Latest News

ಮೈಸೂರಿನಲ್ಲಿ ಕರವೇ ಸ್ವಾಭಿಮಾನಿ ಬಳಗದಿಂದ ಸಾಧಕರ ಸನ್ಮಾನ: ಮಹಿಳಾ ಸಾಧನೆಗೆ ವಿಶೇಷ ಮೆಚ್ಚುಗೆ

 ಮೈಸೂರು: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಸಾಧನೆಯನ್ನು ಮತ್ತಷ್ಟು ಉತ್ತೇಜಿಸುವ ಕಾರ್ಯ ಮೈಸೂರಿನಲ್ಲಿ ಮಂಗಳವಾರ ಗಮನ ಸೆಳೆಯಿತು. ಕರ್ನಾಟಕ...
Latest News

ಕಡಕೊಳದಲ್ಲಿ ರಸ್ತೆ ಸುರಕ್ಷತಾ ಜಾಗೃತಿ: 400 ಮಂದಿಗೆ ಉಚಿತ ಹೆಲ್ಮೆಟ್ ವಿತರಣೆ

ಮೈಸೂರು: ರಸ್ತೆ ಮೇಲೆ ಓಡುವ ಪ್ರತಿಯೊಂದು ಬೈಕ್‌ ಒಂದು ಜವಾಬ್ದಾರಿ, ಪ್ರತಿಯೊಂದು ಹೆಲ್ಮೆಟ್‌ ಒಂದು ಜೀವದ ಕವಚ. ಈ ಸಂದೇಶವನ್ನು ಹಬ್ಬಿಸುವ ಉದ್ದೇಶದಿಂದ ಕಡಕೊಳದಲ್ಲಿ ಮಂಗಳವಾರ ವಿಶಿಷ್ಟ...
Latest News

ಹಂಪಾಪುರದಲ್ಲಿ ಆರೋಗ್ಯ ಶಿಬಿರ: ನಿಯಮಿತ ತಪಾಸಣೆಗೆ ತುಳಸಿರಾಮನಾಯಕ ಕರೆ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಮಾ. 31:-ವಯಸ್ಕರು, ವಯೋವೃದ್ಧರು ಹಾಗೂ ಯುವಜನತೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗಿ ಆರೋಗ್ಯ ಕಾಪಾಡಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಮುಂದಾಗುವಂತೆ ಶಿಕ್ಷಕ ಹಂಪಾಮರ ತುಳಸಿರಾಮನಾಯಕ ಹೇಳಿದರು. ಕೆ.ಆರ್.ನಗರ ತಾಲೂಕಿನ ಹಂಪಾಪುರ ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ಯುವಕರ ಸಂಘ, ವಿಸ್ಮಯ ಆಸ್ಪತ್ರೆ, ಎಎಸ್‌ಜಿ ಕಣ್ಣಿನ ಆಸ್ಪತ್ರೆ ಮತ್ತು ಲಯನ್ಸ್ ಜೀವಧಾರ ರಕ್ತನಿಧಿ ಇವರ ಸಹಯೋಗದಲ್ಲಿ ಗ್ರಾಮದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಸಕ್ಕರೆ ಕಾಯಿಲೆ, ರಕ್ತದೊತ್ತಡ ಎಂಬುದು ಸಾಮಾನ್ಯವಾಗಿದ್ದು, ಕಾಲಕಾಲಕ್ಕೆ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯುವುದಲ್ಲದೆ ಇವೆರಡು ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು. ಎಲ್ಲಾರು  ಆರೋಗ್ಯದ ಕಡೆ ಗಮನ ಹರಿಸಿದ್ದಲ್ಲಿ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಂಡಲ್ಲಿ ದೇಹದಲ್ಲಿ ಕಂಡು ಬರುವ ಬದಲಾವಣೆಗಳಿಗೆ ತಕ್ಕಂತೆ ಚಿಕಿತ್ಸೆ...
Articles

ಮೈಕ್ಲಿಕ್ @ ಕುಕ್ಕರಹಳ್ಳಿಕೆರೆ……..!!!

ಸೂರ್ಯನಂಗಳದಲ್ಲಿಮೋಡಗಳ ಚಿತ್ತಾರ ಬಿಡಿಸಿ,ಆಗಸದ ಕ್ಯಾನ್ವಾಸ್ ಮೇಲೆಪ್ರಕೃತಿಯ ನಗು ಚಿಮ್ಮಿದೆ… ಗಾಳಿಯದು ಮೃದುವಾಗಿ ತಾಕಿಮನದ ಹಾದಿಯ ತೇಲಿಸುತ,ಬೆಳಕಿನ ಕಿರಣಗಳಲ್ಲಿಹೊಸ ಕನಸು ಮೂಡಿಸಿದೆ.. ನೀಲಿ ಗಗನದ ಮಡಿಲಲ್ಲಿಬಿಳಿ ಮೋಡಗಳ ಆಟ,ನೋಟವೊಂದುಹೃದಯಕ್ಕೆಹರ್ಷದ...
Latest News

