vivekananda
History

ಸ್ವಾಮಿ ವಿವೇಕಾನಂದರ ಮೈಸೂರಿನ ನಂಟು

ವಿಶ್ವರತ್ನ, ಆಧ್ಯಾತ್ಮಿಕ ಜಗದ್ಗುರು, ಭಾರತದ ಹೆಮ್ಮೆಯ ಪುತ್ರ, ಶಾಂತಿ ಸೌಹಾರ್ದತೆ ಸರಳತೆಯ ಪ್ರತಿರೂಪ, ಯುವಕರ ಕಣ್ಮಣಿ, "ಸ್ವಾಮೀ ವಿವೇಕಾನಂದ" ರವರ ಜಯಂತೋತ್ಸವದ ಶುಭಾಶಯಗಳು... ಸ್ವಾಮೀ ವಿವೇಕಾನಂದರವರು ಮೈಸೂರು ಸಂಸ್ಥಾನದ ಅಂದಿನ ದಿವಾನರಾಗಿದ್ದ ಶ್ರೀ ಶೇಷಾದ್ರಿ ಅಯ್ಯರ್ ರವರ ಆಹ್ವಾನದ ಮೇರೇಗೆ ಮೈಸೂರು ಅರಮನೆಗೇ ಭೇಟಿನೀಡಿದರು. ಅವರನ್ನು ಅಂದಿನ ಮೈಸೂರು ಮಹಾರಾಜರಾದ ಶ್ರೀಮನ್ ಮಹಾರಾಜ "ಶ್ರೀ ಹತ್ತನೇ ಚಾಮರಾಜೇಂದ್ರ ಒಡೆಯರ್" ರವರು ಆದರದಿಂದ ಸ್ವಾಗತಿಸಿದರು. ಸ್ವಾಮೀಜಿಗಳ ದಾರ್ಶನಿಕತ್ವಕ್ಕೆ ಮತ್ತು ಬುದ್ಧಿವಂತಿಕೇಗೆ ಬೆರಗಾಗಿ...
chamundeshwari
History

ಜಗದೊಡತಿ ಚಾಮಾಯಿ – ನಾಡ ದೇವತೆ ಚಾಮುಂಡಿ

ಕನ್ನಡಿಗರ ಹಿರಿ ದೈವವಾಗಿ, ಮೈಸೂರು ಸಂಸ್ಥಾನದ ಕುಲ ದೇವತೆಯಾದ ಈ ಮಹಾ ತಾಯಿಯ ಚಾರಿತ್ಯ ಅಮೋಘ, ಅದ್ಬುತ ಮತ್ತು ಪರಮ ಪುಣ್ಯದಾಯಕ. ಲೋಕ ಕಂಟಕನಾದ ಮಹಿಷಾಸುರ ಋಷಿ, ಮುನಿಗಳಿಗೆ, ಮಾನವರಾದಿಯಾಗಿ ದೇವನು ದೇವತೆಗಳಿಗೂ ಕಂಟಕನಾಗಿ ಮೂರು ಲೋಕಗಳನ್ನು ತನ್ನ ಮುಷ್ಟಿಯಲ್ಲಿ ಹಿಡಿದು ಮಹಿಷೂರು ಎಂಬ ಪಟ್ಟಣದಿಂದ ಎಲ್ಲವನ್ನು ನಿಯಂತ್ರಿಸುತ್ತಿದಾಗ, ಋಷಿ, ಮುನಿಗಳಾದಿಯಾಗಿ ಜಗನ್ಮಾತೆಯ ಆಶ್ರಯ ಪಡೆಯಲು ಪ್ರಾರ್ಥಿಸಿದವರಾಗಿ, ಜಗತ್ಜನನಿ ತನ್ನ ಸರ್ವ ಶಕ್ತಿಗಳನ್ನು ಒಗ್ಗೂಡಿಸಿ ಚೆಂಡಿ ಚಾಮುಂಡಿಯಾಗಿ ಚಂಡ ಮುಂಡರಾದಿಯಾಗಿ...
nalwadi
Mysuru

