Latest News

ಮನಸ್ಸಿಲ್ಲದೆ ಮದುವೆಯಾದ ಗಂಡನ ಬಿಟ್ಟು ಪ್ರೇಮಿಯೊಂದಿಗೆ ಹೋದ ಮಗಳು; ವಾಪಸ್ ಕರೆತಂದು ವಿಷವುಣಿಸಿ ಸುಟ್ಟು ಹಾಕಿದ ಅಪ್ಪ!

ಬೆಳಗಾವಿಯಲ್ಲಿ, ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಓಡಿಹೋದ ಮಗಳನ್ನು, ಕುಟುಂಬದ ಮರ್ಯಾದೆಗಾಗಿ ಪೋಷಕರೇ ಹತ್ಯೆ ಮಾಡಿದ್ದಾರೆ. ಮದುವೆಯಾದ ಎರಡೇ ತಿಂಗಳಿಗೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಯುವತಿಯನ್ನು ಪತ್ತೆಹಚ್ಚಿ, ವಿಷವುಣಿಸಿ ಕೊಂದು, ಸಾಕ್ಷ್ಯನಾಶಕ್ಕಾಗಿ ಶವವನ್ನು ಸುಟ್ಟುಹಾಕಿದ್ದಾರೆ. ಬೆಳಗಾವಿ: ಹೆತ್ತವರಿಗೆ ಮಕ್ಕಳೇ ಆಸ್ತಿ, ಮಕ್ಕಳೇ ಪ್ರಾಣ. ಹೆಣ್ಣುಮಗಳನ್ನಂತೂ ದೇವತೆಯಂತೆ ಕಂಡು, ಸಂಸ್ಕಾರ ನೀಡಿ ಬೆಳೆಸುತ್ತಾರೆ. ಆದರೆ, ಅದೇ ಹೆತ್ತವರು ತಮ್ಮ ಮರ್ಯಾದೆಗಾಗಿ ಹೆತ್ತ ಮಗಳನ್ನೇ ಹತ್ಯೆ ಮಾಡಿದರೆ? ಇಂತಹದ್ದೇ ಒಂದು ಮೈನಡುಗಿಸುವ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ. ಮದುವೆಯಾದ ಎರಡೇ ತಿಂಗಳಿಗೆ ಗಂಡನ ಮನೆ ಬಿಟ್ಟು ಪ್ರಿಯಕರನ ಜೊತೆ ಓಡಿಹೋದಳು ಎಂಬ ಕಾರಣಕ್ಕೆ ಸ್ವಂತ ಕುಟುಂಬದವರೇ ವಿವಾಹಿತೆಯನ್ನು ಕೊಲೆ ಮಾಡಿ, ಗುಟ್ಟಾಗಿ ಶವವನ್ನೂ ಸುಟ್ಟು ಹಾಕಿರುವ ಆಘಾತಕಾರಿ ಸತ್ಯ ಈಗ ಹೊರಬಿದ್ದಿದೆ. 10 ವರ್ಷದ ಪ್ರೀತಿ ಮತ್ತು ವಿರೋಧ: ಹುಕ್ಕೇರಿ ತಾಲೂಕಿನ ನದಿಗುಡಿ ಕ್ಷೇತ್ರದ 24 ವರ್ಷದ ಸತ್ಯವ್ವ ಸಂತೋಷ ಹೆಳವಿ ಈ...
Latest News

“ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ನಿಲುವು ಏನು?” ಮೋದಿ ಕೇಳಿದ ಗುಟ್ಟು ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ :

ಮೈಸೂರು: ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರಮೋದಿ ಅವರು, ಸಿಎಂ ಸಿದ್ದರಾಮಯ್ಯ ಅವರ ಕಿವಿಯಲ್ಲಿ ಗುಟ್ಟಾಗಿ ಕೇಳಿದ ಮಾತು ಈಗ ಬಹಿರಂಗವಾಗಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ವಿವರ ನೀಡಿದ್ದಾರೆ. ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದ ಬಳಿ ಮಾತನಾಡಿದ ಸಿಎಂ, “ಅಂದು ಪ್ರಧಾನಿ ಮೋದಿ ಅವರು ನನ್ನ ಕಿವಿಯಲ್ಲಿ ‘ಮಹಿಳಾ ಮೀಸಲಾತಿ ವಿಚಾರದಲ್ಲಿ ನಿಮ್ಮ ನಿಲುವು ಏನು?’ ಎಂದು ಕೇಳಿದರು. ಅದಕ್ಕೆ ನಾನು ಮಹಿಳಾ ಮೀಸಲಾತಿಗೆ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟವಾಗಿ ಉತ್ತರಿಸಿದೆ” ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟಪಡಿಸಿ, “ನಾವು ಮಹಿಳಾ ಮೀಸಲಾತಿಗೆ ವಿರುದ್ಧವಲ್ಲ. ಆದರೆ ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಕೆಲವು ತಕರಾರುಗಳಿವೆ” ಎಂದು ಹೇಳಿದ್ದಾರೆ. ಅವರ ಪ್ರಕಾರ, ಮಹಿಳಾ ಮೀಸಲಾತಿ ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ....
Latest News

