Latest News

ಶ್ರೀರಾಮನವಮಿ ಪ್ರಯುಕ್ತ ಮಾ.27ರಂದು ಮೈಸೂರು ನಗರದಲ್ಲಿ ಮಾಂಸ ಮಾರಾಟ ಸಂಪೂರ್ಣ ನಿಷೇಧ

ಮೈಸೂರು, ಮಾ.24: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾರ್ಚ್ 27ರಂದು ಶ್ರೀ ರಾಮನವಮಿ ಅಂಗವಾಗಿ ಎಲ್ಲಾ ವಿಧದ ಮಾಂಸ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಮೈಸೂರು ನಗರದ ಧಾರ್ಮಿಕ ಸಂವೇದನೆ ಮತ್ತು ಸಾರ್ವಜನಿಕ ಶಾಂತಿಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೈಸೂರು ಮಹಾ ನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಆದೇಶದ ಪ್ರಕಾರ, ಪಾಲಿಕೆಗೆ ವ್ಯಾಪ್ತಿಗೆ  ಸೇರಿದ ಕುರಿ ಮತ್ತು ಮೇಕೆಗಳ ಕಸಾಯಿ ಖಾನೆಗಳ ಜೊತೆಗೆ ನಗರದಲ್ಲಿರುವ ಎಲ್ಲಾ ರೀತಿಯ ಮಾಂಸದ ಅಂಗಡಿಗಳು ಆ ದಿನ ಸಂಪೂರ್ಣವಾಗಿ ಮುಚ್ಚಿರಬೇಕು. ಇದರಲ್ಲಿ ಕುರಿ/ಮೇಕೆ ಮಾಂಸ, ಕೋಳಿ ಮಾಂಸ, ಹಂದಿ ಮಾಂಸ ಹಾಗೂ ಮೀನು ಮಾರಾಟವೂ ಸೇರಿದೆ. ಯಾವುದೇ ರೀತಿಯ ಮಾಂಸದ ವ್ಯಾಪಾರ ಚಟುವಟಿಕೆ ನಡೆಸಿದರೆ ಈ ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಮೈಸೂರು ಮಹಾ ನಗರ ಪಾಲಿಕೆಯ ಅಧಿಕಾರಿಗಳು ಈಗಾಗಲೇ ನಗರ...
Latest News

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ: ಮೈಸೂರಿನಲ್ಲಿ ಕೆರಿಯರ್ ಮೇಳಕ್ಕೆ ಆಹ್ವಾನ

ಮೈಸೂರುಮಾರ್ಚ್ 26ರಂದು ಮೈಸೂರು ಡಯಟ್ನಲ್ಲಿ “ಕೆರಿಯರ್ ಮೇಳ”: ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿದೀಪ ಮೈಸೂರು, ಮಾ.24: ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮಾರ್ಗದರ್ಶನದ ದೀಪ ಹಚ್ಚುವ ಉದ್ದೇಶದಿಂದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ಮಾರ್ಚ್ 26ರಂದು “ಕೆರಿಯರ್ ಮೇಳ”ವನ್ನು ಆಯೋಜಿಸಲಾಗಿದೆ. ನಜರ್ಬಾದ್ನ ವಸಂತಮಹಲ್ನಲ್ಲಿರುವ ಡಯಟ್ ಆವರಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಪಿ.ಎ.ಬಿ ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕದ ಸಹಯೋಗದಲ್ಲಿ ನಡೆಯುವ ಈ ಮೇಳವು, ತಮ್ಮ ಮುಂದಿನ ಶಿಕ್ಷಣ ಮತ್ತು ಉದ್ಯೋಗ ಆಯ್ಕೆಯಲ್ಲಿ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಸ್ಪಷ್ಟ ದಿಕ್ಕು ನೀಡುವ ವೇದಿಕೆಯಾಗಿ ಪರಿಣಮಿಸಲಿದೆ. ಪ್ರೌಢಶಾಲಾ ಹಾಗೂ ಪಿಯುಸಿ ಹಂತದ ವಿದ್ಯಾರ್ಥಿಗಳು ಮಾತ್ರವಲ್ಲದೆ, ಡಿ.ಎಡ್. ಪ್ರಶಿಕ್ಷಣಾರ್ಥಿಗಳಿಗೂ ತಜ್ಞರಿಂದ ಸಮಗ್ರ ಮಾರ್ಗದರ್ಶನ ದೊರೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಪರಿಣಿತರಾದ ಮಾರ್ಗದರ್ಶಕರು ಭಾಗವಹಿಸಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಲಭ್ಯವಿರುವ ಕೋರ್ಸ್ಗಳು,...
Latest News