ಕೃಷ್ಣರಾಜರು ಆಳಿದ ಕಾಲದಲ್ಲಿ ಅದು ಅಕ್ಷರಶಃ ರಾಮ ರಾಜ್ಯವೇ

ನಾಡಾಳಿದ ಮಹಾಸ್ವಾಮಿ ಶ್ರೀಮನ್ ಮಹೀಶೂರ ಸಂಸ್ಥಾನ ಪುರವರಾಧೀಶ ಕರ್ನಾಟಕ ಜನತೆಯ ಹೃದಯ ಸಿಂಹಾಸನಾಧೀಶ್ವರ ಶ್ರೀಮನ್ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಮ್ಮ ನಾಡು ಕಂಡ ಒಬ್ಬ ಶ್ರೇಷ್ಠ ಮಹಾ ರಾಜಾ, ಇವರು ನಮ್ಮ ನಾಡನ್ನು ಆಳಿದ ಕಾಲದಲ್ಲಿ ಅದು ಅಕ್ಷರಶಃ ರಾಮ ರಾಜ್ಯವೇ. ಬ್ರಿಟಿಷ್ ಆಡಳಿತವಿದ್ದ ಕಾಲ ಅದು, ಸ್ವತಂತ್ರವಾಗಿ ರಾಜ್ಯಾಡಳಿತ ನೆಡೆಸಲಾಗದ ಕಾಲಮಾನದಲ್ಲಿ, ಬ್ರಿಟಿಷ್ ಸರ್ಕಾರವನ್ನು ತಮ್ಮ ಸಹನೆ, ಸಂಯಮ, ತಾಳ್ಮೆ, ಬುದ್ಧಿವಂತಿಕೆಯಿಂದ ತಾವುಗಳು ಮಾಡುತ್ತಿದ್ದ ಜನ...
Articles

ಸರಿಯಾದ ಹೆಜ್ಜೆ ಹಾಕಿ ಸ್ಥಾನ ಪಡೆದಿದ್ದು…

ಆಗಸ್ಟ್ 15, ಜನವರಿ 26 ಬರತ್ತೆ ಅಂದರೆ ಶಾಲೆಯಲ್ಲಿ ಬ್ಯಾಂಡ್, ಪಥಸಂಚಲನಕ್ಕೆ ತಂಡಗಳ ತಯಾರಿ, ಅಭ್ಯಾಸ ಆರಂಭ ಆಗತ್ತೆ. ಮಧ್ಯಾಹ್ನ ಬೇಗ ಊಟ ಮುಗಿಸಿ ಮಕ್ಕಳು ಅಭ್ಯಾಸಕ್ಕೆ ಬರೋರು, ಕೆಲವರಂತೂ ಗಡಿಬಿಡಿಲಿ ಊಟ ಮುಗಿಸಿದ್ರೆ ಇನ್ನೂ ಕೆಲವರು ಅಭ್ಯಾಸ ಮುಗಿಸಿ ಬೆಲ್ ಆದಮೇಲೆ ಓಡಿ ಬರೋರು. ಜಿಲ್ಲಾಡಳಿತದಿಂದ ನಡೆಯುವ ಈ ಕಾರ್ಯಕ್ರಮದ ಅಭ್ಯಾಸಕ್ಕೆ ಅಂತ ನಾಲ್ಕುದಿನ ಮುಂಚೆ ಬೆಳಗ್ಗೆ ಡಿ.ಎ.ಆರ್ ಮೈದಾನಕ್ಕೆ ಹೋಗಬೇಕಿರತ್ತೆ. ಪ್ರತಿಬಾರಿಯಂತೆ ಈ ಬಾರಿಯೂ ನಮ್ಮ ಶಾಲೆಯಿಂದ...
nalwadi
History

ನಮ್ಮ ಕೃಷ್ಣರಾಜರನ್ನೇ ನಾವು ಮರೆತೆವು

ಶಿವಾಜಿ ಮಹಾರಾಜರನ್ನು ನಾವು ಕನ್ನಡಿಗರು ಗೌರವಿಸುತ್ತೀವಿ, ಆರಾಧಿಸುತ್ತೀವಿ ಅಂದ್ರೆ ಅದು ನನ್ನ ಕನ್ನಡ ಸಂಸ್ಕೃತಿ ಕಲಿಸಿ ಕೊಟ್ಟ ಸಂಸ್ಕಾರದ ಫಲ. ಆದರೆ ಪಕ್ಕದ ಶಿವಾಜಿ ಮಹಾರಾಜರನ್ನು ಗೌರವಿಸುವ ಆತುರದಲ್ಲಿ ನಮ್ಮ ಕೃಷ್ಣರಾಜರನ್ನೇ ನಾವು ಮರೆತೆವು. ನಾವು ನಮ್ಮ ಮುಂದಿನ ಪೀಳಿಗೆಗೆ ಇಂತ ಒಬ್ಬ ದೊರೆ ಇದ್ದರು, ಅವರ ನೆರಳಿನಲ್ಲಿ ನಾವು ಎಂದೆಂದಿಗೂ ಜೀವಿಸುತ್ತ ಇರುತ್ತೀವಿ ಎಂಬ ಸತ್ಯ ಪರಿಚಯ ಮಾಡಿಕೊಟ್ಟರೆ ಮಾತ್ರವೇ ನಮ್ಮ ಪರಂಪರೆ, ಇತಿಹಾಸ ಮತ್ತು ಕನ್ನಡ ಅಸ್ಮಿತೆಯನ್ನು...
Articles

