ನೋಡಲು ತನ್ನಂತಿಲ್ಲ ಎಂದು ಮಗನನ್ನೇ ಕೊಂದ ತಂದೆ: ಮಗನನ್ನೇ ನದಿಗೆ ತಳ್ಳಿ ಕೊಂದ ತಂದೆ
ವಿಜಯಪುರ, ಏಪ್ರಿಲ್:- ಮಾನವೀಯತೆಯೇ ನಡುಗಿಸುವಂತಹ ಭೀಕರ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ. ಕೇವಲ “ಮಗ ನೋಡಲು ತನ್ನಂತಿಲ್ಲ” ಎಂಬ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡ ತಂದೆಯೊಬ್ಬ, ತನ್ನ ಆರು ವರ್ಷದ ಮಗನನ್ನೇ ಕೊ* ಮಾಡಿದ ದಾರುಣ ಘಟನೆ ನಡೆದಿದೆ. ಈ ಘಟನೆ ಸಮಾಜದ ನಿರ್ಲಕ್ಷ್ಯ ಮಾತುಗಳು ಎಷ್ಟು ಅಪಾಯಕರ ಪರಿಣಾಮ ಬೀರುತ್ತವೆ ಎಂಬುದಕ್ಕೆ ಕಠಿಣ ಉದಾಹರಣೆಯಾಗಿದೆ. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ನಿವಾಸಿಗಳಾದ ಮಲ್ಲಿಕಾರ್ಜುನ ಅರಕೇರಿ ಮತ್ತು ಭಾಗ್ಯಶ್ರೀ ದಂಪತಿಗೆ ಸಿದ್ದಾರ್ಥ ಎಂಬ ಆರು ವರ್ಷದ ಮಗನಿದ್ದ. ಗ್ರಾಮದಲ್ಲಿ ಕೆಲವರು ಮಗನ ಹೋಲಿಕೆ ಕುರಿತು ತಮಾಷೆ ಮಾತುಗಳನ್ನು ಆಡುತ್ತಿದ್ದರು. “ಮಗ ನೋಡಲು ನಿನ್ನಂತಿಲ್ಲ” ಎಂಬ ಛೇಡನೆಗಳನ್ನು ಮಲ್ಲಿಕಾರ್ಜುನ ಮನಸ್ಸಿನಲ್ಲಿ ಆಳವಾಗಿ ತೆಗೆದುಕೊಂಡಿದ್ದು, ಅದು ಕ್ರಮೇಣ ಅನುಮಾನವಾಗಿ ರೂಪಾಂತರಗೊಂಡಿತ್ತು. ಮಾರ್ಚ್ 16ರಂದು ಮಗನನ್ನು ಶಾಲೆಗೆ ಸೇರಿಸುವ ನೆಪದಲ್ಲಿ ಮಲ್ಲಿಕಾರ್ಜುನ ಮನೆದಿಂದ ಕರೆದುಕೊಂಡು ಹೋಗಿದ್ದಾನೆ. ನಂತರ ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ...