ಯದುವೀರ್ ಹುಟ್ಟುಹಬ್ಬಕ್ಕೆ ಅರ್ಥಪೂರ್ಣ ಸ್ಪರ್ಶ: ವೃದ್ಧರಿಗೆ ಭೋಜನ, ಮನಗಳಿಗೆ ಸಂತೋಷ

ಯದುವೀರ್ ಜನ್ಮದಿನ: ವೃದ್ಧಾಶ್ರಮದಲ್ಲಿ ಅನ್ನಸಂತರ್ಪಣೆ ಮೂಲಕ ಮಾನವೀಯ ಸೇವೆ ಮೈಸೂರು: ಮೈಸೂರು–ಕೊಡಗು ಕ್ಷೇತ್ರದ ಸಂಸದರು ಹಾಗೂ ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹುಟ್ಟುಹಬ್ಬವನ್ನು...
Latest News

PUC ಹುಡುಗ–SSLC ಹುಡುಗಿ ಪ್ರೇಮ: ಲವ್ ಜಿಹಾದ್ ವಿವಾದಕ್ಕೆ ತಿರುವು

ಪ್ರೇಮ ಪ್ರಕರಣಕ್ಕೆ ಲವ್ ಜಿಹಾದ್ ಲೇಬಲ್: ಹಲ್ಲೆ ಆರೋಪದೊಂದಿಗೆ ತನಿಖೆ ಚಿಕ್ಕಮಗಳೂರು, ಮಾ.24:- ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಅಪ್ರಾಪ್ತ ಹುಡುಗ-ಹುಡುಗಿ ನಡುವಿನ ಪ್ರೇಮ ಪ್ರಕರಣ ‘ಲವ್ ಜಿಹಾದ್’ ಆರೋಪದೊಂದಿಗೆ ತೀವ್ರ ಉದ್ವಿಗ್ನತೆಗೆ ಕಾರಣವಾಗಿದ್ದು, ಹಲ್ಲೆ ಆರೋಪ ಹಾಗೂ ಪೋಕ್ಸೊ ಪ್ರಕರಣ ಸೇರಿ ದ್ವಂದ್ವ ದೂರುಗಳಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದ ಪಿಯುಸಿ ಓದುತ್ತಿರುವ ಬಾಲಕ ಮತ್ತು ಎಸ್‌ಎಸ್‌ಎಲ್‌ಸಿ ಓದುತ್ತಿರುವ ಬಾಲಕಿ ಪ್ರತಿದಿನ ಓದಲು ಪಟ್ಟಣಕ್ಕೆ ಬರುತ್ತಿದ್ದ ವೇಳೆ ಪರಿಚಯವಾಗಿ, ಬಳಿಕ ಪರಸ್ಪರ ಪ್ರೀತಿಗೆ ತಿರುಗಿದರೆಂದು ತಿಳಿದುಬಂದಿದೆ. ಇವರ ಸಂಬಂಧ ವಿಚಾರ ಹೊರಬಿದ್ದಂತೆ ಕೆಲವು ಹಿಂದೂ ಸಂಘಟನೆ ಕಾರ್ಯಕರ್ತರು ಇದನ್ನು ‘ಲವ್ ಜಿಹಾದ್’ ಎಂದು ಆರೋಪಿಸಿ, ಬಾಲಕನ ಮೇಲೆ ಹಲ್ಲೆ ನಡೆಸಿದರೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಸುದೇವ್ ಸೇರಿ...
Latest News

