Latest News

ಮೈಸೂರು ನಗರಕ್ಕೆ ಹೊಸ DCP: ಡಾ. ಹರ್ಷ ಪ್ರಿಯಂವದ ನೇಮಕ – ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಮೈಸೂರು, ಮಾರ್ಚ್ 18, 2026: ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಗಳನ್ನು ಕೈಗೊಂಡಿದ್ದು, ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗೆ ಆದೇಶ ಹೊರಡಿಸಿದೆ....
Latest News

‘ಮಂಟೇಸ್ವಾಮಿ ಕಥಾಪ್ರಸಂಗ’ ರಂಗಮಂಚದಲ್ಲಿ ದೈವಿಕ ಸ್ಪಂದನೆ: ತಮಟೆ ನಾದದಿಂದ ಪ್ರೇಕ್ಷಕರ ಮನಸೂರೆ

ತುಮಕೂರು:- ಜನಪದ ಸುವಾಸನೆ, ಆಧ್ಯಾತ್ಮಿಕ ಹೊಳಪು ಮತ್ತು ರಂಗಭೂಮಿ ವೈಭವ ಒಂದೇ ವೇದಿಕೆಯಲ್ಲಿ ಮೂಡಿಬಂದ ಅಪರೂಪದ ನಾಟಕೀಯ ಅನುಭವಕ್ಕೆ ನಗರ ಸಾಕ್ಷಿಯಾಯಿತು. ಶನಿವಾರ ಸಂಜೆ ನಡೆದ ‘ಮಂಟೇಸ್ವಾಮಿ ಕಥಾಪ್ರಸಂಗ’ ನಾಟಕ, ತನ್ನ ವಿಶಿಷ್ಟ ನಿರೂಪಣೆ ಮತ್ತು ಮನಮುಟ್ಟುವ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನದಲ್ಲಿ ದೀರ್ಘಕಾಲ ಉಳಿಯುವ ಗುರುತು ಮೂಡಿಸಿತು. ನಾಟಕ ಆರಂಭಕ್ಕೂ ಮೊದಲು ಇಡೀ ಸಭಾಂಗಣ ತಮಟೆ ನಾದದಿಂದ ಮಾರ್ದನಗೊಂಡಿತು. ಬಣ್ಣದ ಪೇಟ, ಕರಿ ಕೋಟು ಧರಿಸಿದ ಕಲಾವಿದರು ತಮಟೆ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ವೇದಿಕೆಗೆ ಪ್ರವೇಶಿಸಿದ ಕ್ಷಣವೇ ವಾತಾವರಣದಲ್ಲಿ ವಿಭಿನ್ನ ಸಂಚಲನ ಸೃಷ್ಟಿಯಾಯಿತು. ಮುಖ್ಯ ನೀಲಗಾರನ ಕೈಯಲ್ಲಿದ್ದ ಹಣತೆ ಬೆಳಕು ರಂಗದ ಕತ್ತಲೆಯನ್ನು ಸೀಳಿ ನಿಧಾನವಾಗಿ ಬೆಳಗಿದಂತೆ, ನಾಟಕಕ್ಕೂ ದೈವಿಕ ಆರಂಭ ಸಿಕ್ಕಂತಾಯಿತು. ‘ಆಡಿದವರ ಮನವ ಬಲ್ಲೆ.. ನೀಡಿದವರ ನಿಜವ ಬಲ್ಲೆ.. ಮಂಟೇದಾ ಸ್ವಾಮಿ ಬನ್ನಿ’ ಎಂಬ ಹಾಡಿನಿಂದ ಆರಂಭವಾದ ಈ ನಾಟಕ, ಅದರ ಮುಂದುವರಿದ...
Latest News

ಚಿಕ್ಕದೇವಮ್ಮ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಗೆ ಸ್ವಾಮೀಜಿಯ ಮನವಿ: ಅಹಿಂಸಾ ಸಂದೇಶ ಯಾತ್ರೆಗೆ ಚಾಲನೆ

ಮೈಸೂರು:- ಸರಗೂರು ತಾಲೂಕಿನ ಕುಂದೂರು ಗ್ರಾಮದ ಶ್ರೀ ಚಿಕ್ಕದೇವಮ್ಮನವರ ಜಾತ್ರೆ ಯುಗಾದಿ ಹಬ್ಬದಂದು ಭಕ್ತಿಭಾವದಿಂದ ಜರುಗಲಿರುವ ಹಿನ್ನೆಲೆ, ಜಾತ್ರೆಯಲ್ಲಿ ನಡೆಯಬಹುದಾದ ಪ್ರಾಣಿಬಲಿಯನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ಸರ್ಕಾರ ಮತ್ತು...
Latest News

ಅಪ್ಪು 51ನೇ ಹುಟ್ಟುಹಬ್ಬ: ಅಭಿಮಾನಿಗಳಿಂದ ಅನ್ನದಾನ, ನೆನಪುಗಳ ನಿನಾದದಲ್ಲಿ ಸಂಭ್ರಮಾಚರಣೆ

ಮೈಸೂರು: ಸ್ಯಾಂಡಲ್ವುಡ್ನ ಅಪ್ರತಿಮ ನಟ ಪುನೀತ್ ರಾಜ್ ಕುಮಾರ್ ಅವರ 51ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನಗರದಲ್ಲಿ ಅಭಿಮಾನಿಗಳು ಹೃದಯಪೂರ್ವಕವಾಗಿ ಸಂಭ್ರಮಾಚರಣೆ ನಡೆಸಿದರು. ಸಬರ್ ಬಸ್ ಸ್ಟ್ಯಾಂಡ್...
Latest News

