Latest News

ಕಚ್ಚಾ ತಂಬಾಕು ಮೇಲಿನ ಸುಂಕ ರದ್ದುಗೊಳಿಸಿ ಅಧಿಸೂಚನೆ: ಯದುವೀರ್: ಫೆ. 5ರಿಂದ ಹರಾಜು ಪುನರಾರಂಭವಾಗಲಿದೆ ಎಂದ ಮೈಸೂರು-ಕೊಡಗು ಸಂಸದರು

ಮೈಸೂರು, ಫೆ. 3:- ತಂಬಾಕು ಬೆಳೆಗಾರರಿಗೆ ಪೂರಕವಾಗುವ ರೀತಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕಚ್ಚಾ ತಂಬಾಕು ಮೇಲಿನ ಸುಂಕವನ್ನು ರದ್ದುಗೊಳಿಸಲಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದರು, ಈಗಾಗಲೇ ಸಲ್ಲಿಸಿದ್ದ ಮನವಿಗೆ ಹಣಕಾಸು ಸಚಿವರು ಪುರಸ್ಕರಿಸಿ, ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದರು. ಫೆಬ್ರವರಿ 5ರಿಂದ ತಂಬಾಕು ಮಾರುಕಟ್ಟೆ ಹರಾಜು...
Latest News

ರಾಷ್ಟ್ರಮಟ್ಟದ ಕರಾಟೆ ವೇದಿಕೆಯಲ್ಲಿ ಮೈಸೂರು ಮಗಳು ಅಮುಲ್ಯ ಇತಿಹಾಸ ನಿರ್ಮಾಣ

ಹೆಣ್ಣುಮಕ್ಕಳಿಗೂ ರಾಷ್ಟ್ರೀಯ ವೇದಿಕೆ: ಅಮುಲ್ಯ ಸಾಧನೆಯ ಪ್ರೇರಣಾದಾಯಕ ಪಯಣ ಮೈಸೂರು ಜಿಲ್ಲೆಯ ಹೆಮ್ಮೆಯ ಪುತ್ರಿ ಅಮುಲ್ಯ ಎಸ್ ಕುಮಾರ್ ಅವರು ರಾಷ್ಟ್ರಮಟ್ಟದ ಕ್ರೀಡಾ ವೇದಿಕೆಯಲ್ಲಿ ಕರ್ನಾಟಕಕ್ಕೆ ಅಪಾರ ಗೌರವ ತಂದುಕೊಟ್ಟಿದ್ದಾರೆ. ಅಮೃತ ವಿದ್ಯಾಲಯ, ಮೈಸೂರು ಶಾಲೆಯ ವಿದ್ಯಾರ್ಥಿನಿಯಾಗಿರುವ ಅಮುಲ್ಯ, 69ನೇ SGFI ಕರಾಟೆ ಚಾಂಪಿಯನ್‌ಶಿಪ್–2026ರಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿ ಮಹಾರಾಷ್ಟ್ರದ ಬರಾಮತಿಯಲ್ಲಿ ಜನವರಿ 31ರಿಂದ ಫೆಬ್ರವರಿ 2, 2026ರವರೆಗೆ...
Latest News

ಸ್ವಚ್ಛ ಮೈಸೂರುಗಾಗಿ ಓಟ: ಫೆಬ್ರವರಿ 8ರಂದು ‘ಸ್ವಚ್ಛ ಮ್ಯಾರಥಾನ್’ ಆಯೋಜನೆ – ಪ್ರಥಮ ಸ್ಥಾನ ಗುರಿಯಾಗಿಟ್ಟ MCC

