nalwadi
Mysuru

ಕೃಷ್ಣರಾಜರು ಆಳಿದ ಕಾಲದಲ್ಲಿ ಅದು ಅಕ್ಷರಶಃ ರಾಮ ರಾಜ್ಯವೇ

ನಾಡಾಳಿದ ಮಹಾಸ್ವಾಮಿ ಶ್ರೀಮನ್ ಮಹೀಶೂರ ಸಂಸ್ಥಾನ ಪುರವರಾಧೀಶ ಕರ್ನಾಟಕ ಜನತೆಯ ಹೃದಯ ಸಿಂಹಾಸನಾಧೀಶ್ವರ ಶ್ರೀಮನ್ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಮ್ಮ ನಾಡು ಕಂಡ ಒಬ್ಬ ಶ್ರೇಷ್ಠ ಮಹಾ ರಾಜಾ, ಇವರು ನಮ್ಮ ನಾಡನ್ನು ಆಳಿದ ಕಾಲದಲ್ಲಿ ಅದು ಅಕ್ಷರಶಃ ರಾಮ ರಾಜ್ಯವೇ. ಬ್ರಿಟಿಷ್ ಆಡಳಿತವಿದ್ದ ಕಾಲ ಅದು, ಸ್ವತಂತ್ರವಾಗಿ ರಾಜ್ಯಾಡಳಿತ ನೆಡೆಸಲಾಗದ ಕಾಲಮಾನದಲ್ಲಿ, ಬ್ರಿಟಿಷ್ ಸರ್ಕಾರವನ್ನು ತಮ್ಮ ಸಹನೆ, ಸಂಯಮ, ತಾಳ್ಮೆ, ಬುದ್ಧಿವಂತಿಕೆಯಿಂದ ತಾವುಗಳು ಮಾಡುತ್ತಿದ್ದ ಜನ...
Articles

ಸರಿಯಾದ ಹೆಜ್ಜೆ ಹಾಕಿ ಸ್ಥಾನ ಪಡೆದಿದ್ದು…

ಆಗಸ್ಟ್ 15, ಜನವರಿ 26 ಬರತ್ತೆ ಅಂದರೆ ಶಾಲೆಯಲ್ಲಿ ಬ್ಯಾಂಡ್, ಪಥಸಂಚಲನಕ್ಕೆ ತಂಡಗಳ ತಯಾರಿ, ಅಭ್ಯಾಸ ಆರಂಭ ಆಗತ್ತೆ. ಮಧ್ಯಾಹ್ನ ಬೇಗ ಊಟ ಮುಗಿಸಿ ಮಕ್ಕಳು ಅಭ್ಯಾಸಕ್ಕೆ ಬರೋರು, ಕೆಲವರಂತೂ ಗಡಿಬಿಡಿಲಿ ಊಟ ಮುಗಿಸಿದ್ರೆ ಇನ್ನೂ ಕೆಲವರು ಅಭ್ಯಾಸ ಮುಗಿಸಿ ಬೆಲ್ ಆದಮೇಲೆ ಓಡಿ ಬರೋರು. ಜಿಲ್ಲಾಡಳಿತದಿಂದ ನಡೆಯುವ ಈ ಕಾರ್ಯಕ್ರಮದ ಅಭ್ಯಾಸಕ್ಕೆ ಅಂತ ನಾಲ್ಕುದಿನ ಮುಂಚೆ ಬೆಳಗ್ಗೆ ಡಿ.ಎ.ಆರ್ ಮೈದಾನಕ್ಕೆ ಹೋಗಬೇಕಿರತ್ತೆ. ಪ್ರತಿಬಾರಿಯಂತೆ ಈ ಬಾರಿಯೂ ನಮ್ಮ ಶಾಲೆಯಿಂದ...
nalwadi
History

