Latest News

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಸಗೊಬ್ಬರ ಮತ್ತು ಬಿತ್ತನೆ ಬೀಜ, ಕೀಟನಾಶಕಗಳ ಮಾರಾಟಗಾರರ ಸಂಘದಿಂದ ಪ್ರತಿಭಟನೆ.,

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಸಗೊಬ್ಬರ ಮತ್ತು ಬಿತ್ತನೆ ಬೀಜ, ಕೀಟನಾಶಕಗಳ ಮಾರಾಟಗಾರರ ಸಂಘದಿಂದ ಪ್ರತಿಭಟನೆ.,   ವರದಿ: ರವಿಚಂದ್ರ ಬೂದಿತಿಟ್ಟು ಪಿರಿಯಾಪಟ್ಟಣ:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ...
Latest News

135ನೇ ಅಂಬೇಡ್ಕರ್ ಜಯಂತಿ: ಬಲಗೈ ಸಮುದಾಯಗಳ ಒಕ್ಕೂಟದಿಂದ ಭವ್ಯ ಕಾರ್ಯಕ್ರಮ

ವರದಿ: ರವಿಚಂದ್ರ ಬೂದಿತಿಟ್ಟು ಪಿರಿಯಾಪಟ್ಟಣ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನೋತ್ಸವವನ್ನು  ತಾಲೂಕು ಆಡಳಿತದ ಜೊತೆಗೆ ಬಲಗೈ ಸಮುದಾಯಗಳ  ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಈರಯ್ಯ   ತಿಳಿಸಿದರು. ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮಕ್ಕೆ ಬಹುಜನ ಜ್ಞಾನಪ್ರಕಾಶ ಸ್ವಾಮೀಜಿ, ಬೋಧಿ ರತ್ನ ಬಂತೇಜಿರವರು, ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ. ವೆಂಕಟೇಶ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹಚ್. ಸಿ ಮಾದೇವಪ್ಪ, ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಎಂ. ಪ್ರಿಯಾಂಕ ಖರ್ಗೆ, ವಿಧಾನಪರಿಷತ್ ಸದಸ್ಯರಾದ  ಕೆ. ಶಿವಕುಮಾರ್, ಅರಗು ಮತ್ತು ಬಣ್ಣದ ಕಾರ್ಖಾನೆ ನಿಗಮ ಮಂಡಳಿ ಅಧ್ಯಕ್ಷರಾದ ಹಚ್. ಡಿ ಗಣೇಶ್, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನಿತಿನ್ ವೆಂಕಟೇಶ್, ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ...
Latest News

” ದಾನ ಮಾಡಿದಷ್ಟು ಮೇಲೆ : ವಿಜಯೇಂದ್ರ ಆಚಾರ್ಯ “

 ಮೈಸೂರು:- ನಗರದ ಜಯನಗರದಲ್ಲಿರುವ ಅಂಬ್ರಾಣಿ ಗುರುಕುಲದ ವಿದ್ಯಾರ್ಥಿನಿ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್, ಡ್ರೈ ಫ್ರೂಟ್ಸ್, ಹಣ್ಣು ಹಂಪಲು  ವಿತರಿಸುವ...
Latest News

ಬೈಲುಕುಪ್ಪೆಯ ‘ಶತಾಕ್ಷಿ ವನ’ಕ್ಕೆ ಪ್ರಧಾನಿಯರ ಮೆಚ್ಚುಗೆ – ಮನ್ ಕಿ ಬಾತ್‌ನಲ್ಲಿ ಉಲ್ಲೇಖ

ವರದಿ: ರವಿಚಂದ್ರ ಬೂದಿತಿಟ್ಟು. ಪಿರಿಯಾಪಟ್ಟಣ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ ಟಿಬೆಟಿಯನ್ ಶಿಬಿರದಲ್ಲಿ ರೂಪುಗೊಂಡಿರುವ ‘ಶತಾಕ್ಷಿ ವನ’ ಕಿರು ಅರಣ್ಯ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ...
Latest News

