ನೇಣು ಬಿಗಿದುಕೊಂಡು ಆದಿವಾಸಿ ಯುವತಿ ಶ* ವಾಗಿ ಪತ್ತೆ: ಪ್ರೇಮಿಯೊಂದಿಗೆ ಆ* ಹ*
ಚಾಮರಾಜನಗರ :- ಜಿಲ್ಲೆಯಲ್ಲಿ ಮನಸ್ಸು ಕಲುಕುವಂತಹ ಘಟನೆ ಬೆಳಕಿಗೆ ಬಂದಿದೆ. ಪ್ರೇಮ ಸಂಬಂಧಕ್ಕೆ ಕುಟುಂಬದ ಅಡ್ಡಿಯೇ ಕಾರಣವೋ ಅಥವಾ ಬೇರೆ ಯಾವ ಒತ್ತಡವೋ ಎಂಬ ಅನುಮಾನಗಳ ನಡುವೆ, ಇಬ್ಬರು ಯುವ ಪ್ರೇಮಿಗಳು ಆ* ಹ* ಮಾಡಿಕೊಂಡಿರುವ ಘಟನೆ ಸಮಾಜದ ಮನಸ್ಸಿಗೆ ಭಾರವಾದ ನೆರಳು ಚೆಲ್ಲಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮಿಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಕ್ಕುಂದಿ ಗ್ರಾಮದ ನಾಗೇಂದ್ರ (21) ಹಾಗೂ ಪಾಲಾರ್ ಗ್ರಾಮದ ನದಿಯಾ (19) ಮೃ* ರಾದ ಪ್ರೇಮಿಗಳು ಎಂದು ಗುರುತಿಸಲಾಗಿದೆ. ಮೃತ ನದಿಯಾ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಐಪಿಹೆಚ್ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಅವರು ಹಠಾತ್ ನಾಪತ್ತೆಯಾಗಿದ್ದು, ಸಂಸ್ಥೆಯವರು ಪೋಷಕರಿಗೆ ಮಾಹಿತಿ ನೀಡಲು ಯತ್ನಿಸಿದ್ದರು. ಆದರೆ, ಪಾಲಾರ್ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ...









