Latest News

Latest News

ಜಾಕಿ ಸಂಸ್ಥೆಯು ಸಿಎಸ್ಆರ್ ಅನುದಾನದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಆಂಬುಲೆನ್ಸ್ ಕೊಡುಗೆ.

ಮೈಸೂರು:- ಮೈಸೂರಿನ ಜೆ ಪಿ ನಗರದಲ್ಲಿರುವ ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ (ಜಾಕೀ) ಸಂಸ್ಥೆಯು ತನ್ನ ಸಮಾಜಮುಖಿ ಸೇವೆಗೆ ಮತ್ತೊಂದು ಹೊಸ ಮೈಲುಗಲ್ಲು ಮೂಡಿಸಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯ ಜಿಲ್ಲಾ ಪ್ರತಿಬಂಧಕ  ಮತ್ತು ನಿಯಂತ್ರಣ ಘಟಕಕ್ಕೆ ತನ್ನ ಸಿಎಸ್ಆರ್ ಅನುದಾನದಡಿಯಲ್ಲಿ 32 ಲಕ್ಷ ಮೌಲ್ಯದ ಹೊಸದಾದ ಆಂಬುಲೆನ್ಸ್ ವಾಹನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಬಿ ಸಿ ಕುಮಾರಸ್ವಾಮಿ ಅವರಿಗೆ ಗುರುವಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಮಾತನಾಡುತ್ತಾ ಈ ಆಂಬುಲೆನ್ಸ್ ವಾಹನವು ಎಚ್ಐವಿ ಏಡ್ಸ್, ಸಂಶಯಾತ್ಮಕ ಪ್ರಕರಣಗಳ ತುರ್ತು ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಮತ್ತು ತಪಾಸಣೆಗೆ ಸಹಕಾರಿಯಾಗಲಿದೆ ಎಂದರು. ಇದರಿಂದಾಗಿ ಸೂಕ್ತ ಸಮಯದಲ್ಲಿ ಆಪ್ತ ಸಮಾಲೋಚನೆ ಮತ್ತು ಆರೋಗ್ಯ ಸೇವೆ ನೀಡುವುದರಿಂದ ದೂರದ ಊರುಗಳಿಗೆ ಹತ್ತಿರದ ಆರೈಕೆ ಸಾಧ್ಯವಾಗಲಿದೆ ಎಂದರು. ಈ ಸಂದರ್ಭದಲ್ಲಿ ಜಾಕಿ...
Latest News

ಎಚ್. ಮಟಕೆರೆ ಶಾಲೆಯಲ್ಲಿ ಬಡ್ತಿ ಮುಖ್ಯ ಶಿಕ್ಷಕರಾಗಿದ್ದ ಕೃಷ್ಣಪ್ಪ ರವರಿಗೆ ಬೀಳ್ಕೊಡುಗೆ.

ಹೆಚ್.ಡಿ.ಕೋಟೆ:-   ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಎಚ್ ಡಿ ಕೋಟೆ ತಾಲೂಕಿನ ಎಚ್ ಮಟಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಎಲ್ ಕೃಷ್ಣಪ್ಪ ರವರನ್ನ ಶಾಲೆಯ ಶಿಕ್ಷಕರಿಂದ ಮತ್ತು ಗ್ರಾಮಸ್ಥರು ಅದ್ದೂರಿಯಾಗಿ  ಗುರುವಾರ ಬೀಳ್ಕೊಡುಗೆ ಮಾಡಿದರು. ಈ ಸಂದರ್ಭದಲ್ಲಿ ಕೃಷ್ಣಪ್ಪರವರು ಮಾತನಾಡಿ ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನೆಂದೂ ಚಿರಋಣಿ. ನಾನು ಕಳೆದ ಮೂರು ವರ್ಷ ಇಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸೇವೆ ಸಲ್ಲಿಸಿದ್ದೇನೆ. ಈ ಗ್ರಾಮದ ಜನರ ಬಗ್ಗೆ ನನಗೆ ಅಪಾರ ಮೆಚ್ಚುಗೆ ಇದೆ ಎಂದರು. ಎಲ್ ಕೃಷ್ಣಪ್ಪ ರವರು 32 ವರ್ಷ ಸರ್ಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ಅವರು ಬರುವ ಮೇ 31ಕ್ಕೆ ನಿವೃತ್ತಿಯಾಗಲಿದ್ದಾರೆ. ಪ್ರಸ್ತುತ ಅವರು ಎಚ್ ಡಿ ಕೋಟೆ ತಾಲೂಕಿನ ಮಲಾರ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 8 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ ಪಿ...
Latest News