ನಮ್ಮ ಕೃಷ್ಣರಾಜರನ್ನೇ ನಾವು ಮರೆತೆವು

ಶಿವಾಜಿ ಮಹಾರಾಜರನ್ನು ನಾವು ಕನ್ನಡಿಗರು ಗೌರವಿಸುತ್ತೀವಿ, ಆರಾಧಿಸುತ್ತೀವಿ ಅಂದ್ರೆ ಅದು ನನ್ನ ಕನ್ನಡ ಸಂಸ್ಕೃತಿ ಕಲಿಸಿ ಕೊಟ್ಟ ಸಂಸ್ಕಾರದ ಫಲ. ಆದರೆ ಪಕ್ಕದ ಶಿವಾಜಿ ಮಹಾರಾಜರನ್ನು ಗೌರವಿಸುವ ಆತುರದಲ್ಲಿ ನಮ್ಮ ಕೃಷ್ಣರಾಜರನ್ನೇ ನಾವು ಮರೆತೆವು. ನಾವು ನಮ್ಮ ಮುಂದಿನ ಪೀಳಿಗೆಗೆ ಇಂತ ಒಬ್ಬ ದೊರೆ ಇದ್ದರು, ಅವರ ನೆರಳಿನಲ್ಲಿ ನಾವು ಎಂದೆಂದಿಗೂ ಜೀವಿಸುತ್ತ ಇರುತ್ತೀವಿ ಎಂಬ ಸತ್ಯ ಪರಿಚಯ ಮಾಡಿಕೊಟ್ಟರೆ ಮಾತ್ರವೇ ನಮ್ಮ ಪರಂಪರೆ, ಇತಿಹಾಸ ಮತ್ತು ಕನ್ನಡ ಅಸ್ಮಿತೆಯನ್ನು...
Articles

“ಪುಸ್ತಕದಲ್ಲಿ ಬರೆದ ಹೋಂವರ್ಕ್ ಪತ್ರಿಕೆಯಲ್ಲಿ!?”

ಶಿಕ್ಷಕರು ಎಂದರೆ ಕೇವಲ ಕಲಿಸುವವರು ಎಂಬುದು ಮಾತ್ರವಲ್ಲ ಕೆಲವೊಮ್ಮೆ ವಿದ್ಯಾರ್ಥಿಗಳಿಂದ ಕಲಿಯುವುದು ಸಹ ಇದೆ. ಎಂಬುದನ್ನು ನನಗೆ ಚೆನ್ನಾಗಿ ಅರಿವು ಮೂಡಿಸಿದ್ದು ನನ್ನ ವಿದ್ಯಾರ್ಥಿನಿ ‘ಖುಷಿನವೀನ್’ ನಾನು ೯ನೇ ತರಗತಿಯಲ್ಲಿ ಕನ್ನಡ ತೃತೀಯ ಭಾಷೆಯ ಶಿಕ್ಷಕನಾಗಿದ್ದಾಗ, ಸುಧಾಮೂರ್ತಿ ಅವರ ‘ಮನದ ಮಾತು’ ಕೃತಿಯಿಂದ ಆಯ್ದ ‘ಸಂತೋಷದ ಒಳಗುಟ್ಟು’ ಎಂಬ ಪಾಠವಿತ್ತು. ಅದರ ವಿಷಯ ಎಲ್ಲಾ ಇದ್ದೂ ಏನು ಇಲ್ಲ ಎಂದು ಕೊರಗುವ ಶ್ರೀಮಂತ, ಇರುವುದರಲ್ಲೇ ಸಂತೋಷ ಕಂಡುಕೊಂಡ ಜೀವನ ನಡೆಸುವ...
Articles

“ಪ್ರಪಂಚದ ಪ್ರಾಚೀನ ಭಾಷೆ ನಮ್ಮ ಕನ್ನಡ”

ಕನ್ನಡ ಪ್ರಪಂಚದ ಆಡುಭಾಷೆಗಳಲ್ಲಿ ಅತ್ಯಂತ ಸುಮಧುರ, ಸುಲಲಿತವಾದ ಭಾಷೆ. ಕನ್ನಡವು "ಸುಲಿದ ಬಾಳೆಹಣ್ಣಿನಂತೆ, ರಸಭರಿತ ಕಬ್ಬಿನಂತೆ" ಎಂದು ಕವಿಗಳು ಹೇಳಿದ್ದಾರೆ. ಎಂದರೆ ಅದು ಸುಲಿದ ಬಾಳೆಹಣ್ಣಿನಷ್ಟು ಸುಲಲಿತ ಎಂಬುದನ್ನು ಕಾಣಬಹುದು. ಪ್ರಪಂಚದ ಹಳೆಯ ಭಾಷೆಗಳಲ್ಲಿ ಕನ್ನಡವೂ ಸಹ ಒಂದು. ಭಾರತದ ಪುರಾತನ ಭಾಷೆಗಳ ಸಾಲಿನಲ್ಲಿ ಕನ್ನಡ ಅಗ್ರಸ್ಥಾನ ಪಡೆದುಕೊಂಡಿದೆ. "ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ಕಾಮನಬಿಲ್ಲನು ಕಾಣುವ ಮೈದೊಡೆ ತಕ್ಕನೆ ಮನ ಮೈ ನಿಮಿರುವುದು" ಕವಿ...
Articles