“ಪುಸ್ತಕದಲ್ಲಿ ಬರೆದ ಹೋಂವರ್ಕ್ ಪತ್ರಿಕೆಯಲ್ಲಿ!?”

ಶಿಕ್ಷಕರು ಎಂದರೆ ಕೇವಲ ಕಲಿಸುವವರು ಎಂಬುದು ಮಾತ್ರವಲ್ಲ ಕೆಲವೊಮ್ಮೆ ವಿದ್ಯಾರ್ಥಿಗಳಿಂದ ಕಲಿಯುವುದು ಸಹ ಇದೆ. ಎಂಬುದನ್ನು ನನಗೆ ಚೆನ್ನಾಗಿ ಅರಿವು ಮೂಡಿಸಿದ್ದು ನನ್ನ ವಿದ್ಯಾರ್ಥಿನಿ ‘ಖುಷಿನವೀನ್’ ನಾನು ೯ನೇ ತರಗತಿಯಲ್ಲಿ ಕನ್ನಡ ತೃತೀಯ ಭಾಷೆಯ ಶಿಕ್ಷಕನಾಗಿದ್ದಾಗ, ಸುಧಾಮೂರ್ತಿ ಅವರ ‘ಮನದ ಮಾತು’ ಕೃತಿಯಿಂದ ಆಯ್ದ ‘ಸಂತೋಷದ ಒಳಗುಟ್ಟು’ ಎಂಬ ಪಾಠವಿತ್ತು. ಅದರ ವಿಷಯ ಎಲ್ಲಾ ಇದ್ದೂ ಏನು ಇಲ್ಲ ಎಂದು ಕೊರಗುವ ಶ್ರೀಮಂತ, ಇರುವುದರಲ್ಲೇ ಸಂತೋಷ ಕಂಡುಕೊಂಡ ಜೀವನ ನಡೆಸುವ...
Articles

“ಪ್ರಪಂಚದ ಪ್ರಾಚೀನ ಭಾಷೆ ನಮ್ಮ ಕನ್ನಡ”

ಕನ್ನಡ ಪ್ರಪಂಚದ ಆಡುಭಾಷೆಗಳಲ್ಲಿ ಅತ್ಯಂತ ಸುಮಧುರ, ಸುಲಲಿತವಾದ ಭಾಷೆ. ಕನ್ನಡವು "ಸುಲಿದ ಬಾಳೆಹಣ್ಣಿನಂತೆ, ರಸಭರಿತ ಕಬ್ಬಿನಂತೆ" ಎಂದು ಕವಿಗಳು ಹೇಳಿದ್ದಾರೆ. ಎಂದರೆ ಅದು ಸುಲಿದ ಬಾಳೆಹಣ್ಣಿನಷ್ಟು ಸುಲಲಿತ ಎಂಬುದನ್ನು ಕಾಣಬಹುದು. ಪ್ರಪಂಚದ ಹಳೆಯ ಭಾಷೆಗಳಲ್ಲಿ ಕನ್ನಡವೂ ಸಹ ಒಂದು. ಭಾರತದ ಪುರಾತನ ಭಾಷೆಗಳ ಸಾಲಿನಲ್ಲಿ ಕನ್ನಡ ಅಗ್ರಸ್ಥಾನ ಪಡೆದುಕೊಂಡಿದೆ. "ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ಕಾಮನಬಿಲ್ಲನು ಕಾಣುವ ಮೈದೊಡೆ ತಕ್ಕನೆ ಮನ ಮೈ ನಿಮಿರುವುದು" ಕವಿ...
1 42 43 44 45 46 60
Page 44 of 60