ಸಿನಿಮಾ ಸ್ಟೈಲ್ ದರೋಡೆ! ಕಾರು ಅಡ್ಡಗಟ್ಟಿ 38 ಲಕ್ಷ ಲೂಟಿ : ಹೊನ್ನಾಳಿಯಲ್ಲಿ ಭೀತಿ

ದಾವಣಗೆರೆ: ರಸ್ತೆ ಮಧ್ಯೆ ಸಿನಿಮೀಯ ರೀತಿಯಲ್ಲಿ ಕಾರು ಅಡ್ಡಗಟ್ಟಿ 38 ಲಕ್ಷ ರೂ. ದರೋಡೆ ನಡೆಸಿದ ಘಟನೆ ಹೊನ್ನಾಳಿ ತಾಲೂಕಿನ ಅರಕೆರೆ ಕಾಲೋನಿ ಸಮೀಪದ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಭದ್ರಾವತಿ ಮೂಲದ ಮಾಲತೇಶ್ ಹಣ ಕಳೆದುಕೊಂಡ ವ್ಯಕ್ತಿ. ಅವರು ತಮ್ಮ ಸ್ನೇಹಿತ ಮಾನಚಾರಿ ಜೊತೆ ಹಗರಿಬೊಮ್ಮನಹಳ್ಳಿಯಲ್ಲಿ ಪೂರ್ವಿಕರ ಜಮೀನು ಮಾರಾಟ ಮಾಡಿ, ಒಟ್ಟು 76 ಲಕ್ಷ ರೂ. ಹಣವನ್ನು ಓಮ್ನಿ ಕಾರಿನಲ್ಲಿ ತೆಗೆದುಕೊಂಡು ಬರುತ್ತಿದ್ದರು. ಹಣವನ್ನು ಎರಡು ಬ್ಯಾಗುಗಳಲ್ಲಿ ವಿಭಜಿಸಲಾಗಿದ್ದು, ಒಂದರಲ್ಲಿ 38 ಲಕ್ಷ ರೂ., ಮತ್ತೊಂದರಲ್ಲಿ 38 ಲಕ್ಷ ರೂ. ಇಡಲಾಗಿತ್ತು. ಜೊತೆಗೆ ಎರಡು ಲಕ್ಷ ರೂ. ನಗದು ಜೆಬಿನಲ್ಲಿ ಇಟ್ಟುಕೊಂಡಿದ್ದರು. ಮಲೆಬೆನ್ನೂರು ಸಮೀಪಕ್ಕೆ ಬಂದಾಗ, ಅನುಮಾನಾಸ್ಪದ ಕಾರೊಂದು ಮಾಲತೇಶ್ ಅವರ ಕಾರಿಗೆ ಉಜ್ಜಿಕೊಂಡು ಹೋಗಿದೆ. ಇದರಿಂದ ಎಚ್ಚರಗೊಂಡ ಅವರು ವೇಗವಾಗಿ ಮುಂದೆ ಸಾಗಿದ್ದಾರೆ. ಆದರೆ ಆ ಕಾರು...
Latest News

ಖರ್ಚಿಗೆ ಹಣ ಕೇಳಿದ್ದಕ್ಕೆ ಕೊಡಲಿಲ್ಲವೆಂದು ಮಂಗಳಮುಖಿಯರ ಮೇಲೆ ತಲ್ವಾರ್ ದಾಳಿ, ಮೈಸೂರಿನಲ್ಲಿ ಆತಂಕಕಾರಿ ಘಟನೆ