ಮಾಸದಲ್ಲೇ ಶ್ರೇಷ್ಠ ಕಾರ್ತಿಕ

ನಮ್ಮ ಶಾಸ್ತ್ರ-ಸಂಪ್ರದಾಯಗಳು ಕೇವಲ ಮನುಷ್ಯನ ಬದುಕಿನ ಸುತ್ತಲ ಪರಿಸರಕ್ಕಷ್ಟೆ ರೂಪುಗೊಂಡಿಲ್ಲ. ವಿಶ್ವದ ಗ್ರಹಗತಿಗಳ ಚಲನಗತಿಯನ್ನಾಧರಿಸಿ ನಮ್ಮ ಸಂಸ್ಕೃತಿ–ಆಚರಣೆಗಳು ಆವಿಷ್ಕಾರಗೊಂಡಿವೆ. ಮನುಷ್ಯನ ಬದುಕಿನೊಂದಿಗೆ ಜೀವರಾಶಿಗಳಲ್ಲದೆ ಸಕಲ ಗ್ರಹಚರಗಳು ಒಳಗೊಂಡಿವೆ ಎಂಬುದನ್ನು ನಮ್ಮ ಋಷಿಗಳು ಗ್ರಹಿಸಿದ್ದಾರೆ. ಮನುಷ್ಯನ ಹುಟ್ಟು ಬೆಳವಣಿಗೆಯೊಂದಿಗೆ ಗ್ರಹಗತಿಗಳ ಚಲನೆಯನ್ನು ಹೊಂದಿಸಿ ವಿಶ್ಲೇಷಿಸಿದ್ದಾರೆ. ಮನ್ವಂತರ-ಸಂವತ್ಸರಗಳ ಜೊತೆ ತಿಂಗಳು-ದಿನಮಾನಗಳು, ಗಂಟೆ-ನಿಮಿಷಗಳ ಎಣಿಕೆಯ ಮಧ್ಯೆ ಬರುವ ರಾಹು-ಯಮಗಂಡ-ಗುಳಿಕ ಕಾಲಗಳ ಗುಣಿತ ಯಾವ ಗಣಿತಶಾಸ್ತ್ರಕ್ಕೂ ಕಡಿಮೆಯದಲ್ಲ. ನಮ್ಮ ದೇಹಚಲನೆಯೊಂದಿಗೆ ಗ್ರಹಚಲನೆಗೂ ಸಂಬಂಧವಿದೆ. ಈ ಬ್ರಹ್ಮಾಂಡದಲ್ಲಿ...
Articles

“ವೀರಯೋಧ” ಅವರ ಕಥೆಯನ್ನು ಅವರ ಮುಂದೆ ಅಭಿನಯಿಸಿದ್ದು…

ಇಷ್ಟು ದಿನಗಳಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಬಂದು ಹೋಗಿದ್ದಾರೆ. ಆದರೆ ಒಂದು ಬ್ಯಾಚ್ ನ ವಿದ್ಯಾರ್ಥಿಗಳಲ್ಲಿ ಕೆಲವು ವಿದ್ಯಾರ್ಥಿಗಳು ನನ್ನ ಹಿಂದೆಯೆ ಓಡಾಡಲು ಶುರುಮಾಡಿದ್ದರು. ಕಾರಣ ಇಷ್ಟೇ, ಅಷ್ಟು ಮಕ್ಕಳು ಒಂದಲ್ಲ ಒಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರೇ ಆಗಿದ್ದರು. ನಾನೂ ಕೂಡ ಅಂತಹ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ನಾನು ಕೂಡ ರಂಗಭೂಮಿಯಿoದ ಬಂದವನಾಗಿದ್ದರಿAದ ಒಂದಿಷ್ಟು ಸಲುಗೆ ಆ ವಿದ್ಯಾರ್ಥಿಗಳ ಗುಂಪಿನ ಜೊತೆಗಿತ್ತು. ಶಂತನು, ಶಶಾಂಕ್, ಗೌತಮ್, ಸಮರ್ಥ್ ಇವರುಗಳು ಪ್ರಮುಖರು....
Articles

ಮಕ್ಕಳು ಹಾಕಿದ “ಒಗ್ಗರಣೆ!?”

