Latest News

ಜಾತಿ ಭೇದ ತೊಡೆದು ಒಗ್ಗಟ್ಟಾಗಿ ಬದುಕೋಣ: ಟಿ.ಡಿ. ಗಣೇಶ್ ಕರೆ

ವರದಿ: ರವಿಚಂದ್ರ ಬೂದಿತಿಟ್ಟು ಪಿರಿಯಾಪಟ್ಟಣ: “ನಾವೆಲ್ಲರೂ ಮನುಷ್ಯರು ಒಂದೇ. ಜಾತಿ ಎಂಬ ಭೇದವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಾರದು” ಎಂದು ಮೈಸೂರು ಪೇಂಟ್ ಅಂಡ್ ವಾರ್ನಿಸ್ ಅಧ್ಯಕ್ಷ ಟಿ.ಡಿ. ಗಣೇಶ್...
Latest News

ಮೈಸೂರು ಹಾಸನ ರಸ್ತೆಯಲ್ಲಿ ಅಂಬೇಡ್ಕರ್ ಜಯಂತಿ: ಅರಳಿ ಮರ ತೆರವು ಮಾಡಿ ಉದ್ಯಾನವನ ನಿರ್ಮಾಣ ಘೋಷಣೆ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್.ನಗರ:ಏ.,14:- ಪ್ರತಿ ದೇಶವಾಸಿಯು ನೆಮ್ಮದಿ ಮತ್ತು ಸಮಾನತೆಯ ಜೀವನ ನಡೆಸಲು ಅನುಕೂಲವಾಗುವಂತಹ ವಿಶ್ವ ಶ್ರೇಷ್ಠ ಸಂವಿಧಾನ ನೀಡಿದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಅಜರಾಮರ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಪಟ್ಟಣದ ಮೈಸೂರು-ಹಾಸನ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಮತ್ತು ತಾಲೂಕು ಆಡಳಿತ ಮತ್ತು ದಲಿತ ಸಂಘಟನೆಗಳ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತದ ಜನತೆಯ ಸುಭದ್ರ ಭವಿಷ್ಯಕ್ಕಾಗಿ ಹತ್ತು ಹಲವು‌ ಶಾಶ್ವತ ಕೊಡುಗೆ ಗಳನ್ನು ನೀಡಿದ ಬಾಬಾ‌ ಸಾಹೇಬರು ಸೂರ್ಯ ಮತ್ತು ಚಂದ್ರರು ಇರುವವರೆಗೂ ಶಾಶ್ವತ ಎಂದು ಬಣಿಸಿದ ಶಾಸಕರು ಸಮಾಜದ ಬಾಂದವರ ಬೇಡಿಕೆಯಂತೆ ಅಂಬೇಡ್ಕರ್ ಪುತ್ಥಳಿ ಬಳಿ ಇರುವ‌ ಅರಳಿ ಮರವನ್ನು ತೆರವು ಮಾಡಿ ಇಲ್ಲಿ ಸುಂದರ ಉದ್ಯಾನವನ ನಿರ್ಮಾಣ ಮಾಡುವುದಾಗಿ...
Latest News

