ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಬೈಲ್ ಕಳ್ಳರ ಹಾವಳಿ: 9 ಬಾಲಕರು ಸೇರಿ 13 ಬಂಧನ
ಬೆಂಗಳೂರು: ಕ್ರಿಕೆಟ್ ಹುಮ್ಮಸ್ಸಿನ ಮಧ್ಯೆ ನಡೆದ ಮೊಬೈಲ್ ಕಳ್ಳತನ ಪ್ರಕರಣವು ಈಗ ದೊಡ್ಡ ಜಾಲವನ್ನು ಬಯಲಿಗೆಳೆಯುವ ದಿಕ್ಕಿನಲ್ಲಿ ಸಾಗುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ ವೇಳೆ ನಡೆದ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಬ್ಬನ್ ಪಾರ್ಕ್ ಪೊಲೀಸರು, 9 ಅಪ್ರಾಪ್ತರು ಸೇರಿ ಒಟ್ಟು 13 ಮಂದಿಯನ್ನು ಬಂಧಿಸಿ 75 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಈ ತಂಡವು ಕಳ್ಳತನಕ್ಕಾಗಿ ಪೂರ್ವಸಂಚು ರೂಪಿಸಿಕೊಂಡು ವಿಮಾನದಲ್ಲಿ ಬೆಂಗಳೂರಿಗೆ ಬಂದಿರುವುದು ಬಹಿರಂಗವಾಗಿದೆ. ಕ್ರಿಕೆಟ್ ಅಭಿಮಾನಿಗಳಂತೆ ಕಾಣಿಸಿಕೊಳ್ಳಲು ಆರೋಪಿಗಳು ಆರ್ಸಿಬಿ ಟಿ-ಶರ್ಟ್ ಧರಿಸಿ ಕ್ರೀಡಾಂಗಣ ಪ್ರವೇಶಿಸಿ, ಜನಸಂದಣಿಯನ್ನು ಸದುಪಯೋಗಪಡಿಸಿಕೊಂಡು ಕೈಚಳಕ ತೋರಿಸುತ್ತಿದ್ದರು. ಬಂಧಿತರಲ್ಲಿ ಜಾರ್ಖಂಡ್ ಮೂಲದ ಶುಭಂ ಕುಮಾರ್, ಇಶಾಲ್, ಸಂಜೀತ್ ಹಾಗೂ ಸೋಹಾನ್ ಪ್ರಮುಖ ಆರೋಪಿಗಳಾಗಿದ್ದಾರೆ. ಇವರ ಜೊತೆಗೆ 9 ಅಪ್ರಾಪ್ತರನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಒಪ್ಪಿಸಲಾಗಿದೆ. ಆರಂಭಿಕ ಹಂತದಲ್ಲಿ ಮಾ.31ರಂದು ಶುಭಂ ಕುಮಾರ್ ಮತ್ತು ಮೂವರು ಬಾಲಕರನ್ನು...