ಮೈಸೂರು ಸ್ವಚ್ಛ ಸರ್ವೇಕ್ಷಣ್ 2026 ಗುರಿ ಇಟ್ಟುಕೊಂಡ ಎಂಸಿಸಿ ಸ್ವಚ್ಛ ಮ್ಯಾರಥಾನ್” ಮೈಸೂರು:- ಮೈಸೂರು ಮಹಾನಗರ ಪಾಲಿಕೆ ಅಯುಕ್ತಶೇಖ್ ತನ್ವೀರ್ ಆಸಿಫ್ ಮಾತಾನಾಡಿ ಸ್ವಚ್ಛತೆ ಕ್ಷೇತ್ರದಲ್ಲಿ ಮೈಸೂರು ಮತ್ತೆ ದೇಶದ ಅಗ್ರಸ್ಥಾನ ಪಡೆಯುವ ದೃಢ ಸಂಕಲ್ಪದೊಂದಿಗೆ ಮೈಸೂರು ನಗರಪಾಲಿಕೆ (ಎಂಸಿಸಿ) ಫೆಬ್ರವರಿ 8 ರಂದು ಭಾರೀ ಸಾರ್ವಜನಿಕ ಭಾಗವಹಿಸುವಿಕೆಯನ್ನು ಒಳಗೊಂಡ ‘ಸ್ವಚ್ಛ ಮ್ಯಾರಥಾನ್’ ಅನ್ನು ಆಯೋಜಿಸಿದೆ. ಸ್ವಚ್ಛ ಸರ್ವೇಕ್ಷಣ್–2026ರಲ್ಲಿ ಮೈಸೂರು ನಗರವನ್ನು ಪ್ರಥಮ ಸ್ಥಾನಕ್ಕೆ ತರುವುದೇ ಈ ಕಾರ್ಯಕ್ರಮದ ಮುಖ್ಯ...
Latest News

ಎಕ್ಸೆಗ್ರೇಷಿಯ ವಿತರಣೆಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಿ : ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ

ಮೈಸೂರು:-  ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಎಕ್ಸ್‌ಗ್ರೇಷಿಯ ಪಾವತಿಸಲು ಬಿಡುಗಡೆ ಮಾಡಿರುವ ಹಣ ವಿತರಣೆಯಲ್ಲಿ ಆಗಿರುವ ಅಕ್ರಮದ ತನಿಖೆ ನಡೆಸಿ, ನೈಜ ರೈತರಿಗೆ ಪರಿಹಾರ ಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಗನ್‌ಹೌಸ್‌ನಿಂದ ಮೇಟಗಳ್ಳಿಯ ಕೆಐಎಡಿಬಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಬಳಿಕ ಕಚೇರಿ ಮುಂಭಾಗ ಸಮಾವೇಶಗೊಂಡು ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಕೆಗೆ ಘೋಷಣೆ ಕೂಗಿದರು. ನಂಜನಗೂಡು ತಾಲೂಕಿನ, ಇಮ್ಮಾವು ಗ್ರಾಮದ ಸ.ನಂ 390...
Latest News

ಮೈಸೂರು ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯಾಗಿ ಮಾಡಲು ಅಧಿಕಾರಿಗಳು ಶ್ರಮಿಸಿ: ಡಾ: ಪಿ ಶಿವರಾಜ್

ಮೈಸೂರು,ಫೆ.02:-  ಮೈಸೂರು ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯಾಗಿ ಮಾಡಲು ಅಧಿಕಾರಿಗಳು ಶ್ರಮಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ: ಪಿ.ಶಿವರಾಜ್ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಾಲ್ಯ ವಿವಾಹ ಸಮಾಜದ ಪಿಡುಗಾಗಿದ್ದು, ಬಾಲ್ಯ ವಿವಾಹವನ್ನು ತಡೆಗಟ್ಟಲು ಸಾರ್ವಜನಿಕರು ಅಧಿಕಾರಿಗಳೊಂದಿಗೆ ಕೈಜೋಡಿಸಬೇಕು. ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಅಧಿಕಾರಿಗಳ ಗಮನಕ್ಕೆ ತಂದು ತಡೆಗಟ್ಟಬೇಕು ಎಂದರು. ಫೆಬ್ರವರಿ 11 ರಂದು...
Latest News