27-04-2026 ರ ರಾಶಿ ದಿನಭವಿಷ್ಯ

ಮೇಷ (Aries) 27-04-2026, ಸೋಮವಾರದ ದಿನಭವಿಷ್ಯ ನಿಮ್ಮ ದಿನವು ಒಂದು “ಸ್ಟಾರ್ಟ್ ಬಟನ್” ಒತ್ತಿದಂತೆ ಆರಂಭವಾಗುತ್ತದೆ ಚುರುಕು, ಸ್ಪಷ್ಟತೆ ಮತ್ತು ಸ್ವಲ್ಪ ಒತ್ತಡದ ಮಿಶ್ರಣ. ಬೆಳಿಗ್ಗೆ ಕೆಲಸದ ಬಗ್ಗೆ ಹೆಚ್ಚು ಯೋಚನೆಗಳು ಬರುತ್ತವೆ, ಆದರೆ ಅವುಗಳಲ್ಲಿ ಯಾವುದು ಮುಖ್ಯ ಅನ್ನೋದನ್ನು ಆರಿಸಿಕೊಳ್ಳುವುದು ಮುಖ್ಯ. ತುರ್ತು ನಿರ್ಧಾರಗಳಿಗೆ ಹೋಗಬೇಡಿ; ಒಂದು ಸಣ್ಣ ತಾಳ್ಮೆ ದೊಡ್ಡ ಸಮಸ್ಯೆಯನ್ನು ತಪ್ಪಿಸಬಹುದು. ಉದ್ಯೋಗದಲ್ಲಿರುವವರಿಗೆ ಇಂದು ಮೇಲಾಧಿಕಾರಿಗಳ ಗಮನ ಸೆಳೆಯುವ ಅವಕಾಶ ಸಿಗಬಹುದು. ನಿಮ್ಮ ಐಡಿಯಾಗಳು ಹೊಸದಾಗಿ ಕಾಣುತ್ತವೆ, ಆದರೆ ಅವನ್ನು ಸರಿಯಾಗಿ ಪ್ರಸ್ತುತಪಡಿಸುವುದು ಮುಖ್ಯ. ವ್ಯವಹಾರದಲ್ಲಿ ಇರುವವರು ಹಣಕಾಸಿನ ವ್ಯವಹಾರಗಳಲ್ಲಿ ಡಬಲ್ ಚೆಕ್ ಮಾಡಬೇಕು ಸಣ್ಣ ತಪ್ಪು ದೊಡ್ಡ ಪರಿಣಾಮ ಕೊಡಬಹುದು. ವೈಯಕ್ತಿಕ ಜೀವನದಲ್ಲಿ, ಕುಟುಂಬದವರ ಜೊತೆ ಸಣ್ಣ ಮಾತಿನ ಚರ್ಚೆಗಳು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ನೇರ ಸ್ವಭಾವ ಕೆಲವೊಮ್ಮೆ ಕಟುವಾಗಿ ತೋರುತ್ತದೆ, ಆದ್ದರಿಂದ ಮಾತುಗಳಲ್ಲಿ ಮೃದುವಾಗಿರಿ. ಸ್ನೇಹಿತರಿಂದ ಒಳ್ಳೆಯ ಸಲಹೆ...
Latest News