ಹುಣಸೂರಿನಲ್ಲಿ ಲೋಕಾಯುಕ್ತ ಟ್ರಾಪ್: 25 ಸಾವಿರ ಲಂಚ ಸ್ವೀಕರಿಸುವ ವೇಳೆ ಪಿಡಿಓ ಮಂಜುಳಾ ಬಂಧನ

ಮೈಸೂರು:-  ಹುಣಸೂರು ತಾಲೂಕಿನಲ್ಲಿ ಮುಳ್ಳೂರು ಗ್ರಾ.ಪಂ.ಯ ಪಿಡಿಓ ಮಂಜುಳಾ ಲಂಚ ಸ್ವೀಕರಿಸುವ ವೇಳೆ ಬಂಧನ ಲೋಕಾಯುಕ್ತ ಬಲೆ –, ಘಟನೆ ವೇಳೆ ಆತ್ಮಹಾನಿ ಯತ್ನ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದ ಭ್ರಷ್ಟಾಚಾರದ ಪ್ರಕರಣವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಮಂಜುಳಾ ಅವರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದು, ಘಟನೆಯ ವೇಳೆ ಆತ್ಮಹಾನಿಗೆ ಯತ್ನಿಸಿದ ಘಟನೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಮಾಹಿತಿಯ ಪ್ರಕಾರ, ಮಹದೇವ್ ಎಂಬ ಯುವಕ ತನ್ನ ತಂದೆ ಸ್ವಾಮಿ ಅವರ ಬಾಕಿ ಸಂಬಳವನ್ನು ಪಡೆಯಲು ಪಂಚಾಯ್ತಿ ಕಚೇರಿಗೆ ಹಲವು ಬಾರಿ ಭೇಟಿ ನೀಡಿದ್ದಾನೆ. ಸ್ವಾಮಿ ಅವರು ನೀರುಗಂಟಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಗ ಕರ್ತವ್ಯದಲ್ಲೇ ಮೃತಪಟ್ಟಿದ್ದರು. ನಂತರ ಅನುಕಂಪದ ಆಧಾರದ ಮೇಲೆ ಮಹದೇವ್ ಅವರಿಗೆ ಉದ್ಯೋಗ ನೀಡಲಾಗಿತ್ತು. ಆದರೆ, ಸ್ವಾಮಿ ಅವರು ಸೇವೆ...
Latest News

17-03-2026 ರ ರಾಶಿ ದಿನ ಭವಿಷ್ಯ

ಮೇಷ ರಾಶಿ ಇಂದು ನಿಮ್ಮಲ್ಲಿ ಚೈತನ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಮಾತಿಗೆ ಮಹತ್ವ ಸಿಗಬಹುದು. ಹೊಸ ಯೋಜನೆಗಳನ್ನು ಆರಂಭಿಸಲು ಒಳ್ಳೆಯ ದಿನ. ಆದರೆ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಕೇಳುವುದು ಉತ್ತಮ. ವ್ಯಾಪಾರಿಗಳಿಗೆ ಹೊಸ ಗ್ರಾಹಕರ ಪರಿಚಯವಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಕೆಲವೊಂದು ಚಿಕ್ಕ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಬಹುದು, ಆದರೆ ಅವು ಬೇಗ ಸರಿಯಾಗುತ್ತವೆ. ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ದಣಿವು ಕಾಣಿಸಬಹುದು, ಆದ್ದರಿಂದ ವಿಶ್ರಾಂತಿ ಅಗತ್ಯ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಹಣಕಾಸಿನಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ಶುಭ ದಿಕ್ಕು: ಪೂರ್ವ ಶುಭ ಸಂಖ್ಯೆ: 9 ಶುಭ ಬಣ್ಣ: ಕೆಂಪು   ವೃಷಭ ರಾಶಿ ಇಂದು ನಿಮ್ಮ ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೂಡಬಹುದು. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚುಗೆ ಸಿಗುವ ದಿನ. ಕೆಲಸದಲ್ಲಿ ಕೆಲವು ಸವಾಲುಗಳು ಎದುರಾಗಬಹುದು,...
Latest News

ಕುಕ್ಕರಹಳ್ಳಿ ಕೆರೆ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಕ್ಕೆ ವಿರೋಧ: ಪರಿಸರ ಸಂರಕ್ಷಣೆಗಾಗಿ ಪ್ರತಿಭಟನೆ

ಮೈಸೂರು, ಮಾ.16: ನಗರದ ಪ್ರಮುಖ ಪರಿಸರ ತಾಣವಾದ ಕುಕ್ಕರಹಳ್ಳಿ ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಣಿಜ್ಯ ಹಾಗೂ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿ ಪರಿಸರ ಸಂರಕ್ಷಿಸಿ...
Latest News

ಎಸ್‌ಸಿ–ಎಸ್‌ಟಿ ಸಭೆಗೆ ಅಧಿಕಾರಿಗಳ ಗೈರು: ಅಮಾನತ್ತಿಗೆ ಸಿಫಾರಸ್ಸು ಮಾಡಲು ದಲಿತ ಮುಖಂಡರ ಆಗ್ರಹ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಮಾ.16:- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಹಿತ ರಕ್ಷಣಾ ಸಮಿತಿ ಸಭೆಯಗೆ ಗೈರು ಹಾದಿರಾದ ಅಧಿಕಾರಿಗಳ ಅಮಾನತ್ತಿಗೆ...
1 2 3 49
Page 1 of 49