ಶಾಲೆ ಅಂದ ಮೇಲೆ ಎಲ್ಲಾ ಚಟುವಟಿಕೆಗಳು ಮಕ್ಕಳಿಗೆ ಮೀಸಲು ಅನ್ನುವುದರಲ್ಲಿ ಅನುಮಾನವೇ ಇಲ್ಲ, ಒಮ್ಮೆ ಶಿಕ್ಷಕರ ಜೊತೆಗೆ ಮುಖ್ಯೋಪಾಧ್ಯಾಯರು ಚರ್ಚಿಸಿದಾಗ ಅಡುಗೆ ಮನೆಯ ಕಡೆಗೆ ಏಕೆ ಮುಖ ಮಾಡಬಾರದು? ಒಂದು ತಂಡದಲ್ಲಿ 6 ಜನ ಸದಸ್ಯರನ್ನು ಸೇರಿಸಿ ಅಡುಗೆ ಸ್ಫರ್ಧೆಯನ್ನು ಏಕೆ ಆಯೋಜಿಸಬಾರದು? ಎಂಬ ಯೋಚನೆ ಬಂದಿತು. ಎಲ್ಲರ ಅನುಮೋದನೆ ಸಿಕ್ಕ ನಂತರದಲ್ಲಿ ಮುಂದಿನವಾರ ಶಾಲೆಯಲ್ಲಿ ಮಕ್ಕಳಿಗೆ "ಅಡುಗೆ ಸ್ಪರ್ಧೆ" ತಿಳಿಸಲಾಯಿತು. ಅಂದಿನಿಂದ ಅದೆಷ್ಟು ಲವಲವಿಕೆಯಿಂದ ಮಕ್ಕಳು ಓಡಾಟ ನಡೆಸುತ್ತಿದ್ದಾರೆ....
Articles

ಅನ್ನಂ ನ ನಿಂದ್ಯಾತ್; ತದ್ ವೃತಮ್

ಅನ್ನಂ ನ ನಿಂದ್ಯಾತ್; ತದ್ ವೃತಮ್ "ಶರೀರಮಾದ್ಯಂ ಖಲು ಧರ್ಮಸಾಧನಮ್" - ಶರೀರವೇ ಸಕಲ ಕಾರ್ಯ ಸಾಧನೆಗೆ ಮೊದಲಲ್ಲವೇ? ಉತ್ತಮ ಚಿಂತನೆಗಳಿಗೆ..ಉದಾತ್ತ ಕೆಲಸಗಳಿಗೆ ಸ್ವಸ್ಥ ದೇಹ ಬಹು ಮುಖ್ಯ. ಸದೃಡ ದೇಹಕ್ಕೆ ಆಹಾರವೇ ಮೂಲ.ಯುನೈಟೆಡ್ ನೇಷನ್ ನ ಆಹಾರ ಮತ್ತು ಕೃಷಿ ಸಂಸ್ಥೆ ಪ್ರತಿ ವರ್ಷದ ಅಕ್ಟೋಬರ್ ೧೬ ನ್ನು ವಿಶ್ವ ಆಹಾರ ದಿನವನ್ನಾಗಿ ಘೋಷಿಸಿದೆ. ಇದರ ಮೂಲ ಉದ್ದೇಶವೆಂದರೆ ಪ್ರತಿಯೊಬ್ಬರೂ ಸಹ ಹಸಿವು ಮತ್ತು ಅಪೌಷ್ಟಿಕತೆಯಿಂದ ಮುಕ್ತರನ್ನಾಗಿ ಮಾಡುವುದು....
1 35 36 37 38 39 53
Page 37 of 53