ನಕಲಿ ದೆಹಲಿ ಪೊಲೀಸ್ ಐಡಿ, ಸಿನಿಮಾ ಶೈಲಿಯ ದರೋಡೆ: ಕಲಬುರಗಿಯಲ್ಲಿ ಗ್ಯಾಂಗ್ ಬಯಲು

ಕಲಬುರಗಿಯಲ್ಲಿ ದೆಹಲಿ ಪೊಲೀಸರ ಸೋಗಿನ ಅಂತಾರಾಜ್ಯ ದರೋಡೆ ಗ್ಯಾಂಗ್ ಬಯಲು: ₹27 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ, ಏಳು ಆರೋಪಿಗಳ ಬಂಧನ ಕಲಬುರಗಿ:- ದೆಹಲಿ ಪೊಲೀಸರಂತೆ ನಟಿಸಿ ಸಾರ್ವಜನಿಕರನ್ನು ನಂಬಿಸಿ ಚಿನ್ನಾಭರಣ ದೋಚುತ್ತಿದ್ದ ಅತ್ಯಂತ ಚತುರ ಹಾಗೂ ಸಂಘಟಿತ ಅಂತಾರಾಜ್ಯ ದರೋಡೆ ಗ್ಯಾಂಗ್ನ್ನು ಕೊನೆಗೂ ಕಲಬುರಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ರಾಜ್ಯಗಳ ಪೊಲೀಸರ ನಿದ್ದೆಗೆಡಿಸಿದ್ದ ಈ ಗ್ಯಾಂಗ್ನ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು ₹27 ಲಕ್ಷ...
Latest News

ಮೈಸೂರಿನಲ್ಲಿ ಹಿಂದುತ್ವದ ಜಯಘೋಷ: ಲಕ್ಷ್ಮಿಪುರ ನಗರದಲ್ಲಿ ‘ನಾಡನ್ನು ಜಾಗೃತಗೊಳಿಸೋಣ’ ಕಾರ್ಯಕ್ರಮಕ್ಕೆ ಭರ್ಜರಿ ಸ್ಪಂದನೆ”

ಮೈಸೂರು ಲಕ್ಷ್ಮಿಪುರ ನಗರದಲ್ಲಿ ಹಿಂದು ಸಮಾಜೋತ್ಸವ ಸಮಿತಿ ಜಾಗೃತಿ ಕಾರ್ಯಕ್ರಮ” ಮೈಸೂರು :- ನಗರದ ಲಕ್ಷ್ಮಿಪುರಂ ವಸತಿ ಪ್ರದೇಶದ ಶಂಕರ ಮಠ ಭಾಗದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಭಕ್ತಿಭಾವ, ಸಾಂಸ್ಕೃತಿಕ ವೈಭವ ಮತ್ತು ಸಂಘಟಿತ ಶಿಸ್ತಿನೊಂದಿಗೆ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು, ಭಕ್ತರು ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿ ಹಿಂದೂ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಸಾರಿದರು. ಕಾರ್ಯಕ್ರಮದ ಅಂಗವಾಗಿ ರಾಮಾನುಜ ರಸ್ತೆಯಲ್ಲಿರುವ ವೀರ ಆಂಜನೇಯ ಸ್ವಾಮಿ...
Latest News

ಯುವ ನಾಯಕತ್ವಕ್ಕೆ ದಿಕ್ಕು ತೋರಿದ ಸ್ಕೌಟಿಂಗ್: ಮೈಸೂರಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರೀಮಿಯರ್ ಓಪನ್ ಗ್ರೂಪ್ 39ನೇ ವಾರ್ಷಿಕೋತ್ಸವ