ಟೌನ್ ಹಾಲ್ ಮುಂಭಾಗ ಅಂಬೇಡ್ಕರ್ ಜಯಂತಿ ಆಚರಣೆ: ಸಮಾನತೆ ಶಿಕ್ಷಣದ ಸಂದೇಶ ಮೊಳಗಿತು

ಮೈಸೂರು:- ನಗರದ ಟೌನ್ ಹಾಲ್ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು. ವಿವಿಧ ವರ್ಗಗಳ ಸಾರ್ವಜನಿಕರು, ಸಂಘಟನೆಯ ಪದಾಧಿಕಾರಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ವೈಭವ ತುಂಬಿದರು. ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರ್ ಅವರ ಪುತಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಅವರ ಸೇವೆಯನ್ನು ಸ್ಮರಿಸಲಾಯಿತು. ಬಳಿಕ ಮಾತನಾಡಿದ ಕನ್ನಡಾಂಬೆ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಶೇಖರ್, “ಡಾ. ಅಂಬೇಡ್ಕರ್ ಕೇವಲ ಒಬ್ಬ ವ್ಯಕ್ತಿ ಅಲ್ಲ, ಅವರು ಒಂದು ಮಹಾನ್ ಚಿಂತನೆ. ಬಡತನ, ಜಾತಿ ಭೇದಭಾವ ಮತ್ತು ಅನ್ಯಾಯಗಳನ್ನು ಎದುರಿಸಿ, ತಮ್ಮ ಪರಿಶ್ರಮ ಹಾಗೂ ಶಿಕ್ಷಣದ ಬಲದಿಂದ ಶ್ರೇಷ್ಠ ಸ್ಥಾನಕ್ಕೇರಿದ ಮಹನೀಯರು,” ಎಂದು ಹೇಳಿದರು. ಅವರು “ಶಿಕ್ಷಣ ಪಡೆಯಿರಿ, ಸಂಘಟಿತರಾಗಿ, ಹೋರಾಡಿ” ಎಂಬ ಅಂಬೇಡ್ಕರ್ ಅವರ ಮಹತ್ವದ ಸಂದೇಶವನ್ನು ಸ್ಮರಿಸಿ, ಇಂದಿನ...
Latest News

ಮೈಸೂರು: ಕಬ್ಬಿನ ಹಣ ಪಾವತಿ ವಿಳಂಬ :  ಏಪ್ರಿಲ್ 21ರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರಂತರ ಧರಣಿಗೆ ರೈತರ ತೀರ್ಮಾನ

ಮೈಸೂರು, ಏಪ್ರಿಲ್ 13: ಕಬ್ಬು ಬೆಳೆಗಾರರಿಗೆ ಬಾಕಿ ಇರುವ ಹಣವನ್ನು ತಕ್ಷಣ ಪಾವತಿಸಬೇಕೆಂದು ಒತ್ತಾಯಿಸಿ ಏಪ್ರಿಲ್ 21ರಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರಂತರ ಪ್ರತಿಭಟನೆ ಧರಣಿ...
Latest News

13-04-2026 ರ ರಾಶಿ ದಿನಭವಿಷ್ಯ

ಮೇಷ (Aries) 13-04-2026 ದಿನಭವಿಷ್ಯ ನಿಮ್ಮ ದಿನವು ಒಂದು ಚುರುಕು ನದಿಯಂತೆ ಸಾಗುವ ಸಾಧ್ಯತೆ ಇದೆ. ಬೆಳಗ್ಗೆದಿಂದಲೇ ನಿಮ್ಮಲ್ಲಿ ಉತ್ಸಾಹ ಮತ್ತು ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ನೀವು ಕೈಗೊಂಡ ಕೆಲಸಗಳನ್ನು ಮುಗಿಸಲು ಮನಸ್ಸು ಕೇಂದ್ರೀಕೃತವಾಗಿರುತ್ತದೆ. ಆದರೆ ಅತಿಯಾದ ಆತುರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪಿಸಲು ಪ್ರಯತ್ನಿಸಬೇಕು. ಸ್ವಲ್ಪ ತಾಳ್ಮೆ ಇಟ್ಟರೆ ಉತ್ತಮ ಫಲಿತಾಂಶ ಪಡೆಯಬಹುದು. ಉದ್ಯೋಗ ಅಥವಾ ವ್ಯವಹಾರ ಕ್ಷೇತ್ರದಲ್ಲಿ ಇಂದು ಹೊಸ ಅವಕಾಶಗಳು ಎದುರಾಗಬಹುದು. ಮೇಲಾಧಿಕಾರಿಗಳ ಗಮನ ಸೆಳೆಯುವಂತಹ ಕೆಲಸ ಮಾಡುವ ಸಾಧ್ಯತೆ ಇದೆ. ನಿಮ್ಮ ಆಲೋಚನೆಗಳು ಇತರರಿಗೆ ಪ್ರಭಾವ ಬೀರುತ್ತವೆ. ಆದರೆ ಸಹೋದ್ಯೋಗಿಗಳೊಂದಿಗೆ ಮಾತಿನಲ್ಲಿ ಜಾಗ್ರತೆ ಇರಲಿ, ಅರ್ಥಭೇದ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಮಧ್ಯಮ ಫಲ. ಅನಾವಶ್ಯಕ ಖರ್ಚುಗಳನ್ನು ನಿಯಂತ್ರಿಸಬೇಕು. ಇಂದು ದೊಡ್ಡ ಹೂಡಿಕೆ ಅಥವಾ ಸಾಲ ತೆಗೆದುಕೊಳ್ಳುವುದನ್ನು ಸ್ವಲ್ಪ ಮುಂದೂಡುವುದು ಒಳಿತು. ಸಣ್ಣ ಪ್ರಮಾಣದ ಹಣದ ಲಾಭ ಕಾಣಬಹುದು, ಆದರೆ ಅದನ್ನು ಉಳಿಸುವುದು...
Latest News

