ಮೈಸೂರು: ನಗರದ ಸಿದ್ದಾರ್ಥ ಬಡಾವಣೆಯಲ್ಲಿ ಭಯಾನಕ ಘಟನೆ ಒಂದು ನಡೆದಿದ್ದು, ಮನೆಯೊಳಗೆ ಚಿರತೆ ನುಗ್ಗಿದ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಸಿದ್ದಾರ್ಥ ಬಡಾವಣೆಯ ನಿವಾಸಿ ಸುರೇಶ್ ಅವರ...
ವರದಿ:ರವಿಚಂದ್ರ ಬೂದಿತಿಟ್ಟು. ಪಿರಿಯಾಪಟ್ಟಣ: ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಕಂದೇಗಾಲ ವತಿಯಿಂದ ಎ.18 ರಂದು ಪಿರಿಯಾಪಟ್ಟಣದಲ್ಲಿ ಶನಿ ಪ್ರಭಾವ ಅಥವಾ ರಾಜ ವಿಕ್ರಮ ಎಂಬ ಪೌರಾಣಿಕ ನಾಟಕ ನಡೆಯಲಿದೆ. ಅಂದು ರಾತ್ರಿ 7.30 ಗಂಟೆಗೆ ಪಿರಿಯಾಪಟ್ಟಣದ ಶ್ರೀ ಮಸಣಿಕಮ್ಮ ದೇವಾಲಯ ಬಳಿ ಶ್ರೀ ಶನಿ ದೇವರ ಪೂಜಾ ಕಾರ್ಯಕ್ರಮದ 16ನೇ ವರ್ಷದ ಪ್ರಯುಕ್ತ ಸಾಲಿಗ್ರಾಮದ ಶ್ರೀ ನಟರಾಜ ಡ್ರಾಮಾ ಸೀನ್ಸ್ ಭವ್ಯ ರಂಗ ಮಂಟಪದಲ್ಲಿ ನಾಟಕ ನಡೆಯಲಿದ್ದು ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನಿತಿನ್ ವೆಂಕಟೇಶ್ ಅವರು ಹಾಗೂ ಅಧ್ಯಕ್ಷತೆಯನ್ನು ಮೈಮುಲ್ ಮಾಜಿ ಅಧ್ಯಕ್ಷರಾದ ಪಿ.ಎಮ್ ಪ್ರಸನ್ನ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ, ಪೂಜಾ ಕಾರ್ಯಕ್ರಮ ಅಂಗವಾಗಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ...
ವರದಿ:ರವಿಚಂದ್ರ ಬೂದಿತಿಟ್ಟು ಬೆಟ್ಟದಪುರ : ಇಲ್ಲಿನ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಪ್ರತಿ ಕ್ವಿಂಟಲ್ ಗೆ 4 ಕೆ.ಜಿ ಹೆಚ್ಚುವರಿ ಕಡಿತ ಮಾಡುತ್ತಿರುವ ಹಿನ್ನೆಲೆಯಲ್ಲಿ, ಮಾಜಿ ಶಾಸಕ ಕೆ.ಮಹದೇವ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಹೆಚ್ಚುವರಿ ಕಡಿತವನ್ನು ಕಡಿಮೆ ಮಾಡಿ ಕ್ವಿಂಟಾಲಿಗೆ 2 ಕೆ.ಜಿಗೆ ಅಂತಿಮಗೊಳಿಸುವಂತೆ ಖರೀದಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಪಿಎಂಸಿ ಆವರಣದಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳ ಕೊರತೆ ಇದ್ದು,ಮುಂದಿನ ಬಾರಿ ರಾಗಿ ಖರೀದಿ ಕೇಂದ್ರ ಆರಂಭಕ್ಕೂ ಮೊದಲು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕೂಲಿ ಕಾರ್ಮಿಕರಿಗೆ ಇನ್ನೂ ಕೂಲಿ ಹಣ ಪಾವತಿ ಆಗದೇ ಇರುವ ಬಗ್ಗೆ ಗಮನಕ್ಕೆ ಬಂದಿದೆ, ಸಂಬಂಧಪಟ್ಟ ಗುತ್ತಿಗೆದಾರರು ತಕ್ಷಣವೇ ಬಾಕಿ ಹಣ ಪಾವತಿಸುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಒದಗಿಸುವುದರ...
ವರದಿ:ರವಿಚಂದ್ರ ಬೂದಿತಿಟ್ಟು. ಪಿರಿಯಾಪಟ್ಟಣ: ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಗುದ್ದಲಿ ಪೂಜೆ ನೆರವೇರಿಸಲು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ದಿನಾಂಕ 21-04-2026 ರಂದು ಪಿರಿಯಾಪಟ್ಟಣ...
ವರದಿ: ರವಿಚಂದ್ರ ಬೂದಿತಿಟ್ಟು ಪಿರಿಯಾಪಟ್ಟಣ : ಅಖಿಲ ಭಾರತ ಸರ್ಕಾರಿ ಐಟಿಐಗಳ ನೌಕರರ ಸಂಘ (ರಿ.) (ಎನ್ಎಫ್ಜಿಐಟಿಐಇಎ) ವತಿಯಿಂದ ಪಂಜಾಬ್-ಚಂಡಿಗಢದಲ್ಲಿ ನಡೆದ ಅಖಿಲ ಭಾರತ ಸಮ್ಮೇಳನದಲ್ಲಿ ಪಿರಿಯಾಪಟ್ಟಣ...
ನವದೆಹಲಿ:- ಮದುವೆಯ ಮೊದಲ ರಾತ್ರಿ ಗಂಡನಿಗೆ ಅಚ್ಚರಿ ನೀಡಿದ ವಧುವಿನ ಬೇಡಿಕೆ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ದೆಹಲಿ ಸಮೀಪ ನಡೆದ ಈ ಪ್ರಕರಣದಲ್ಲಿ, ನವವಿವಾಹಿತ ವಧು ತನ್ನ ಪತಿಯಿಂದ ₹90 ಲಕ್ಷ ಹಣ ನೀಡಿದರೆ ಮಾತ್ರ ದೈಹಿಕ ಸಂಬಂಧಕ್ಕೆ ಅವಕಾಶ ಎಂದು ಷರತ್ತು ವಿಧಿಸಿದ್ದಾಳೆ ಎಂಬುದು ಬಹಿರಂಗವಾಗಿದೆ. ಮಾಹಿತಿಯ ಪ್ರಕಾರ, ಜಗದೀಶಪುರ ಮೂಲದ ಯುವಕನೊಬ್ಬ ಹತ್ರಾಸ್ನ ಯುವತಿಯನ್ನು ಕುಟುಂಬದ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದ. ಮದುವೆ ಕಾರ್ಯಕ್ರಮಗಳು ಸಮರ್ಪಕವಾಗಿ ಮುಗಿದ ಬಳಿಕ, ಮೊದಲ ರಾತ್ರಿ ಸಿದ್ಧತೆಗಳನ್ನು ಕುಟುಂಬಸ್ಥರು ಮಾಡಿಕೊಂಡಿದ್ದರು. ಆದರೆ, ಮಲಗುವ ಕೋಣೆಯಲ್ಲಿ ನಡೆದ ಘಟನೆ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿತು. ವಧು ತನ್ನ ಗಂಡನಿಗೆ “ನನ್ನನ್ನು ಮುಟ್ಟಬೇಕಾದರೆ ₹90 ಲಕ್ಷ ನೀಡಬೇಕು” ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಈ ಅಸಾಧಾರಣ ಬೇಡಿಕೆಯನ್ನು ಕೇಳಿ ಗಂಡ ಶಾಕ್ಗೆ ಒಳಗಾಗಿದ್ದಾನೆ. ಆತ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ, ಇಬ್ಬರ ನಡುವೆ ತೀವ್ರ...