26-04-2026 ರ ರಾಶಿ ವಾರಭವಿಷ್ಯ

ಮೇಷ (Aries) ಏಪ್ರಿಲ್ 26 ರಿಂದ ಮೇ 2, 2026 ವಾರಭವಿಷ್ಯ ಈ ವಾರ ನಿಮ್ಮ ಜೀವನ ಒಂದು ವೇಗದ ಬೈಕ್ ರೈಡ್ ತರ ಇರಬಹುದು ವೇಗವೂ ಇರುತ್ತದೆ, ಕೆಲವೊಮ್ಮೆ ಬ್ರೇಕ್ ಹಾಕಬೇಕಾದ ಕ್ಷಣಗಳೂ ಬರುತ್ತವೆ. ಏಪ್ರಿಲ್ ತಿಂಗಳ ಕೊನೆಯ ವಾರವಾದ್ದರಿಂದ, ನೀವು ಈ ತಿಂಗಳಲ್ಲಿ ಮಾಡಿದ್ದ ಪ್ರಯತ್ನಗಳ ಫಲ ನಿಧಾನವಾಗಿ ಗೋಚರಿಸಲು ಶುರುವಾಗುತ್ತದೆ. ಕೆಲಸದ ಕ್ಷೇತ್ರದಲ್ಲಿ, ನೀವು ತೆಗೆದುಕೊಂಡ ನಿರ್ಧಾರಗಳು ಸರಿಯಾದ ದಾರಿಯಲ್ಲೇ ಸಾಗುತ್ತಿವೆ. ಆದರೆ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಸ್ವಲ್ಪ ಕಡಿಮೆ ಮಾಡಬೇಕು. ಸಹೋದ್ಯೋಗಿಗಳ ಜೊತೆ ಸಣ್ಣ ಗೊಂದಲಗಳು ಉಂಟಾಗಬಹುದು, ಆದರೂ ನಿಮ್ಮ ನೇರ ಮಾತು ಮತ್ತು ಧೈರ್ಯದಿಂದ ಅವುಗಳನ್ನು ಸರಿಪಡಿಸಬಹುದು. ವ್ಯವಹಾರದಲ್ಲಿರುವವರು ಹೊಸ ಅವಕಾಶಗಳನ್ನು ನೋಡಬಹುದು, ಆದರೆ ಹೂಡಿಕೆ ಮಾಡುವ ಮುನ್ನ ಎರಡು ಬಾರಿ ಯೋಚಿಸುವುದು ಒಳಿತು. ಹಣಕಾಸಿನ ವಿಷಯದಲ್ಲಿ ಈ ವಾರ “ಸೇಫ್ ಗೇಮ್” ಆಡೋದು ಉತ್ತಮ. ಅಪ್ರಯೋಜಕ ಖರ್ಚುಗಳು ಹೆಚ್ಚಾಗುವ...
Latest News

ಬೇಸಾಯದ ಜಮೀನಿಗೆ ತೊಂದರೆ ನೀಡುತ್ತಿದ್ದು ಸೂಕ್ತ ರಕ್ಷಣೆ ನೀಡುವಂತ್ತೆ ಒತ್ತಾಯಿಸಿದ ನೊಂದ ಮಾಲೀಕ

     ಪಿರಿಯಾಪಟ್ಟಣ : ಇಲ್ಲ ಸಲ್ಲದ ಆರೋಪ ಮಾಡುತ್ತ ಬೇಸಾಯ ಮಾಡುವ ಜಮೀನಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಜಮೀನಿನ ಮಾಲೀಕರಾದ ಮಧು ಆರೋಪಿಸಿದರು.  ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನನಗೆ ಹಾರನಹಳ್ಳಿ ಹೋಬಳಿ ಬೈಲುಕುಪ್ಪೆ ಸರ್ವೇ ನಂಬರ್ 32/1ರಲ್ಲಿ 4 ಎಕರೆ 27 ಗುಂಟೆ  ಜಮೀನಿದ್ದು, ಈ ಜಮೀನಿಗೆ ಸೂಕ್ತ ದಾಖಲೆಯನ್ನು ಕೂಡ ಹೊಂದಿದ್ದೇವೆ ಆದರೆ ನನಗೆ ಗ್ರಾಮದ ಸರ್ವೆ ನಂಬರ್ 31ರಲ್ಲಿರುವ ಸುಶೀಲಮ್ಮ ಎಂಬುವರು ಜಮೀನಿನಲ್ಲಿ ಬೇಸಾಯ ಮಾಡಲು ತೊಂದರೆ ನೀಡುತ್ತಿದ್ದು ಇವರು ಸಮೀಪದ ಅರಣ್ಯ ಇಲಾಖೆಯ ಜಾಗದಲ್ಲಿ ಬೇಸಾಯ ಮಾಡುತ್ತಿದ್ದಾರೆ  ಇದನ್ನು ಕೂಡ ಅರಣ್ಯ ಇಲಾಖೆಯವರು ತೆರವುಗೊಳಿಸಲು ಸರ್ವೇ ಮಾಡಿರುತ್ತಾರೆ ಮತ್ತು ಇವರ ದಾಖಲೆ ಯಲ್ಲಿರುವ ಜಮೀನಿಗೂ ನಮ್ಮ ಜಮೀನಿಗೂ ಯಾವುದೇ ಸಂಬಂಧವಿಲ್ಲ. ಇವರು ನೀಡುತ್ತಿರುವ ತೊಂದರೆಯನ್ನು ಪ್ರಶ್ನಿಸಲು ಹೋದರೆ ಇಲ್ಲಸಲ್ಲದ ಆರೋಪ ಮಾಡುತ್ತಾ ಬೇಸಾಯ...
1 2 3 67
Page 1 of 67