ಸಿನಿಮಾ ಸ್ಟೈಲ್ ದರೋಡೆ! ಕಾರು ಅಡ್ಡಗಟ್ಟಿ 38 ಲಕ್ಷ ಲೂಟಿ : ಹೊನ್ನಾಳಿಯಲ್ಲಿ ಭೀತಿ
ದಾವಣಗೆರೆ: ರಸ್ತೆ ಮಧ್ಯೆ ಸಿನಿಮೀಯ ರೀತಿಯಲ್ಲಿ ಕಾರು ಅಡ್ಡಗಟ್ಟಿ 38 ಲಕ್ಷ ರೂ. ದರೋಡೆ ನಡೆಸಿದ ಘಟನೆ ಹೊನ್ನಾಳಿ ತಾಲೂಕಿನ ಅರಕೆರೆ ಕಾಲೋನಿ ಸಮೀಪದ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಭದ್ರಾವತಿ ಮೂಲದ ಮಾಲತೇಶ್ ಹಣ ಕಳೆದುಕೊಂಡ ವ್ಯಕ್ತಿ. ಅವರು ತಮ್ಮ ಸ್ನೇಹಿತ ಮಾನಚಾರಿ ಜೊತೆ ಹಗರಿಬೊಮ್ಮನಹಳ್ಳಿಯಲ್ಲಿ ಪೂರ್ವಿಕರ ಜಮೀನು ಮಾರಾಟ ಮಾಡಿ, ಒಟ್ಟು 76 ಲಕ್ಷ ರೂ. ಹಣವನ್ನು ಓಮ್ನಿ ಕಾರಿನಲ್ಲಿ ತೆಗೆದುಕೊಂಡು ಬರುತ್ತಿದ್ದರು. ಹಣವನ್ನು ಎರಡು ಬ್ಯಾಗುಗಳಲ್ಲಿ ವಿಭಜಿಸಲಾಗಿದ್ದು, ಒಂದರಲ್ಲಿ 38 ಲಕ್ಷ ರೂ., ಮತ್ತೊಂದರಲ್ಲಿ 38 ಲಕ್ಷ ರೂ. ಇಡಲಾಗಿತ್ತು. ಜೊತೆಗೆ ಎರಡು ಲಕ್ಷ ರೂ. ನಗದು ಜೆಬಿನಲ್ಲಿ ಇಟ್ಟುಕೊಂಡಿದ್ದರು. ಮಲೆಬೆನ್ನೂರು ಸಮೀಪಕ್ಕೆ ಬಂದಾಗ, ಅನುಮಾನಾಸ್ಪದ ಕಾರೊಂದು ಮಾಲತೇಶ್ ಅವರ ಕಾರಿಗೆ ಉಜ್ಜಿಕೊಂಡು ಹೋಗಿದೆ. ಇದರಿಂದ ಎಚ್ಚರಗೊಂಡ ಅವರು ವೇಗವಾಗಿ ಮುಂದೆ ಸಾಗಿದ್ದಾರೆ. ಆದರೆ ಆ ಕಾರು...








