ಅನೈತಿಕ ಸಂಬಂಧದ ನೆರಳು… ಅರ್ಚಕನ ಹತ್ಯೆ ಪ್ರಕರಣ ಬಯಲು: ಪತ್ನಿ ಸೇರಿ ನಾಲ್ವರ ಬಂಧನ
ಅನೈತಿಕ ಸಂಬಂಧದ ನೆರಳು… ಅರ್ಚಕನ ಹತ್ಯೆ ಪ್ರಕರಣ ಬಯಲು: ಪತ್ನಿ ಸೇರಿ ನಾಲ್ವರ ಬಂಧ ಮಂಡ್ಯ, ಮಾ.11:-ಮಂಡ್ಯ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಅರ್ಚಕನ ನಿಗೂಢ ಕೊಲೆ ಪ್ರಕರಣವನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಅರ್ಚಕನ ಪತ್ನಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಅನೈತಿಕ ಸಂಬಂಧವೇ ಈ ಕೊಲೆಗೆ ಕಾರಣವಾಗಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯ ಮರಳಗಾಲ ಗ್ರಾಮದ ಬಳಿ ಮಾ.6 ರಂದು ಅರ್ಚಕ ಸಿದ್ದಲಿಂಗಪ್ಪ ಅವರ ಮೃತದೇಹ ಪತ್ತೆಯಾಗಿದ್ದು, ಆರಂಭದಲ್ಲಿ ಇದನ್ನು ಅಪಘಾತ ಎಂದು ಊಹಿಸಲಾಗಿತ್ತು. ಆದರೆ ಪ್ರಕರಣದ ಹಿನ್ನೆಲೆ ಅನುಮಾನಾಸ್ಪದವಾಗಿದ್ದ ಕಾರಣ ಪೊಲೀಸರು ಸವಿಸ್ತಾರ ತನಿಖೆ ಆರಂಭಿಸಿದ್ದರು. ತನಿಖೆಯ ವೇಳೆ ಸಿದ್ದಲಿಂಗಪ್ಪ ಅವರ ಪತ್ನಿ ಶಾಲಿನಿ ಮತ್ತು ಆಕೆಯ ಪ್ರಿಯಕರ ಟಿಪ್ಪರ್ ಚಾಲಕ ಹರೀಶ ಅವರ ನಡುವಿನ ಅನೈತಿಕ ಸಂಬಂಧವೇ ಕೊಲೆಯ ಮೂಲ ಕಾರಣ ಎಂದು ಪತ್ತೆಯಾಗಿದೆ. ಮೃತ...