ಪರಿಶಿಷ್ಟ ಪಂಗಡದ ರಾಷ್ಟೀಯ ಆಯೋಗದ ಸದಸ್ಯರಿಂದ ಹೆಚ್.ಡಿ.ಕೋಟೆ ವಿವಿಧ ಸ್ಥಳಗಳ ಭೇಟಿ

ಮೈಸೂರು, ಮಾ.24:-ಪರಿಶಿಷ್ಟ ಪಂಗಡದ ರಾಷ್ಟೀಯ ಆಯೋಗದ ಸದಸ್ಯೆ ಡಾ: ಆಶಾ ಲಕ್ರಾ ಅವರು ಇಂದು ಹೆಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್ ಬಳಿ ಜೇನು ಕುರುಬ ಮಹಿಳೆಯರು ನಡೆಸುತ್ತಿರುವ ಸಿರಿಧಾನ್ಯ...
Latest News

ಸ್ಥಳೀಯ ದೇಸೀಯ ಕಲಾವಿದರಿಗೆ ವೇದಿಕೆ: ರಾಜ್ಯಾದ್ಯಂತ ಮುನ್ನಲೆಗೆ ತರುವ ಶಪಥ – ಸಾಧುಕೋಕಿಲ

ಮೈಸೂರು ಕಲಾವಿದರಿಗೆ ಹೊಸ ವೇದಿಕೆ: ಸಾಧು ಕೋಕಿಲ ಘೋಷಣೆ ಮೈಸೂರು, ಮಾ. 23: ಸಾಂಸ್ಕೃತಿಕ ಪರಂಪರೆಯ ನಾಡಾಗಿರುವ ಮೈಸೂರು ನಗರದಲ್ಲಿ ಸ್ಥಳೀಯ ಹಾಗೂ ದೇಸೀಯ ಕಲಾವಿದರ ಬದುಕಿಗೆ...
Latest News

ಉಪ್ಪಾರ ಸಮಾಜದವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಕರೆ ನೀಡಿದರು.

ಮೈಸೂರು:-  ನಗರದ ಕರ್ನಾಟಕ ಕಲಾಮಂದಿರದಲ್ಲಿ ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ವತಿಯಿಂದ ಆಯೋಜಿಸಿದ್ದ ಸಂಘದ 30ನೇ ವಾರ್ಷಿಕ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರು...
Latest News

ಮಾಜಿ ಸಚಿವ ಸಾರಾ ಮಹೇಶ್ ಪುತ್ರನ ಜನ್ಮದಿನ: ಅಭಿಮಾನಿಗಳಿಂದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಮಾ. 23:- ಮಾಜಿ ಸಚಿವ ಸಾರಾ ಮಹೇಶ್ ಅವರ ಪುತ್ರ ಉದ್ಯಮಿ ಸಾರಾ ಜಯಂತ್ ಅವರ ಹುಟ್ಟುಹಬ್ಬವನ್ನು ಅತ್ಯಂತ...
Latest News

ಕರ್ನಾಟಕ ಜಾಹೀರಾತು ನೀತಿ ಪರಿಶೀಲನೆ: ಸಿಎಂ ಭರವಸೆ: ಸಿ.ಎಂ ಸಿದ್ದರಾಮಯ್ಯ

ದಾವಣಗೆರೆ:-ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ...
Latest News

75 ವರ್ಷಗಳಿಂದ ಜೀವಜಲ ಕಾಪಾಡಿದ ಬಾವಿ: ಜವರಮ್ಮ ಸಿಂಗ್ರೇ ಗೌಡರ ಕುಟುಂಬಕ್ಕೆ ವಿಶ್ವ ಜಲ ದಿನದ ಗೌರವ

ವಿಶೇಷ ವರದಿ:-ವಡ್ಡರಕೊಪ್ಪಲುಶಿವರಾಮು. ಕೆ ಆರ್. ನಗರ. ಮಾ:- ಸುಮಾರು 75 ವರ್ಷಗಳ ಹಿಂದೆ ತಮ್ಮ ಕುಟುಂಬಕ್ಕಾಗಿ ನಿರ್ಮಿಸಿಕೊಂಡ ಜೀವ ಜಲದ ಬಾವಿಯನ್ನು ಇಂದಿಗೂ ರಕ್ಷಣೆ ಮಾಡಿಕೊಂಡು ಬಂದ...
1 2 3 52
Page 1 of 52