ಮೈಸೂರು :- ಖರ್ಚಿಗೆ ಹಣ ನೀಡಲು ನಿರಾಕರಿಸಿದ ಹಿನ್ನೆಲೆ ಮಂಗಳಮುಖಿಯರ ಮೇಲೆ ಯುವಕರು ತಲ್ವಾರ್ನಿಂದ ದಾಳಿ ನಡೆಸಿರುವ ಘಟನೆ ಮೈಸೂರಿನ ಸಾತಗಳ್ಳಿ ಸಮೀಪದ ಅಮೃತ ಬಡಾವಣೆಯಲ್ಲಿ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಭಯ ಹಾಗೂ ಆತಂಕದ ವಾತಾವರಣವನ್ನು ಉಂಟುಮಾಡಿದೆ. ಘಟನೆಯ ವಿವರಗಳ ಪ್ರಕಾರ, ಆನಮ್ ಎಂಬ ಮಂಗಳಮುಖಿ ಅಮೃತ ಬಡಾವಣೆಯಲ್ಲಿದ್ದು, ಕೆಲ ಯುವಕರು ಆಕೆಯ ಬಳಿ ಖರ್ಚಿಗೆ ಹಣ ಕೇಳಿದ್ದಾರೆ. ಆದರೆ ಆನಮ್ ಇದಕ್ಕೆ ನಿರಾಕರಿಸಿದಾಗ, ಮಾತಿನ ಚಕಮಕಿ ಉಂಟಾಗಿ ಗಲಾಟೆ ತೀವ್ರಗೊಂಡಿದೆ. ಮಾತಿನ ವಾದ ವಾಗ್ವಾದದಿಂದ ಆರಂಭವಾದ ವಿವಾದ ಕ್ಷಣಾರ್ಧದಲ್ಲೇ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಸ್ಥಿತಿ ಗಂಭೀರವಾಗುತ್ತಿದ್ದಂತೆ, ಆನಮ್ ತನ್ನ ಸ್ನೇಹಿತೆಯಾದ ಪಾರಿ ಅವರನ್ನು ಕರೆಸಿಕೊಂಡಿದ್ದಾಳೆ. ಗೌಸಿಯಾನಗರದಿಂದ ಪಾರಿ ಸ್ಥಳಕ್ಕೆ ಬಂದ ತಕ್ಷಣವೇ ಯುವಕರು ಇಬ್ಬರ ಮೇಲೂ ತಲ್ವಾರ್ನಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯಿಂದ ಇಬ್ಬರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ...
Latest News

ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮಹಿಳೆ ಪುಟ್ಟಸಾವಿತ್ರಿ ಚಿಕಿತ್ಸೆಗೆ ಧನಸಹಾಯ ಕೋರಿ ಮನವಿ

ಹುಣಸೂರು:-  ತಾಲ್ಲೂಕು ಬಿಳಿಕೆರೆ ಹೋಬಳಿ, ಹಳೇಬೀಡು ಗ್ರಾಮ ಪಂಚಾಯ್ತಿಗೆ ಒಳಪಡುವ ಮೈದನಹಳ್ಳಿ ಗ್ರಾಮದ ಪರಿಶಿಷ್ಟ ಆದಿ ಕರ್ನಾಟಕ ಜಾತಿಗೆ ಸೇರಿದ ಕುಮಾರನ ಹೆಂಡತಿ ಪುಟ್ಟಸಾವಿತ್ರಿ (38 ವರ್ಷ) ಎಂಬುವರು ಕಳೆದ 1 ವರ್ಷದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ತುಂಬಾ ತೊಂದರೆಪಡುತ್ತಿದ್ದು, ಈ ಕುಟುಂಬವು ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಈ ನೊಂದ ಕುಟುಂಬಕ್ಕೆ ಚಿಕಿತ್ಸೆ ಪಡೆದುಕೊಳ್ಳಲು ಧನಸಹಾಯ ಮಾಡುವಂತೆ ಸಹೃದಯರಲ್ಲಿ ಹುಣಸೂರು ತಾಲ್ಲೂಕು ದಸಂಸ ಮನವಿ ಮಾಡಿಕೊಳ್ಳುತ್ತದೆ. ಈ ಬಗ್ಗೆ ದಿನಾಂಕ : 30-03-2026 ರ ಸೋಮವಾರ ಹುಣಸೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ದಸಂಸ ದ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರು ಕ್ಯಾನ್ಸರ್ ಪೀಡಿತ ಪುಟ್ಟಸಾವಿತ್ರಿ ಇವರ ಕುಟುಂಬದವರನ್ನು ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿ ಇವರನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಉಮೇಶ್ ರವರ ಬಳಿ ಕರೆದುಕೊಂಡು ಹೋಗಿ ಇವರ ಪರಿಸ್ಥಿತಿಯನ್ನು ವೈದ್ಯರಿಗೆ ತಿಳಿಸಲಾಯಿತು....
Latest News

