ಮೇ 01.ರಂದು ಅರ್ಥಪೂರ್ಣವಾಗಿ ಭಗವಾನ ಬುದ್ಧ ಜಯಂತಿ ಆಚರಣೆ – ಡಾ. ಪಿ ಶಿವರಾಜು
ಮೈಸೂರು ಏಪ್ರಿಲ್ 7:- ಮೇ 01.ರಂದು ಅರ್ಥಪೂರ್ಣವಾಗಿ ಭಗವಾನ ಬುದ್ಧ ಅವರ ಜಯಂತಿಯನ್ನು ನಗರದ ಕಲಾಮಂದಿರದಲ್ಲಿ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಗಳಾದ ಡಾ ಪಿ ಶಿವರಾಜು ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಭಗವಾನ ಬುದ್ಧ ಜಯಂತಿ ,ಆಚರಣೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಜಯಂತಿಗಳನ್ನು ಅರ್ಥಪೂರ್ಣವಾಗಿ ಹಾಗೂ ಸಾಧಕರ ಸಂದೇಶಗಳನ್ನು ಸಮಾಜಕ್ಕೆ ಸಾರಲು, ಅವರ ಜೀವನ ಮೌಲ್ಯಗಳನ್ನು ಸಮಾಜಕ್ಕೆ...