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಕ್ರೀಡಾ ಸಂಭ್ರಮ: ವಿದ್ಯಾರ್ಥಿನಿಯರಲ್ಲಿ ಕ್ರೀಡಾಮನೋಭಾವ ಬೆಳೆಸಲು ಕರೆ

ಮೈಸೂರು, ಏಪ್ರಿಲ್ : ನಗರದ ಶಿಕ್ಷಣ ವಾತಾವರಣಕ್ಕೆ ಮತ್ತೊಂದು ಚೈತನ್ಯ ತುಂಬುವಂತೆ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನದಲ್ಲಿ ಭರ್ಜರಿಯಾಗಿ ವಾರ್ಷಿಕ...
Latest News

ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ ಆರೋಪ: ಮಾಜಿ ಸಚಿವ ಸಾ.ರಾ. ಮಹೇಶ್–ಸಿ.ಎನ್.ಮಂಜೇಗೌಡ ದಿಢೀರ್ ಭೇಟಿ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ.ಆರ್.ನಗರ. ಏ 02:- ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ...
Latest News

ಹೇಮಾವತಿ ಹೆಗಡೆ ಜನ್ಮದಿನದಂದು ಸೇವೆಯ ಸಡಗರ: ಫಲ ತಾಂಬೂಲ ನೀಡಿ ಗೌರವ

ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ.ಏ. 02:- ಮಹಿಳೆಯರ ಸಬಲೀಕರಣಕ್ಕಾಗಿ ಭೂಮಿಯಲ್ಲಿ ಜನ್ಮ ತಾಳಿದ ಪ್ರತಿಯೊಬ್ಬರು ಹಸಿವಿನಿಂದ ಇರಬಾರದೆಂದು ವಾಸ್ತಲ್ಯದ ಮೂಲಕ ಧನಸಹಾಯ ಮಾಡುತ್ತಿರುವ ಮಾತೃ ಹೃದಯದ...
Latest News

ಪ್ರಾಧ್ಯಾಪಕನ ಜತೆ  ಸುಳ್ಳು ಸಂಬಂಧ ಆರೋಪಕ್ಕೆ ಬೇಸತ್ತು ಜೀವತ್ಯಾಗ: ಚಿತ್ರದುರ್ಗದಲ್ಲಿ ಡೆತ್ನೋಟ್ ಬರೆದು ವಿದ್ಯಾರ್ಥಿನಿ !

ಚಿತ್ರದುರ್ಗ :-  ಜಿಲ್ಲೆಯಲ್ಲಿ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣವು ಗಂಭೀರ ತಿರುವು ಪಡೆದುಕೊಂಡಿದ್ದು, ಸಾವಿಗೆ ಮುನ್ನ ಬರೆದ ಡೆತ್ನೋಟ್ ಇದೀಗ ಹಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಅಪಪ್ರಚಾರ, ಮಾನಸಿಕ ಒತ್ತಡ ಮತ್ತು ಸಾಮಾಜಿಕ ಅವಮಾನ ಒಬ್ಬ ಯುವತಿಯ ಬದುಕನ್ನೇ ಕತ್ತಲೆಗೆ ತಳ್ಳಿದ ದುರಂತವಾಗಿ ಈ ಘಟನೆ ಪರಿಣಮಿಸಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ BAMS ಓದುತ್ತಿದ್ದ ನಿಖಿತಾ (23) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಪ್ರಕರಣದ ತನಿಖೆ ಮುಂದುವರಿದಿರುವ ನಡುವೆ, ಆಕೆ ಸಾವಿಗೂ ಮುನ್ನ ಬರೆದ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿರುವ ವಿಷಯಗಳು ಪ್ರಕರಣಕ್ಕೆ ಹೊಸ ಆಯಾಮ ನೀಡಿವೆ. ನಿಖಿತಾ ತನ್ನ ಡೆತ್ನೋಟ್ನಲ್ಲಿ ಉಪನ್ಯಾಸಕ ಡಾ. ರಾಜು ಅವರೊಂದಿಗೆ ತನ್ನ ಸಂಬಂಧವನ್ನು ಕುರಿತು ಹರಡಿದ ಸುಳ್ಳು ವದಂತಿಗಳೇ ತನ್ನ ಸಾವಿಗೆ ಪ್ರಮುಖ ಕಾರಣ ಎಂದು ಉಲ್ಲೇಖಿಸಿದ್ದಾಳೆ. “ಡಾ. ರಾಜು ಅವರು ನನಗೆ ತಂದೆ ಸಮಾನರು. ಅವರೊಂದಿಗೆ ಯಾವುದೇ...
Latest News

