ದಾಸವಾಳದ ಹೂವನ್ನು ನುಂಗಿ ಏಳು ತಿಂಗಳ ಮಗುವಿನ ದುರಂತ ಸಾವು
ಮೈಸೂರು ಜಿಲ್ಲೆ ಹುಣಸೂರು:- ಮೈಸೂರು ಜಿಲ್ಲೆ ಹುಣಸೂರು ತಾಲೂಕು ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಮನೆಯ ಹೊಸಿಲಲ್ಲಿ ಪೂಜೆಗಾಗಿ ಇಟ್ಟಿದ್ದ ದಾಸವಾಳ ಹೂವೇ 7 ತಿಂಗಳ ಮಗುವಿನ ಪ್ರಾಣ ತೆಗೆಯುವಂತಾಗಿದೆ. ದೊಡ್ಡ ಹೆಜ್ಜೂರು ಗ್ರಾಮದ ಸುದರ್ಶನ್ ಹಾಗೂ ನವ್ಯ ದಂಪತಿಯ ಪುತ್ರ ಚಿನ್ಮಯ್ ಗೌಡ (7 ತಿಂಗಳು) ಈ ದುರ್ಘಟನೆಯ ಬಲಿಯಾಗಿದ್ದಾನೆ. ಕುಟುಂಬದ ಸಂತೋಷವನ್ನು ನುಂಗಿದ ಈ ಘಟನೆ ಗ್ರಾಮಸ್ಥರ ಮನದಲ್ಲಿ ಆಘಾತ ಮೂಡಿಸಿದೆ. ಮೊನ್ನೆ ಮನೆಯ ಹೊಸಿಲಿಗೆ ಪೂಜೆ ನೆರವೇರಿಸಿ, ದಾಸವಾಳ ಹೂವುಗಳನ್ನು ಅಲಂಕಾರವಾಗಿ ಇಡಲಾಗಿತ್ತು. ಇದೇ ವೇಳೆ ಚಿನ್ಮಯ್ ತನ್ನ ಅಣ್ಣನ ಜೊತೆ ಮನೆಯ ಹೊರಾಂಗಣದಲ್ಲಿ ಆಟವಾಡುತ್ತಿದ್ದ. ಆಟದ ನಡುವೆ ಮಗುವು ಪೂಜೆಗೆ ಇಟ್ಟಿದ್ದ ದಾಸವಾಳ ಹೂವಿನ ಹಸಿರು ದಿಂಡಿನ ಭಾಗವನ್ನು ಕಿತ್ತು ಬಾಯಿಗೆ ಹಾಕಿಕೊಂಡಿದೆ. ಈ ಸಂಗತಿಯನ್ನು ಗಮನಿಸಿದ ಅಣ್ಣ ತಕ್ಷಣವೇ ಹೂವನ್ನು ಹೊರತೆಗೆಯಲು ಪ್ರಯತ್ನಿಸಿದ್ದಾನೆ. ಆದರೆ ಅಷ್ಟರಲ್ಲೇ ಮಗು...