ಮೇಷ (Aries) 16-04-2026 ದಿನಭವಿಷ್ಯ ನಿಮ್ಮ ದಿನವು ವೇಗದ ನದಿ ಹರಿವಿನಂತಿರುತ್ತದೆ ಆದರೆ ಅದರೊಳಗೆ ದಿಕ್ಕು ಸರಿಯಾಗಿ ಹಿಡಿದವರು ಮಾತ್ರ ಗುರಿ ಸೇರುತ್ತಾರೆ. ಬೆಳಿಗ್ಗೆಯಿಂದಲೇ ಕೆಲಸಗಳ ಒತ್ತಡ ಸ್ವಲ್ಪ ಹೆಚ್ಚಾಗಬಹುದು. ನೀವು ಕೈಗೆತ್ತಿಕೊಂಡಿರುವ ಕೆಲಸಗಳಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಆದರೆ ಆತುರದಿಂದ ತೆಗೆದುಕೊಂಡ ನಿರ್ಧಾರಗಳು ನಂತರ ತಿದ್ದಿಕೊಳ್ಳಬೇಕಾದ ಪರಿಸ್ಥಿತಿಯನ್ನು ತರಬಹುದು. ಆದ್ದರಿಂದ, “ಒಮ್ಮೆ ಯೋಚಿಸಿ, ನಂತರ ಕಾರ್ಯ” ಎಂಬ ನಿಲುವು ಇಂದಿನ ದಿನಕ್ಕೆ ಅತ್ಯುತ್ತಮ. ಉದ್ಯೋಗ ಅಥವಾ ವ್ಯವಹಾರ ಕ್ಷೇತ್ರದಲ್ಲಿ, ಹಿರಿಯರಿಂದ ಅಥವಾ ಮೇಲಾಧಿಕಾರಿಗಳಿಂದ ನಿರೀಕ್ಷೆಗಳು ಹೆಚ್ಚಾಗುತ್ತವೆ. ನೀವು ನಿಮ್ಮ ಸಾಮರ್ಥ್ಯವನ್ನು ತೋರಿಸಲು ಇದು ಒಳ್ಳೆಯ ಅವಕಾಶ. ಆದರೆ ಎಲ್ಲ ಕೆಲಸವನ್ನು ಒಬ್ಬರೇ ಹೊತ್ತುಕೊಳ್ಳುವ ಬದಲು, ತಂಡದವರ ಸಹಕಾರ ಪಡೆಯುವುದು ಸೂಕ್ತ. ಹಣಕಾಸಿನ ವಿಷಯದಲ್ಲಿ ಸಣ್ಣ ಮಟ್ಟಿನ ಲಾಭ ಕಾಣಬಹುದು, ಆದರೆ ದೊಡ್ಡ ಹೂಡಿಕೆ ಅಥವಾ ಸಾಲದ ವಿಷಯದಲ್ಲಿ ಇಂದು ಮುಂದುವರಿಯುವುದು ಸೂಕ್ತವಲ್ಲ. ಇದನ್ನೂ...
