ಮೈಸೂರು ಜಿಲ್ಲೆ, ಹೆಚ್.ಡಿ.ಕೋಟೆ ತಾಲೂಕು: ತಾಲೂಕಿನ ಹ್ಯಾಂಡ್ ಪೋಸ್ಟ್ ಜಕ್ಕಳ್ಳಿ ಸಮೀಪದಲ್ಲಿರುವ ಗುಜರಿ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಾನುಗಳು ಸುಟ್ಟು ಕರಕಲಾದ...
ಮೈಸೂರು: ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ್ ಮೈಸೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ...
ಮೈಸೂರು: ಭಾರತೀಯ ಜನತಾ ಪಕ್ಷದ ಸಂಘಟನೆ ಬಲವರ್ಧನೆ ಹಾಗೂ ಮುಂದಿನ ರಾಜಕೀಯ ಕಾರ್ಯಯೋಜನೆಗಳ ಕುರಿತು ಮಹತ್ವದ ಚರ್ಚೆಗಳು ಮೈಸೂರಿನಲ್ಲಿ ನಡೆದವು. ಭಾರತ ಸರ್ಕಾರದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರನ್ನು ಬಿಜೆಪಿ ಮೈಸೂರು ವಿಭಾಗದ ಸಹ ಪ್ರಭಾರಿಯಾಗಿರುವ ಡಾ. ಈ.ಸಿ. ನಿಂಗರಾಜ್ ಗೌಡರು ಭೇಟಿ ಮಾಡಿ ಪಕ್ಷದ ವಿವಿಧ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ಮಾತುಕತೆ ನಡೆಸಿದರು. ಈ ವೇಳೆ ಮೈಸೂರು ವಿಭಾಗದಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ಕ್ರಮಗಳು, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಕ್ರಿಯತೆ ಹೆಚ್ಚಿಸುವ ಯೋಜನೆಗಳು ಹಾಗೂ ಯುವಕರನ್ನು ಹೆಚ್ಚು ಸಂಖ್ಯೆಯಲ್ಲಿ ಪಕ್ಷದತ್ತ ಆಕರ್ಷಿಸುವ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಿತು. ಮುಂದಿನ ಚುನಾವಣಾ ಸನ್ನಾಹದ ಅಂಗವಾಗಿ ಕೈಗೊಳ್ಳಬೇಕಾದ ತಂತ್ರಗಳು, ಸಾರ್ವಜನಿಕ ಸಂಪರ್ಕ ಅಭಿಯಾನಗಳು ಮತ್ತು ಸರ್ಕಾರದ ಯೋಜನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಕುರಿತು ಸಹ ವಿಶೇಷ ಗಮನ ಹರಿಸಲಾಯಿತು. ಡಾ. ನಿಂಗರಾಜ್ ಗೌಡರು ಮೈಸೂರು ಭಾಗದಲ್ಲಿ ನಡೆಯುತ್ತಿರುವ...
ಬೆಂಗಳೂರು: ರಾಜ್ಯದ ಬಿಯರ್ ಮಾರುಕಟ್ಟೆಯಲ್ಲಿ ದಶಕಗಳಿಂದ ಪಾರುಪತ್ಯ ಮೆರೆಯುತ್ತಿದ್ದ ಹಳೆಯ ಹಾಗೂ ದಿಗ್ಗಜ ಬ್ರ್ಯಾಂಡ್ಗಳಿಗೆ ಈಗ ಹೊಸ ಸವಾಲು ಎದುರಾಗಿದೆ. ಎಸ್ಒಎಂ (SOM) ಗ್ರೂಪ್ ಆಫ್ ಕಂಪನೀಸ್ನ ಅಂಗಸಂಸ್ಥೆಯಾದ ‘ವುಡ್ಪೆಕ್ಕರ್ ಡಿಸ್ಟಿಲರೀಸ್ ಅಂಡ್ ಬ್ರೂವರೀಸ್’ ಮಾರುಕಟ್ಟೆಗೆ ಪರಿಚಯಿಸಿರುವ ಸ್ವದೇಶಿ ಬಿಯರ್ ‘ಸನ್ನಿ ಬೀಚಸ್’ (Sunny Beaches), ಅತ್ಯಲ್ಪ ಅವಧಿಯಲ್ಲೇ ಗ್ರಾಹಕರ ಗಮನ ಸೆಳೆಯುವ ಮೂಲಕ ಭರ್ಜರಿ ಯಶಸ್ಸು ಕಂಡಿದೆ. ಮಾರುಕಟ್ಟೆ ಪ್ರವೇಶಿಸಿದ ಕೆಲವೇ ತಿಂಗಳುಗಳಲ್ಲಿ ಈ ಬ್ರ್ಯಾಂಡ್ ಶೇ. 3ಕ್ಕೂ ಅಧಿಕ ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿದೆ. ಅಚ್ಚರಿಯೆಂದರೆ, ಕೇವಲ ಫೆಬ್ರವರಿ ತಿಂಗಳೊಂದರಲ್ಲೇ 12 ಲಕ್ಷಕ್ಕೂ ಹೆಚ್ಚು ‘ಸನ್ನಿ ಬೀಚಸ್’ ಬಿಯರ್ ಬಾಟಲಿಗಳು ಮಾರಾಟವಾಗಿದ್ದು, ಮಾರುಕಟ್ಟೆಯಲ್ಲಿರುವ ಹಳೆಯ ದಿಗ್ಗಜ ಬ್ರ್ಯಾಂಡ್ಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ರಾಜ್ಯದ 10 ಲಕ್ಷಕ್ಕೂ ಹೆಚ್ಚು ಗ್ರಾಹಕರು ಈ ಹೊಸ ರುಚಿಯನ್ನು ಸವಿದಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಬೆಂಗಳೂರು, ಮೈಸೂರು, ಮಂಗಳೂರು...