ನೇಣು ಬಿಗಿದುಕೊಂಡು ಆದಿವಾಸಿ ಯುವತಿ ಶ* ವಾಗಿ ಪತ್ತೆ: ಪ್ರೇಮಿಯೊಂದಿಗೆ ಆ* ಹ*

ಚಾಮರಾಜನಗರ :-  ಜಿಲ್ಲೆಯಲ್ಲಿ ಮನಸ್ಸು ಕಲುಕುವಂತಹ ಘಟನೆ ಬೆಳಕಿಗೆ ಬಂದಿದೆ. ಪ್ರೇಮ ಸಂಬಂಧಕ್ಕೆ ಕುಟುಂಬದ ಅಡ್ಡಿಯೇ ಕಾರಣವೋ ಅಥವಾ ಬೇರೆ ಯಾವ ಒತ್ತಡವೋ ಎಂಬ ಅನುಮಾನಗಳ ನಡುವೆ, ಇಬ್ಬರು ಯುವ ಪ್ರೇಮಿಗಳು ಆ* ಹ*  ಮಾಡಿಕೊಂಡಿರುವ ಘಟನೆ ಸಮಾಜದ ಮನಸ್ಸಿಗೆ ಭಾರವಾದ ನೆರಳು ಚೆಲ್ಲಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮಿಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಕ್ಕುಂದಿ ಗ್ರಾಮದ ನಾಗೇಂದ್ರ (21) ಹಾಗೂ ಪಾಲಾರ್ ಗ್ರಾಮದ ನದಿಯಾ (19) ಮೃ* ರಾದ ಪ್ರೇಮಿಗಳು ಎಂದು ಗುರುತಿಸಲಾಗಿದೆ. ಮೃತ ನದಿಯಾ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಐಪಿಹೆಚ್ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಅವರು ಹಠಾತ್ ನಾಪತ್ತೆಯಾಗಿದ್ದು, ಸಂಸ್ಥೆಯವರು ಪೋಷಕರಿಗೆ ಮಾಹಿತಿ ನೀಡಲು ಯತ್ನಿಸಿದ್ದರು. ಆದರೆ, ಪಾಲಾರ್ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ...
Latest News

ಅಪ್ಪನ ಮೇಲಿನ ಕೋಪಕ್ಕೆ ನಾಲ್ಕರ ಮಗುವಿನೊಂದಿಗೆ ವಿಕೃತಿ  ಕಾಲು ಹಿಡಿದು ತಲೆಯನ್ನ ರಸ್ತೆಗೆ ಚಚ್ಚಿದ ಕಿರಾತಕ

ಮುಂಬೈ :- ಮನುಷ್ಯತ್ವವೇ ನಡುಗಿಸುವ ಘಟನೆಯೊಂದು ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಬೆಳಕಿಗೆ ಬಂದಿದ್ದು, ನಾಲ್ಕು ವರ್ಷದ ಪುಟ್ಟ ಮಗುವಿನ ಮೇಲೆ ನಡೆದ ಅಮಾನುಷ ಕೃತ್ಯ ದೇಶವನ್ನೇ ಬೆಚ್ಚಿಬೀಳಿಸಿದೆ. ಮುಂಬೈಯ ಮೀರಾ ರಸ್ತೆ ಪ್ರದೇಶದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಆರೋಪಿಯನ್ನು ಸಂದೀಪ್ ಪವಾರ್ ಎಂದು ಗುರುತಿಸಲಾಗಿದ್ದು, ಆತ ಮಗುವಿನ ತಂದೆಯೊಂದಿಗೆ ನಡೆದ ವೈಯಕ್ತಿಕ ಜಗಳದ ಸಿಟ್ಟನ್ನು ನಿರಪರಾಧ ಮಗುವಿನ ಮೇಲೆ ಹೊರಹಾಕಿದ್ದಾನೆ. ಘಟನೆ ಸಂಭವಿಸಿದ ವೇಳೆ ನಾಲ್ಕು ವರ್ಷದ ಬಾಲಕ ಇತರ ಮಕ್ಕಳೊಂದಿಗೆ ಆಟವಾಡುತ್ತಾ, ಹತ್ತಿರದಲ್ಲಿದ್ದ ಆಟೋದಲ್ಲಿ ಕುಳಿತಿದ್ದನು. ಇದೇ ವೇಳೆ ಆರೋಪಿಯು ಸ್ಥಳಕ್ಕೆ ಬಂದು, ಕೋಪದ ತಲ್ಲಣದಲ್ಲೇ ಬಾಲಕನನ್ನು ಗುರಿಯಾಗಿಸಿಕೊಂಡಿದ್ದಾನೆ. ಏಕಾಏಕಿ ಮಗುವಿನ ಎರಡು ಕಾಲುಗಳನ್ನು ಹಿಡಿದು ಆಟೋದಿಂದ ಕೆಳಕ್ಕೆ ಎಳೆದು ತಂದಿದ್ದಾನೆ. ಅದಾದ ನಂತರ ನಡೆದ ಕ್ರೂರತೆ ಕಣ್ಣಾರೆ ನೋಡಲು ಸಹ ಅಸಹನೀಯ. ಆರೋಪಿಯು ಮಗುವನ್ನು ಬಟ್ಟೆ ಒಗೆದಂತೆ ಎತ್ತಿ, ಅವನ ತಲೆಯನ್ನು ರಸ್ತೆ...
Latest News