ಕೊಪ್ಪಳದಲ್ಲಿ ‘ಲವ್ ಜಿಹಾದ್’ ಆರೋಪ: ಯುವಕನ ಮೊಬೈಲ್‌ನಲ್ಲಿ ಅನೇಕ ಯುವತಿಯರ ಫೋಟೋ ವೀಡಿಯೋ ಪತ್ತೆ, ತನಿಖೆಗೆ ಒತ್ತಾಯ

ಕೊಪ್ಪಳ, ಏಪ್ರಿಲ್ 11:-  ಹುಬ್ಬಳ್ಳಿಯ ನಂತರ ಇದೀಗ ಕೊಪ್ಪಳ ಜಿಲ್ಲೆಯಲ್ಲಿಯೂ ‘ಲವ್ ಜಿಹಾದ್’ ಆರೋಪ ಕೇಳಿಬಂದಿದ್ದು, ಯುವಕನೊಬ್ಬನ ಮೊಬೈಲ್‌ನಲ್ಲಿ ಅನೇಕ ಯುವತಿಯರ ಫೋಟೋ ಹಾಗೂ ವೀಡಿಯೋಗಳು ಪತ್ತೆಯಾದ ಪ್ರಕರಣ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಪೊಲೀಸ್ ಇಲಾಖೆಗೆ ದೂರು ನೀಡಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ಮುಸ್ತಫಾ ಎಂಬ ಯುವಕನ ವಿರುದ್ಧ ಈ ಆರೋಪ ಕೇಳಿಬಂದಿದೆ. ಮೂಲಗಳ ಪ್ರಕಾರ, ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಆಕೆಯನ್ನು ತನ್ನ ಪ್ರೀತಿಗೆ ಒಳಪಡಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆ ಇಬ್ಬರೂ ಹಲವು ಕಡೆಗಳಿಗೆ ತೆರಳಿದ್ದು, ಸಂಬಂಧ ಗಾಢವಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ :- ಮದುವೆಯಾಗುವುದಾಗಿ  ನಂಬಿಸಿ ಕೈಕೊಟ್ಟ ಇಂಜಿನಿಯರ್ : ಫೋಟೋ ವೀಡಿಯೋ ಸಾಕ್ಷ್ಯಗಳೊಂದಿಗೆ ಮಹಿಳೆಯ ದೂರು ಮೂರು ದಿನಗಳ ಹಿಂದೆ ಜಿಲ್ಲಾಸ್ಪತ್ರೆ ಸಮೀಪ ಇಬ್ಬರೂ ಇದ್ದಾಗ ಕೆಲವು...
Latest News

ಮದುವೆಯಾಗುವುದಾಗಿ  ನಂಬಿಸಿ ಕೈಕೊಟ್ಟ ಇಂಜಿನಿಯರ್ : ಫೋಟೋ ವೀಡಿಯೋ ಸಾಕ್ಷ್ಯಗಳೊಂದಿಗೆ ಮಹಿಳೆಯ ದೂರು