ಪತ್ನಿಯ ಸಹೋದರಿಯ ಮದುವೆಗೆ ಸಜ್ಜಾಗಿದ್ದ  ವೈದ್ಯ ಕೊ* : ಡಾಕ್ಟರ್ ಬರ್ಬರ ಹ*

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿರಸಿ ನಗರದ ಕೆಹೆಚ್‌ಬಿ ಕಾಲೋನಿಯಲ್ಲಿ ಹೃದಯ ಕಲುಕುವ ಹ* ಪ್ರಕರಣ ಬೆಳಕಿಗೆ ಬಂದಿದೆ. ಮೃತ ಪತ್ನಿಯ ಸಹೋದರಿಯನ್ನು ಮದುವೆಯಾಗಲು ಸಿದ್ಧರಾಗಿದ್ದ ವೈದ್ಯರನ್ನು ಅಜ್ಞಾತರು ಬರ್ಬರವಾಗಿ ಹ*ಗೈದಿರುವ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಹ*ಯಾದವರು ಡಾ. ರಮೇಶ್ ಕಲಗುಟಕರ್ (51) ಎಂದು ಗುರುತಿಸಲಾಗಿದೆ. ಎಂಟು ತಿಂಗಳ ಹಿಂದೆ ಅವರ ಪತ್ನಿ ಸಾವನ್ನಪ್ಪಿದ್ದು, ಆ ಬಳಿಕ ಕುಟುಂಬದ ಒಪ್ಪಿಗೆ ಪಡೆದು ಪತ್ನಿಯ ಸಹೋದರಿಯನ್ನೇ ವಿವಾಹವಾಗಲು ನಿರ್ಧರಿಸಿದ್ದರು. ಇದೇ ಸೋಮವಾರ (ಏಪ್ರಿಲ್ 20) ಮದುವೆ ನಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಮದುವೆ ಸಿದ್ಧತೆಗಳು ಜೋರಾಗಿದ್ದವು. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಡಾ. ರಮೇಶ್ ಅವರು ಮದುವೆಗಾಗಿ ಬ್ಯಾಂಕ್‌ನಿಂದ ಚಿನ್ನಾಭರಣಗಳನ್ನು ತೆಗೆದುಕೊಂಡು ಬಂದಿದ್ದರು. ಇದೇ ವಿಚಾರವನ್ನು ಗಮನದಲ್ಲಿಟ್ಟುಕೊಂಡು ದರೋಡೆ ಉದ್ದೇಶದಿಂದಲೇ ಹ* ನಡೆದಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಮನೆ ಒಳಗೇ ದಾಳಿ ನಡೆಸಿರುವ ಸುಳಿವುಗಳು ಸಿಕ್ಕಿದ್ದು, ಪರಿಚಿತರ ಕೈವಾಡವೂ...
Latest News

20-04-2026 ರ ಬಸವ ಜಯಂತಿ ವಿಶೇಷ ರಾಶಿ ದಿನಭವಿಷ್ಯ

ಮೇಷ (Aries) 20-04-2026 ಬಸವ ಜಯಂತಿ ವಿಶೇಷ ದಿನಭವಿಷ್ಯ ಬಸವ ಜಯಂತಿ ಪ್ರಯುಕ್ತ ನಿಮ್ಮ ದಿನಕ್ಕೆ ಒಂದು ವಿಶೇಷ ಶಾಂತಿ ಮತ್ತು ಆಧ್ಯಾತ್ಮಿಕ ಸ್ಪರ್ಶ ಸಿಗಲಿದೆ. ಬೆಳಿಗ್ಗೆಯಿಂದಲೇ ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಧೈರ್ಯ ಹೆಚ್ಚಾಗುತ್ತದೆ, ಆದರೆ ಅತಿವೇಗದಲ್ಲಿ ನಡೆಯುವ ನಿರ್ಧಾರಗಳನ್ನು ಸ್ವಲ್ಪ ತಡೆಯುವುದು ಒಳಿತು. ಕೆಲಸದ ಕ್ಷೇತ್ರದಲ್ಲಿ, ಇಂದು ನಿಮ್ಮ ಶ್ರಮ ಗಮನ ಸೆಳೆಯುತ್ತದೆ. ಹಿರಿಯರಿಂದ ಮೆಚ್ಚುಗೆ ಸಿಗುವ ಸಾಧ್ಯತೆ ಇದೆ. ಹೊಸ ಪ್ರಾಜೆಕ್ಟ್ ಅಥವಾ ಜವಾಬ್ದಾರಿ ನಿಮ್ಮ ಕಡೆ ಬರಬಹುದು. ಹಣಕಾಸಿನಲ್ಲಿ ಸಾಮಾನ್ಯ ಸ್ಥಿತಿ ಇರುತ್ತದೆ, ಆದರೆ ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿದರೆ ಉತ್ತಮ. ಕುಟುಂಬದ ವಿಷಯದಲ್ಲಿ, ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ. ಬಸವ ಜಯಂತಿಯ ಕಾರಣದಿಂದ ಮನೆದಲ್ಲಿ ಪೂಜೆ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಇದರಿಂದ ಮನಸ್ಸಿಗೆ ಶಾಂತಿ ಮತ್ತು ಧೈರ್ಯ ದೊರೆಯುತ್ತದೆ. ಪ್ರೇಮ ಜೀವನದಲ್ಲಿ,...
Latest News