ಮೈಸೂರಿನಲ್ಲಿ ಸ್ಕೌಟಿಂಗ್‌ಗೆ ಸಂಭ್ರಮದ ಕ್ಷಣ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರೀಮಿಯರ್ ಓಪನ್ ಗ್ರೂಪ್ 39ನೇ ವಾರ್ಷಿಕೋತ್ಸವ ಮೈಸೂರು, ಫೆಬ್ರವರಿ 1:-ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯು ಯುವಜನರಲ್ಲಿ ಶಿಸ್ತು, ಸೇವಾ ಮನೋಭಾವ, ನಾಯಕತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದ್ದು, ಅದರ ಭಾಗವಾಗಿರುವ ಪ್ರೀಮಿಯರ್ ಓಪನ್ ಗ್ರೂಪ್‌ನ 39ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಕಚೇರಿಯಲ್ಲಿ ಭಾನುವಾರ...
Latest News

ರೈತರನ್ನು ಉದ್ಯಮಿಗಳನ್ನಾಗಿ ರೂಪಿಸುವುದು ಸರ್ಕಾರದ ಗುರಿಯಾಗಿದೆ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

ಬೆಂಗಳೂರು, ಫೆಬ್ರವರಿ,01:-ಭಾರತದ ಕೃಷಿ ತಂತ್ರಯೋಜನೆ ಕೇವಲ ಉತ್ಪಾದನೆಯಿಂದ ಲಾಭದಾಯಕತೆಯತ್ತ ಮಾತ್ರವಲ್ಲದೆ ಇತ್ತೀಚೆಗೆ ಮಹತ್ವದ ಬದಲಾವಣೆಯನ್ನು  ಕಂಡಿದ್ದು,ರೈತರನ್ನು ಉದ್ಯಮಿಗಳಾಗಿ ರೂಪಿಸುವ ಉದ್ದೇಶದಿಂದ ಮೌಲ್ಯವರ್ಧನೆ, ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕಗಳ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದು  ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.. ಇಂದು ಕಬ್ಬನ್ ಪಾರ್ಕ ನಲ್ಲಿರುವ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ಅಗ್ರಿ ವಾಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೃಷಿ ಸಚಿವರು,ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರಂತರ ಪ್ರಯತ್ನಗಳಿಂದ...
Latest News

ವಸತಿ ಸಚಿವ ಜಮೀರ್ ಅಹಮದ್ ಪುತ್ರನ ನಾಯಕತ್ವದ ಚಿತ್ರವನ್ನು ರಿಲಾಕ್ಸ್ ಮೂಡ್‌ನಲ್ಲಿ ಆಸ್ವಾದಿಸಿದ ಸಿಎಂ ಸಿದ್ದರಾಮಯ್ಯ

ಒರಾಯನ್ ಮಾಲ್‌ನಲ್ಲಿ ‘ಕಲ್ಟ್’ ಸಿನಿಮಾ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು:- ರಾಜಕೀಯ ಒತ್ತಡಗಳು, ಆಡಳಿತದ ಹೊಣೆಗಾರಿಕೆಗಳ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರಾಮ ಪಡೆದು ಸಿನಿರಂಗದತ್ತ ಗಮನ ಹರಿಸಿದ ಕ್ಷಣ ಇಂದು ಕಂಡುಬಂದಿತು. ನಗರದ ಒರಾಯನ್ ಮಾಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸದಾಗಿ ಬಿಡುಗಡೆಯಾದ ‘ಕಲ್ಟ್’ ಕನ್ನಡ ಚಿತ್ರವನ್ನು ವೀಕ್ಷಿಸಿದರು. ವಸತಿ ಸಚಿವ ಜಮೀರ್ ಅಹಮದ್ ಅವರ ಪುತ್ರ ನಾಯಕನಾಗಿ ಅಭಿನಯಿಸಿರುವ ಈ ಸಿನಿಮಾವನ್ನು ಮುಖ್ಯಮಂತ್ರಿ ಅವರು ಸಂಪೂರ್ಣ ರಿಲಾಕ್ಸ್...
1 36 37 38 39 40 62
Page 38 of 62