ರಾಯಚೂರು, ಏಪ್ರಿಲ್ 11:- ಪ್ರೀತಿ ಮತ್ತು ಮದುವೆ ಎಂಬ ಭರವಸೆಯನ್ನು ನಂಬಿಸಿ ದೀರ್ಘಕಾಲ ಸಂಬಂಧ ಮುಂದುವರಿಸಿ ಬಳಿಕ ಮದುವೆಗೆ ನಿರಾಕರಿಸಿದ ಆರೋಪದ ಮೇಲೆ ಇಂಜಿನಿಯರ್ ವಿರುದ್ಧ ಮಹಿಳೆಯೊಬ್ಬರು ಗಂಭೀರ ದೂರು ನೀಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ದೇವದುರ್ಗ ಮೂಲದ ಮಲ್ಲಿಕಾರ್ಜುನ್ ಎಂಬ ಇಂಜಿನಿಯರ್ ವಿರುದ್ಧ ಅತಿಥಿ ಶಿಕ್ಷಕಿಯೊಬ್ಬರು ದೂರು ನೀಡಿದ್ದು, ಕಾಲೇಜು ದಿನಗಳಿಂದಲೇ ಇಬ್ಬರೂ ಪರಸ್ಪರ ಪರಿಚಯ ಹೊಂದಿ ನಂತರ ಪ್ರೀತಿಯಲ್ಲಿ ಮುಳುಗಿದ್ದೇವೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಸ್ನೇಹವಾಗಿ ಆರಂಭವಾದ ಈ ಸಂಬಂಧ ಕ್ರಮೇಣ ಗಾಢವಾಗಿದ್ದು, ಸುಮಾರು 7-8 ವರ್ಷಗಳ ಕಾಲ ಇಬ್ಬರೂ ಹತ್ತಿರವಾಗಿದ್ದರು ಎಂಬುದು ದೂರಿನಲ್ಲಿ ಉಲ್ಲೇಖವಾಗಿದೆ. ಮಹಿಳೆಯ ಆರೋಪದ ಪ್ರಕಾರ, ಮಲ್ಲಿಕಾರ್ಜುನ್ ತಾನು ಮದುವೆಯಾಗುವುದಾಗಿ ನಂಬಿಸಿ ಅನೇಕ ಬಾರಿ ಶಾರೀರಿಕ ಸಂಬಂಧ ಬೆಳೆಸಿದ್ದಾನೆ. ಮಂತ್ರಾಲಯ, ಆಲಮಟ್ಟಿ...
Latest News

11-04-2026 ರ ರಾಶಿ ದಿನಭವಿಷ್ಯ

ಮೇಷ ರಾಶಿ (Aries) 11-04-2026 ಶನಿವಾರದ ದಿನಭವಿಷ್ಯ ನಿಮ್ಮ ದಿನವು ಒಂದು “ಬೆಂಕಿಯ ಚಿಗುರು” ಹಾಗೆ ಆರಂಭವಾಗಿ ನಿಧಾನವಾಗಿ ಹೊತ್ತಿ ಉರಿಯುವಂತೆ ಸಾಗುತ್ತದೆ. ಬೆಳಿಗ್ಗೆ ಸಮಯದಲ್ಲಿ ನೀವು ಚುರುಕುತನದಿಂದ ಕೆಲಸಗಳನ್ನು ಹಿಡಿದುಕೊಳ್ಳುತ್ತೀರಿ. ಬಹಳ ದಿನಗಳಿಂದ ಬಾಕಿ ಉಳಿದ ಕೆಲಸಗಳನ್ನು ಮುಗಿಸಲು ಇದು ಸೂಕ್ತ ಸಮಯ. ನಿಮ್ಮ ಆತ್ಮವಿಶ್ವಾಸ ಇಂದು ಹೆಚ್ಚಾಗಿ ಕಾಣುತ್ತದೆ, ಆದರೆ ಅದೇ ಸಮಯದಲ್ಲಿ ಅತಿಯಾದ ಆತುರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಕೆಲಸದ ಸ್ಥಳದಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಮೌಲ್ಯ ಸಿಗುತ್ತದೆ. ಹಿರಿಯರಿಂದ ಮೆಚ್ಚುಗೆ ದೊರೆಯುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಜೊತೆ ಮಾತನಾಡುವಾಗ ನೇರ ಮಾತು ನಿಮ್ಮ ಶಕ್ತಿಯಾಗಬಹುದು, ಆದರೆ ಸ್ವಲ್ಪ ಮೃದುವಾಗಿ ಮಾತನಾಡಿದರೆ ಇನ್ನಷ್ಟು ಒಳ್ಳೆಯ ಫಲ ಸಿಗುತ್ತದೆ. ವ್ಯಾಪಾರದಲ್ಲಿರುವವರಿಗೆ ಸಣ್ಣ ಲಾಭಗಳು ಕಾಣಬಹುದು, ಆದರೆ ದೊಡ್ಡ ಹೂಡಿಕೆಗಳನ್ನು ಮುಂದೂಡುವುದು ಒಳಿತು. ಹಣಕಾಸಿನ ವಿಷಯದಲ್ಲಿ “ಇಂದು ಉಳಿಸಿದ ಒಂದು ರೂಪಾಯಿ ನಾಳೆಯ ಶಕ್ತಿ” ಅನ್ನೋ ಮಾತು ನಿಮಗೆ...
Latest News