ನಿವಾರಾ 100ನೇ ಶಾಖೆ ಉದ್ಘಾಟನೆ ಮಹತ್ವದ ಮೈಲಿಗಲ್ಲು

ಬಂಗಾರಪೇಟೆ, ಮಾರ್ಚ್ 2026: ನಿವಾರಾ ತನ್ನ 100ನೇ ಶಾಖೆಯನ್ನು ಬಂಗಾರಪೇಟೆಯಲ್ಲಿ ಉದ್ಘಾಟಿಸುವ ಮೂಲಕ ತನ್ನ ದಶಕದ ಸಾಧನೆಯ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. 10 ವರ್ಷಗಳ ಹಿಂದೆ ಸ್ಥಾಪಿತವಾದ ನಿವಾರಾ, ಕಡಿಮೆ ಮತ್ತು ಮಧ್ಯಮ ಆದಾಯ ವರ್ಗದ ಕುಟುಂಬಗಳಿಗೆ ತಮ್ಮ ಸ್ವಂತ ಮನೆ ನಿರ್ಮಾಣದ ಕನಸನ್ನು ಸಾಕಾರಗೊಳಿಸಲು ಸಹಾಯ ಮಾಡುವುದರಲ್ಲಿ ತೊಡಗಿಕೊಂಡಿದೆ. ವಿಶೇಷವಾಗಿ ಕೈಗೆಟುಕುವ ಗೃಹ ನಿರ್ಮಾಣ ಸಾಲಗಳ ಮೂಲಕ, ಗ್ರಾಹಕರ ಆಸೆ ಮತ್ತು ಆರ್ಥಿಕ ಸಹಾಯದ ನಡುವೆ ಸೇತುವೆಯಾಗಿರುವುದು ಸಂಸ್ಥೆಯ ಮುಖ್ಯ ಗುರಿಯಾಗಿದೆ. ಈ 100ನೇ ಶಾಖೆಯನ್ನು ಎಂ.ಡಿ. ಮತ್ತು ಸಿಇಒ ಶ್ರೀ ಸಿ.ವಿ. ರಾವ್, ಮುಖ್ಯ ವ್ಯವಹಾರಾಧಿಕಾರಿ (CBO) ಶ್ರೀ ಶ್ರೇಯಸ್, ಮತ್ತು ಕರ್ನಾಟಕ ರಾಜ್ಯ ಮುಖ್ಯಸ್ಥರಾದ ಶ್ರೀ ನಾಗೇಶ್ ಎಚ್‌ಎಸ್ ಅವರಿಂದ ಉದ್ಘಾಟಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಗ್ರಾಹಕರು, ಪಾಲುದಾರರು ಮತ್ತು ನಿವಾರಾ ತಂಡದ ಸದಸ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ನಾಯಕರು,...
Latest News

ಜೈಲಿನೊಳಗಿಂದಲೇ ವಿಡಿಯೋ ಕಾಲ್ ಮಾಡಿ ಅಪ್ರಾಪ್ತೆಗೆ ಕಿರುಕುಳ :  ಧಾರವಾಡ ಜೈಲು ವ್ಯವಸ್ಥೆ !

ಧಾರವಾಡ: ಕಾನೂನು ಕೈಗೆ ಸಿಕ್ಕಿದರೂ ಕೃತ್ಯ ಬದಲಾಗದ ಸ್ಥಿತಿ… ಜೈಲು ಶಿಕ್ಷೆಯಲ್ಲಿದ್ದರೂ ಪಾಠ ಕಲಿಯದ ಆರೋಪಿ, ಜೈಲಿನೊಳಗಿಂದಲೇ ಅಪ್ರಾಪ್ತೆಯೊಬ್ಬಳಿಗೆ ವಿಡಿಯೋ ಕಾಲ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿರುವ ಗಂಭೀರ ಆರೋಪ ಬೆಳಕಿಗೆ ಬಂದಿದೆ. ಈ ಘಟನೆ ಧಾರವಾಡ ಜೈಲು ಆಡಳಿತದ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಪೋಕ್ಸೋ ಪ್ರಕರಣದ ಆರೋಪಿ ಮತ್ತೆ ಕಿರುಕುಳ ಅಪ್ರಾಪ್ತೆಯ ಮೇಲಿನ ಪ್ರಕರಣದಲ್ಲಿ (POCSO) ಜೈಲಿಗೆ ಸೇರಿರುವ ಆರೋಪಿ, ಜೈಲಿನೊಳಗಿಂದಲೇ ಸಂತ್ರಸ್ತೆಯೊಂದಿಗೆ ಸಂಪರ್ಕ ಸಾಧಿಸಿದ್ದಾನೆ ಎನ್ನಲಾಗಿದೆ. ವಿಡಿಯೋ ಕಾಲ್ ಮಾಡಿ, ನ್ಯಾಯಾಲಯದಲ್ಲಿ ತನ್ನ ಪರವಾಗಿ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಕರೆ ಸ್ವೀಕರಿಸದಿದ್ದರೆ ಜೀವ ಬೆದರಿಕೆ ಹಾಕಿದ್ದು, ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬುದೂ ತಿಳಿದುಬಂದಿದೆ. ಜೈಲಿನಲ್ಲಿದ್ದರೂ ಆರೋಪಿ ಈ ಮಟ್ಟದ ಪ್ರಭಾವ ಬೀರುತ್ತಿರುವುದು ಆತಂಕ ಹುಟ್ಟಿಸಿದೆ. ವಿಡಿಯೋ ಕಾಲ್ ಘಟನೆ ಬಗ್ಗೆ ಅಧಿಕಾರಿಗಳಿಗೆ...
1 2 3 56
Page 1 of 56