ಚಿಕ್ಕೋಡಿ: ಸಮಾಜದ ಕಠಿಣ ಮನೋಭಾವ ಇನ್ನೂ ಜೀವಂತವಿದೆ ಎನ್ನುವಂತೆ ಹುಕ್ಕೇರಿ ತಾಲೂಕಿನ ನದಿಗುಡಿಕೇತರ ಗ್ರಾಮದಲ್ಲಿ ಅಮಾನವೀಯ ಮರ್ಯಾದಾ ಹ* ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸಿದ ಯುವಕನೊಂದಿಗೆ ತೆರಳಿದ್ದ ಮಹಿಳೆಯನ್ನು ಕುಟುಂಬಸ್ಥರೇ ಕರೆತಂದು ವಿಷ ಕುಡಿಸಿ ಕೊ* ಮಾಡಿ, ಬಳಿಕ ಸಾಕ್ಷ್ಯ ನಾಶಕ್ಕಾಗಿ ಶವವನ್ನು ಸುಟ್ಟಿರುವ ಘಟನೆ ಎಲ್ಲೆಡೆ ಆತಂಕ ಹುಟ್ಟಿಸಿದೆ. ಕೊ* ಯಾದ ಮಹಿಳೆಯನ್ನು ಸತ್ತೆವ್ವಾ ಹೆಳವರ್ ಎಂದು ಗುರುತಿಸಲಾಗಿದೆ. ಆಕೆ ಇದೇ ಗ್ರಾಮದ ಕೃಷ್ಣಾ ಪಾಟೀಲ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಕುಟುಂಬಸ್ಥರು ನಾಲ್ಕು ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಹನಬರಟ್ಟಿ ಗ್ರಾಮದ ಸಂತೋಷ ಹೇಳವಿ ಎಂಬಾತನೊಂದಿಗೆ ಆಕೆಯ ವಿವಾಹ ಮಾಡಿಸಿದ್ದರು. ಆದರೆ ಮದುವೆಯಾದ ನಂತರವೂ ಸತ್ತೆವ್ವಾ ತನ್ನ ಪ್ರೀತಿಯ ಸಂಬಂಧವನ್ನು ಮುಂದುವರಿಸಿಕೊಂಡಿದ್ದಳು. ಗಂಡನ ಮದ್ಯಪಾನದ ಅಭ್ಯಾಸ ಹಾಗೂ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ, ಫೆಬ್ರವರಿ 17ರಂದು ಸತ್ತೆವ್ವಾ ಗಂಡನ ಮನೆಯಿಂದ ಹೊರಬಂದು ಕೃಷ್ಣಾ ಪಾಟೀಲ್...
ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಏ.15:- ಪ್ರತಿಮೆಗಳನ್ನು ನಿರ್ಮಿಸುವುದರ ಜೊತೆಗೆ ಆ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ಸಾಗಿಸಿದರೆ ಆದರ್ಶಮಯ ಬದುಕು ನಮ್ಮದಾಗಲಿದೆ ಎಂದು ಶಾಸಕ ಡಿ ರವಿಶಂಕರ್ ಹೇಳಿದರು. ಸಾಲಿಗ್ರಾಮ ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಗೂ ಸಂಗೋಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಪಡಿಸಿ ನಂತರ ಮಾತನಾಡಿದ ಅವರು ರಾಯಣ್ಣ ಎಂದು ಜಾತಿ ಧರ್ಮಕ್ಕೆ ಸೀಮಿತವಾದವನಲ್ಲ ಅವರು ಸ್ವಾತಂತ್ರ್ಯದ ಮೊದಲ ಹೋರಾಟಗಾರ ಅವರ ಪ್ರತಿಮೆಯನ್ನು ಸ್ಥಾಪಿಸಿ ಪೂಜಿಸಿದರೆ ಸಾಲದು ಅವರ ಜೀವನ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಲಕ್ಷ್ಮಿಪುರ ಗ್ರಾಮದಲ್ಲಿ ಹಿಂದಿನಿಂದಲೂ ನನ್ನನ್ನು ಹಾಗೂ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದು ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯನಾದ ದಿನದಿಂದಲೂ ಗ್ರಾಮದ ಅಭಿವೃದ್ಧಿಗೆ ಕಟಿಬದ್ಧವಾಗಿದ್ದು ಈ ಹಿನ್ನಲೆಯಲ್ಲಿ ಇಂದು ಗ್ರಾಮಕ್ಕೆ ನೂತನವಾಗಿ ಪಶು ಆಸ್ಪತ್ರೆ ಚಿಕ್ಕನಾಯಕನಹಳ್ಳಿ, ಲಕ್ಷ್ಮೀಪುರ ನಡುವಿನ ಸಂಪರ್ಕ ರಸ್ತೆ ಗುದ್ದಲಿ...