10.2 ಕೋಟಿ ಉಳಿತಾಯದ “ಸ್ವಚ್ಚ ಮೈಸೂರು” ಬಜೆಟ್: ಸ್ವಚ್ಛತೆ, ಹಸಿರು ಮತ್ತು ಡಿಜಿಟಲ್ ಸೇವೆಗಳಿಗೆ ಮಹಾನಗರಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆ ಮೈಸೂರು, ಮಾ.25: ನಗರವನ್ನು ಸ್ವಚ್ಛತೆ ಮತ್ತು ಪರಿಸರ...
ಮೈಸೂರು, ಮಾ.25: ಕಣ್ಣಿನ ಆರೋಗ್ಯದ ಮೇಲೆ ಮೌನವಾಗಿ ದಾಳಿ ಮಾಡುವ ಗಂಭೀರ ಕಾಯಿಲೆಯಾದ ಗ್ಲಾಕೋಮಾವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ದೃಷ್ಟಿ ಕಳೆದುಕೊಳ್ಳುವುದನ್ನು ತಡೆಯಬಹುದು ಎಂದು ಜೆಎಸ್ಎಸ್...
ಮೈಸೂರು :- ದಾವಣಗೆರೆಯ ಚುನಾವಣ ಪ್ರಚಾರದಲ್ಲಿ ಬಿ ಜೆ ಪಿ ಗರಿಗೆ ಅವಹೇಳನ ಮಾಡಿರುವುದು, ಕಾರ್ಯಕರ್ತರಿಗೆ ಮಾಡಿದ ಅಪಮಾನವಾಗಿದೆ, ಯಾವುದೇ ಪಕ್ಷವಾಗಲಿ ಕಾರ್ಯಕರ್ತರಿಗೆ ಅದರದೇ ಆದ ಗೌರವವಿದೆ, ಶಾಸಕನಾಗಿ ಚುನಾವಣೆ ಪ್ರಚಾರದಲ್ಲಿ ಏನು ಮಾತನಾಡಬೇಕು ಎನ್ನುವುದರ ಪರಿಜ್ಞಾನವಿಲ್ಲದ ಒಬ್ಬ ಮಾನಸಿಕ ರೋಗಿ ಪ್ರದೀಪ್ ಈಶ್ವರ್ ಎಂದರೆ ತಪ್ಪಾಗಲಾರದು ಬಿ ಜೆ ಪಿ ಪಕ್ಷವನ್ನು ಕಾರ್ಯಕರ್ತರನ್ನು ಲಘುವಾಗಿ ಮಾತನಾಡಿರುವ ಲಾಟರಿ ಶಾಸಕ ಪ್ರದೀಪ್ ಈಶ್ವರ್ ರವರೂ ಮಾನಸಿಕ ರೋಗಿಯಾಗಿದ್ದಾರೆ, ಶಾಸಕರ ವೈದ್ಯಕೀಯ ವೆಚ್ಚದಲ್ಲಿ ಅನ್ವಯಿವಂತೆ ಒಳ್ಳೆಯ ಮನೋವೈದ್ಯರಿಗೆ ತೋರಿಸಿ ಒಳ ರೋಗಿಯಾಗಿ ಧಾಖಲು ಮಾಡಿ ಚಿಕಿತ್ಸೆಯನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಲ್ಲಿ ಕೇಳಿಕೊಳ್ಳುತೇನೆ, ಭಾಷಣದಲ್ಲಿ ಮುಸಲ್ಮಾನರೂ ಬಿ ಜೆ ಪಿ ಗೆ ಮತಹಾಕಬೇಡಿ, ನಿಮ್ಮ ದೇಶಭಕ್ತಿ ಪ್ರಶ್ನೆ ಮಾಡಿರುವವರು ಬಿ ಜೆ ಪಿ ಯವರು, ನಿಮ್ಮ ಹೆಣ್ಣು ಮಕ್ಕಳಬಗ್ಗೆ ಕೆಟ್ಟದಾಗಿ ಮಾತನಾಡುವವರು ಬಿ...
