ತಂದೆ ಮಗನ ಲಾಕಪ್ ಡೆತ್ ಪ್ರಕರಣ: 9 ಪೊಲೀಸರಿಗೆ ಮರಣದಂಡನೆ : ಸಾತಂಕುಲಂ ಕಸ್ಟಡಿ ಕೊಲೆ ಪ್ರಕರಣಕ್ಕೆ ಮಹತ್ವದ ತೀರ್ಪು
ಚೆನ್ನೈ, ಏಪ್ರಿಲ್ 6: 2020ರಲ್ಲಿ ತಮಿಳುನಾಡಿನ ಸಾತಂಕುಲಂ ನಲ್ಲಿ ನಡೆದ ತಂದೆ-ಮಗನ ಲಾಕಪ್ ಡೆತ್ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿದ್ದ ದುರ್ಘಟನೆ ಆಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸುಮಾರು ಆರು ವರ್ಷಗಳ ನಂತರ ಮದ್ರಾಸ್ ಹೈಕೋರ್ಟ್ (Madras High Court) ಮಹತ್ವದ ಹಾಗೂ ಕಠಿಣ ತೀರ್ಪು ನೀಡಿದ್ದು, ಪ್ರಕರಣದಲ್ಲಿ ಆರೋಪಿಗಳಾಗಿದ್ದ 9 ಪೊಲೀಸ್ ಸಿಬ್ಬಂದಿಗೆ ಮರಣದಂಡನೆ ವಿಧಿಸಿದೆ. ನ್ಯಾಯಾಲಯ ಈ ಪ್ರಕರಣವನ್ನು “ಅತ್ಯಂತ ಅಪರೂಪದ ಅಪರಾಧ” ಎಂದು ಪರಿಗಣಿಸಿದ್ದು, ಪೊಲೀಸ್ ಅಧಿಕಾರದ ದುರುಪಯೋಗ ಮತ್ತು ಮಾನವೀಯತೆ ಕಳೆದುಕೊಂಡ ಕ್ರೂರ ವರ್ತನೆಯ ಪರಾಕಾಷ್ಠೆ ಎಂದು ಕಟುವಾಗಿ ಟೀಕಿಸಿದೆ. ಈ ತೀರ್ಪು ಕೇವಲ ಶಿಕ್ಷೆಯಷ್ಟೇ ಅಲ್ಲ, ಕಾನೂನು ವ್ಯವಸ್ಥೆಯ ಮೇಲೆ ಸಾರ್ವಜನಿಕರ ನಂಬಿಕೆಯನ್ನು ಪುನಃ ಬಲಪಡಿಸುವ ಮಹತ್ವದ ಘಟ್ಟವಾಗಿಯೂ ಪರಿಗಣಿಸಲಾಗಿದೆ. ಘಟನೆಯ ಮೂಲಕ್ಕೆ ಹೋಗುವುದಾದರೆ, 2020ರ ಜೂನ್ ತಿಂಗಳಲ್ಲಿ ಕೋವಿಡ್-19 ಲಾಕ್ಡೌನ್ ನಿಯಮಗಳು ಕಠಿಣವಾಗಿದ್ದ ಸಮಯದಲ್ಲಿ ವ್ಯಾಪಾರಿ ಪಿ. ಜಯರಾಜ್...