ಗೃಹಿಣಿ ಸಾವಿನ ಹಿಂದೆ ಅಕ್ರಮ ಸಂಬಂಧದ ಸುಳಿವು :  pendrive ಲ್ಲಿ ಸತ್ಯ? ಪರಸ್ತ್ರೀ ಸಹವಾಸದಿಂದ ಹತ್ಯೆಗೈದ್ನಾ ಪತಿ?

ದಾವಣಗೆರೆಯಲ್ಲಿ ಮಹಿಳೆಯ ಅನುಮಾನಾಸ್ಪದ ಸಾವು: ಪತಿಯ ವಿರುದ್ಧ ಹತ್ಯೆ ಆರೋಪ, ಪರಸ್ತ್ರೀ ಸಹವಾಸದ ಸುಳಿವು ದಾವಣಗೆರೆ: ಮನೆಯೊಳಗೆ 26 ವರ್ಷದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯ ರೇಲ್ವೆ ಕ್ವಾಟರ್ಸ್ನಲ್ಲಿ ನಡೆದಿದೆ. ಕಾವ್ಯಾ ಎಂಬ ಯುವತಿ ಸಾವನ್ನಪ್ಪಿದ್ದು, ಪತಿ ಮನು ವಿರುದ್ಧ ಪರಸ್ತ್ರೀ ಸಹವಾಸ, ವರದಕ್ಷಿಣೆ ಕಿರುಕುಳ ಹಾಗೂ ಹಲ್ಲೆ ಮಾಡಿ ಕೊಲೆಗೈದಿದ್ದಾನೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಮೃತ ಕಾವ್ಯಾ ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದ ಬಡ ಕುಟುಂಬದವರು. ಎರಡು ವರ್ಷಗಳ ಹಿಂದೆ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದ ಮನುವಿನೊಂದಿಗೆ ವಿವಾಹವಾಗಿದ್ದರು. ಮನು ಅಂಚೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಕಾರಣ, ಕಾವ್ಯಾಳ ಪೋಷಕರು ಸಾಲ ಮಾಡಿ ಸುಮಾರು ₹2.50 ಲಕ್ಷ ನಗದು ಹಾಗೂ 70 ಗ್ರಾಂ ಚಿನ್ನ ನೀಡಿ ಮದುವೆ ಮಾಡಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮದುವೆಯ ಆರಂಭದಲ್ಲಿ ಜೀವನ ಸರಾಗವಾಗಿದ್ದರೂ,...
Latest News

ಕೆ.ಆರ್.ನಗರದಲ್ಲಿ ಕಾವೇರಿ ನದಿಯಲ್ಲಿ ದಾರುಣ ದುರಂತ: ಉರುಸ್ ಗೆ ಬಂದ 8ರಲ್ಲಿ 6 ಮಂದಿ ಸಾವು, ಇಬ್ಬರ ಸ್ಥಿತಿ ಗಂಭೀರ

ಕೆ.ಆರ್.ನಗರ: ಕಾವೇರಿ ನದಿಯಲ್ಲಿ ಈಜಲು ಇಳಿದ ಎಂಟು ಮಂದಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಇಬ್ಬರನ್ನು ಗಂಭೀರ ಸ್ಥಿತಿಯಲ್ಲಿ ಮೈಸೂರಿನ ಆಸ್ಪತ್ರೆಗೆ ರವಾನಿಸಿರುವ ದುರ್ಘಟನೆ ಕೆ.ಆರ್.ನಗರ ಪಟ್ಟಣ ಸಮೀಪದ...
Latest News