ಮೈಸೂರು: ಸಮಾಜದ ಧಾರ್ಮಿಕ ಮೌಲ್ಯಗಳು ಹಾಗೂ ಸಂಪ್ರದಾಯಗಳನ್ನು ಕಾಪಾಡುವ ನಿಟ್ಟಿನಲ್ಲಿ, ಮಠಾಧಿಪತಿಗಳು ಮತ್ತು ಧರ್ಮಗುರುಗಳ ವಿರುದ್ಧ ನಡೆಯುತ್ತಿರುವ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿ ಮೈಸೂರಿನಲ್ಲಿ 25th March, 2026, ಬುಧವಾರ 10.00 ಗಂಟೆಗೆ ಹಳೆ ಡಿಸಿ ಆಫೀಸ್ ಬಳಿ ಮೌನ ಪ್ರತಿಭಟನೆ ನಡೆಸಲಾಯಿತು. ಸಾರ್ವಜನಿಕ ವೇದಿಕೆಗಳಲ್ಲಿ ಸ್ವಾಮೀಜಿಗಳ ಬಗ್ಗೆ ಅವಮಾನಕಾರಿ ರೀತಿಯಲ್ಲಿ ಮಾತನಾಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ‘ಸೇವ್ ಹಿಂದೂಸ್ ಟೆಂಪಲ್ಸ್ ಟ್ರಸ್ಟ್’ ವತಿಯಿಂದ ಆಯೋಜಿಸಲಾದ ಈ ಮೌನ ಪ್ರತಿಭಟನೆಯಲ್ಲಿ ವಿವಿಧ ಸಮುದಾಯಗಳ ಭಕ್ತರು, ಯುವಕರು ಹಾಗೂ ಹಿರಿಯರು ಭಾಗವಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಯಾವುದೇ ಘೋಷಣೆಗಳಿಲ್ಲದೆ ಶಾಂತಿಯುತವಾಗಿ ನಡೆದ ಈ ಪ್ರತಿಭಟನೆ, ಸಮಾಜಕ್ಕೆ ಬಲವಾದ ಸಂದೇಶವನ್ನು ನೀಡುವಂತಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, “ನಮ್ಮ ಧರ್ಮಗುರುಗಳು ನಮ್ಮ ಹೆಮ್ಮೆ” ಎಂಬ ಪ್ಲೆಕಾರ್ಡ್ಗಳನ್ನು ಹಿಡಿದು, ಮಠಾಧಿಪತಿಗಳ ಸೇವೆಯನ್ನು ಸ್ಮರಿಸಿದರು....
ಮೈಸೂರು, ಮಾ.24: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾರ್ಚ್ 27ರಂದು ಶ್ರೀ ರಾಮನವಮಿ ಅಂಗವಾಗಿ ಎಲ್ಲಾ ವಿಧದ ಮಾಂಸ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಮೈಸೂರು ನಗರದ ಧಾರ್ಮಿಕ ಸಂವೇದನೆ ಮತ್ತು ಸಾರ್ವಜನಿಕ ಶಾಂತಿಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೈಸೂರು ಮಹಾ ನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಆದೇಶದ ಪ್ರಕಾರ, ಪಾಲಿಕೆಗೆ ವ್ಯಾಪ್ತಿಗೆ ಸೇರಿದ ಕುರಿ ಮತ್ತು ಮೇಕೆಗಳ ಕಸಾಯಿ ಖಾನೆಗಳ ಜೊತೆಗೆ ನಗರದಲ್ಲಿರುವ ಎಲ್ಲಾ ರೀತಿಯ ಮಾಂಸದ ಅಂಗಡಿಗಳು ಆ ದಿನ ಸಂಪೂರ್ಣವಾಗಿ ಮುಚ್ಚಿರಬೇಕು. ಇದರಲ್ಲಿ ಕುರಿ/ಮೇಕೆ ಮಾಂಸ, ಕೋಳಿ ಮಾಂಸ, ಹಂದಿ ಮಾಂಸ ಹಾಗೂ ಮೀನು ಮಾರಾಟವೂ ಸೇರಿದೆ. ಯಾವುದೇ ರೀತಿಯ ಮಾಂಸದ ವ್ಯಾಪಾರ ಚಟುವಟಿಕೆ ನಡೆಸಿದರೆ ಈ ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಮೈಸೂರು ಮಹಾ ನಗರ ಪಾಲಿಕೆಯ ಅಧಿಕಾರಿಗಳು ಈಗಾಗಲೇ ನಗರ...