01-04-2026 ರ ರಾಶಿ ದಿನಭವಿಷ್ಯ

ಮೇಷ ರಾಶಿ  01-04-2026 (ಬುಧವಾರ) ದಿನದ ರಾಶಿ ಭವಿಷ್ಯ ನಿಮ್ಮ ದಿನ ಬೆಳಗಿನ ಸೂರ್ಯೋದಯದಂತೆ ನಿಧಾನವಾಗಿ ಶುರುವಾಗಿ ಮಧ್ಯಾಹ್ನದ ವೇಳೆಗೆ ಉತ್ಸಾಹದ ತಾಪಕ್ಕೆ ತಲುಪುತ್ತದೆ . ಬೆಳಿಗ್ಗೆ ಕೆಲ ಕೆಲಸಗಳು ಅಡೆತಡೆಗಳೊಂದಿಗೆ ಆರಂಭವಾಗಬಹುದು. ಇದರಿಂದ ಮನಸ್ಸಿನಲ್ಲಿ ಸ್ವಲ್ಪ ಅಸಹನೆ ಮೂಡಬಹುದು. ಆದರೆ ಆತುರ ತೋರದೆ, ಒಂದೊಂದೇ ಕೆಲಸವನ್ನು ಶಾಂತವಾಗಿ ಮುಗಿಸಿದರೆ, ದಿನದ ಎರಡನೇ ಭಾಗದಲ್ಲಿ ಉತ್ತಮ ಫಲಿತಾಂಶ ಕಾಣುತ್ತೀರಿ. ಉದ್ಯೋಗ ಕ್ಷೇತ್ರದಲ್ಲಿ ನೀವು ಮಾಡಿರುವ ಹಳೆಯ ಪರಿಶ್ರಮಕ್ಕೆ ಇಂದು ಗುರುತಿನ ಮುತ್ತು ಬೀಳುವ ಸಾಧ್ಯತೆ ಇದೆ . ಮೇಲಧಿಕಾರಿಗಳಿಂದ ಮೆಚ್ಚುಗೆ ಅಥವಾ ಹೊಸ ಜವಾಬ್ದಾರಿ ಸಿಗಬಹುದು. ವ್ಯವಹಾರಸ್ಥರಿಗೆ ಸಣ್ಣ ಮಟ್ಟಿನ ಲಾಭ ದೊರೆಯುವ ದಿನ. ಆದರೆ ದೊಡ್ಡ ಹೂಡಿಕೆ ಅಥವಾ ತುರ್ತು ನಿರ್ಧಾರಗಳನ್ನು ಮುಂದೂಡಿದರೆ ಒಳಿತು. ಹಣಕಾಸಿನ ವಿಷಯದಲ್ಲಿ “ಕೈಗೆ ಬಂದದ್ದು ಕಾಪಾಡುವುದು” ಎಂಬ ನಿಲುವು ಅಗತ್ಯ . ಅನಾವಶ್ಯಕ ಖರ್ಚುಗಳು ಎದುರಾಗಬಹುದು, ಆದ್ದರಿಂದ ನಿಯಂತ್ರಣ ಮುಖ್ಯ....
Latest News

ಮೈಸೂರಿನಲ್ಲಿ ಕರವೇ ಸ್ವಾಭಿಮಾನಿ ಬಳಗದಿಂದ ಸಾಧಕರ ಸನ್ಮಾನ: ಮಹಿಳಾ ಸಾಧನೆಗೆ ವಿಶೇಷ ಮೆಚ್ಚುಗೆ

 ಮೈಸೂರು: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಸಾಧನೆಯನ್ನು ಮತ್ತಷ್ಟು ಉತ್ತೇಜಿಸುವ ಕಾರ್ಯ ಮೈಸೂರಿನಲ್ಲಿ ಮಂಗಳವಾರ ಗಮನ ಸೆಳೆಯಿತು. ಕರ್ನಾಟಕ...
1 9 10 11 12 13 56
Page 11 of 56