ಇಂತಹ ಹಬ್ಬಗಳನ್ನು ಉಳಿಸಬೇಕು : ಗ್ರಾಮಸ್ಥರ ಒಗ್ಗಟ್ಟು ನೋಡಿ ಮೆಚ್ಚಿದ ಸಾರಾ ಮಹೇಶ್

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಏ. 10:- ಎಲ್ಲರನ್ನು ಒಂದುಗೂಡಿಸಿಕೊಂಡು ಮಾಡುವ ಹಬ್ಬ ಸಾಮರಸ್ಯದಿಂದ ಒಂದುಗೂಡಿ ಬಾಳುವ ವ್ಯವಸ್ಥೆ ಇದನ್ನು ಬಹಳ ಅಚ್ಚುಕಟ್ಟಾಗಿ ಮಾಡಿರುವ...
Latest News

ತಂಬಾಕು ಬೆಲೆ ಕುಸಿತ: ಪ್ರತಿ ಕೆಜಿಗೆ ರೂ.300 ನಿಗದಿ ಮಾಡುವಂತೆ ರೈತ ಸಂಘ ಆಗ್ರಹ

ವರದಿ:ರವಿಚಂದ್ರ ಬೂದಿತಿಟ್ಟು ಪಿರಿಯಾಪಟ್ಟಣ, ಏಪ್ರಿಲ್ 10: ತಂಬಾಕು ಬೆಳೆಗಾರರು ಎದುರಿಸುತ್ತಿರುವ ಬೆಲೆ ಕುಸಿತದ ಸಮಸ್ಯೆಯನ್ನು ತಕ್ಷಣ ಪರಿಹರಿಸಿ, ಪ್ರತಿ ಕೆಜಿಗೆ ಕನಿಷ್ಠ ರೂ.300 ನಿಗದಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ಚಪ್ಪರದಹಳ್ಳಿ ಅಜಿತ್ ಒತ್ತಾಯಿಸಿದರು. ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಬಾಕು ಮಾರುಕಟ್ಟೆ ಆರಂಭವಾದ ವೇಳೆ ಉತ್ತಮ ಗುಣಮಟ್ಟದ ತಂಬಾಕಿಗೆ ಪ್ರತಿ ಕೆಜಿಗೆ ರೂ.250 ರಿಂದ 320ರವರೆಗೆ ಬೆಲೆ ನೀಡಲಾಗುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಬೆಲೆ ಏಕಾಏಕಿ ಸುಮಾರು ರೂ.100ಕ್ಕಿಂತಲೂ ಕಡಿಮೆಗೆ ಇಳಿದಿದ್ದು, ರೈತರು ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು. ತಂಬಾಕು ಮಂಡಳಿ ಹಾಗೂ ಖರೀದಿದಾರ ಕಂಪನಿಗಳು ರೈತರಲ್ಲಿ ಭಿನ್ನಾಭಿಪ್ರಾಯ ಉಂಟುಮಾಡುವ ಉದ್ದೇಶದಿಂದ ಕೆಲ ರೈತರನ್ನು ಮಧ್ಯವರ್ತಿಗಳಂತೆ ಬಳಸಿಕೊಂಡು ಅವರಿಗೆ ಮಾತ್ರ ಉತ್ತಮ ಬೆಲೆ ನೀಡುತ್ತಿರುವ ಬಗ್ಗೆ ದೂರುಗಳು...
1 2 3 4 5 6 65
Page 4 of 65