ತುಮಕೂರು: ಮಗಳ ಪ್ರಿಯಕರನ ಜೊತೆ ಸೇರಿ ಅಳಿಯನ ಹತ್ಯೆ : ತಾಯಿ, ತಮ್ಮ ಸೇರಿ ಮೂವರು ಬಂಧನ

ತುಮಕೂರು, ಏಪ್ರಿಲ್ 19: ಮಗಳ ಸಾವಿನ ಬಳಿಕ ಕುಟುಂಬದೊಳಗಿನ ಅಕ್ರಮ ಸಂಬಂಧ ಮತ್ತು ವೈಮನಸ್ಸು ಕೊನೆಗೆ ರಕ್ತಪಾತಕ್ಕೆ ಕಾರಣವಾದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದಂಡೀಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಗಳ ಪ್ರಿಯಕರನ ಜೊತೆ ಸೇರಿ ಆಕೆಯ ತಾಯಿ ಹಾಗೂ ಸಹೋದರನೇ ಅಳಿಯನನ್ನು ಕೊಲೆ ಮಾಡಿರುವ ಪ್ರಕರಣವನ್ನು ಕೊಡಿಗೇನಹಳ್ಳಿ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು 32 ವರ್ಷದ ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ. ಕೆಲ ವರ್ಷಗಳ ಹಿಂದೆ ನರಸಿಂಹಮೂರ್ತಿ ಸುಜಾತಾಳನ್ನು ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು ವಿವಾಹವಾಗಿದ್ದ. ಮದುವೆಯ ನಂತರ ಸುಜಾತಾ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಸೇರಿದ್ದಳು. ಈ ವೇಳೆ ಅಮರ್ ಎಂಬ ಯುವಕನ ಪರಿಚಯವಾಗಿದ್ದು, ನಂತರ ಅವರಿಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಈ ಮಧ್ಯೆ ಸುಜಾತಾ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಕೆಲವು ತಿಂಗಳ ಹಿಂದೆ ಅನಾರೋಗ್ಯದಿಂದ ಸುಜಾತಾ...
Latest News

ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ, ಸಂಘಗಳಿಗೆ ದೇಣಿಗೆ : ಶೇಷಾದ್ರಿಯ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಏ. 19:- ಬಸವಣ್ಣನವರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡಿರುವ ಉದ್ಯಮಿ ಮಾಜಿ ಪುರಸಭಾ ಸದಸ್ಯ ಜಿ ಶೇಷಾದ್ರಿ ಅವರು ಇತರೆ...
Latest News

ಪ್ರಿಯಕರ ಜೊತೆ ಸೇರಿ ಪತಿಯ ಹತ್ಯೆ : ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಪ್ರಕರಣ

ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ನಡೆದ ಈ ಹತ್ಯೆ ಪ್ರಕರಣ ಮೊದಲಿಗೆ ಅನುಮಾನಾಸ್ಪದ ಸಾವು ಎಂದು ಕಾಣಿಸಿಕೊಂಡಿತ್ತು. ಆದರೆ ಪೊಲೀಸರು ನಡೆಸಿದ ಸೂಕ್ಷ್ಮ ತನಿಖೆಯಿಂದ ಇದು ಪೂರ್ವಯೋಜಿತ ಕೊಲೆ ಎಂಬುದು ಬಹಿರಂಗವಾಗಿದೆ. ಮೃತ ವ್ಯಕ್ತಿಯನ್ನು ಕುರ್ಣೇಗಾಲ ಗ್ರಾಮದ ಜವರಪ್ಪ ಎಂದು ಗುರುತಿಸಲಾಗಿದೆ. ಅವರಿಗೆ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಅಮೃತಾ ಜೊತೆ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕುಟುಂಬದಲ್ಲಿ ಸಾಮಾನ್ಯವಾಗಿ ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆಗಳು ನಡೆಯುತ್ತಿದ್ದುದು ತಿಳಿದುಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಅಮೃತಾ ಮತ್ತು ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32) ನಡುವೆ ಅಕ್ರಮ ಸಂಬಂಧವಿತ್ತು. ಈ ಸಂಬಂಧಕ್ಕೆ ಪತಿ ಜವರಪ್ಪ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ, ಇಬ್ಬರೂ ಸೇರಿ ಅವನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು. ಸುಮಾರು 12 ದಿನಗಳ ಹಿಂದೆ ಅಮೃತಾ ತನ್ನ ಮಕ್ಕಳೊಂದಿಗೆ ತವರಿನ ಮನೆಗೆ ಹಬ್ಬದ ನಿಮಿತ್ತ ತೆರಳಿದ್ದಳು. ಏಪ್ರಿಲ್ 16ರಂದು ಜವರಪ್ಪ...
1 2 3 65
Page 1 of 65