥಿಗಳಿಗೆ ಸಲ್ಲಬೇಕಾಗಿದೆ ಎಂದು ಡಾ....
1 2 3 54
Page 1 of 54