Latest News

ಶಿಶು ಮರಣ ಪ್ರಮಾಣ ಶೂನ್ಯ ಗೊಳಿಸುವ ನ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗಿ; ಯುಕೇಶ್ ಕುಮಾರ್

ಮೈಸೂರು,ಫೆ.17 :- ಜನವರಿ 2025 ರಿಂದ ಡಿಸೆಂಬರ್-2025 ರ ಅಂತ್ಯಕ್ಕೆ ಒಟ್ಟು 09 ತಾಯಿ ಮರಣ ಪ್ರಕರಣ ಸಂಭವಿಸಿದ್ದು, ರಾಜ್ಯ ಮಟ್ಟದ ಸರಾಸರಿ ಶೇ.69 ರಷ್ಟು ಪ್ರಮಾಣದಲ್ಲಿದ್ದು ಜಿಲ್ಲೆಯ ತಾಯಿ ಮರಣ ಪ್ರಮಾಣ ಶೇ.32.2 ರಷ್ಟಿದ್ದು, ಇಳಿಮುಖವಾಗಿರುವುದು ಕಂಡು ಬಂದಿದೆ. ಡಿಸೆಂಬರ್-2025 ರ ಅಂತ್ಯಕ್ಕೆ 311 ಶಿಶು ಮರಣ ಪ್ರಕರಣಗಳು ಸಂಭವಿಸಿರುತ್ತದೆ. ಪ್ರಸ್ತುತ ರಾಜ್ಯ ಮಟ್ಟದಲ್ಲಿ ಸರಾಸರಿ 19 ರಷ್ಟ್ರು ಪ್ರಮಾಣದಲ್ಲಿದ್ದು, ಜಿಲ್ಲೆಯ ಶಿಶು ಮರಣ ಪ್ರಮಾಣ ಸರಾಸರಿ 11.1...
Latest News

ಕೆ.ಆರ್.ನಗರದಲ್ಲಿ ತೋಪಮ್ಮ ದೇವಿಯ ವಾರ್ಷಿಕ ಜಾತ್ರೆ ಭಕ್ತಿಭಾವದಲ್ಲಿ ಆಚರಣೆ

ಸಾವಿರಾರು ಭಕ್ತರ ಸಮ್ಮುಖದಲ್ಲಿ ತೋಪಮ್ಮ ದೇವಿ ಜಾತ್ರೆ ಕಳೆಗಟ್ಟಿತು ವರದಿ:- ವಡ್ಡರಕೊಪ್ಪಲು ಶಿವರಾಮು ಕೆ.ಆರ್.ನಗರ, ಫೆ.17: ಪಟ್ಟಣದ ಹೊರವಲಯದ ಹಾಸನ–ಮೈಸೂರು ರಸ್ತೆಯಲ್ಲಿರುವ ಆದಿ ಶಕ್ತಿ ತೋಪಮ್ಮ ದೇವಿಯ ವಾರ್ಷಿಕ ಜಾತ್ರೆಯು ಮಂಗಳವಾರ ಭಕ್ತಿಭಾವ ಮತ್ತು ಉತ್ಸವದ ಸಂಭ್ರಮದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರ ಆಗಮನದಿಂದ ದೇವಾಲಯದ ಸುತ್ತಮುತ್ತ ಪ್ರದೇಶ ಜನಸಂದಣಿಯಿಂದ ಕಂಗೊಳಿಸಿದ್ದು, ದಿನವಿಡೀ ಧಾರ್ಮಿಕ ಚಟುವಟಿಕೆಗಳು ಜಾತ್ರೆಗೆ ವಿಶೇಷ ಮೆರುಗು ತಂದವು. ಜಾತ್ರೆಯ ಅಂಗವಾಗಿ ಮುಂಜಾನೆಲೇ ದೇವಾಲಯದ ಬಾಗಿಲು...
Latest News

ಮೈಸೂರಿನಲ್ಲಿ ಶಿವರಾತ್ರಿ ಮಹೋತ್ಸವ – ಭಕ್ತಿಭಾವ ಪೂರ್ಣವಾಗಿ ನಡೆದ ಶಿವ ದೀಪೋತ್ಸವ ಕಾರ್ಯಕ್ರಮ

ಮೈಸೂರು:- ಮಹಾಶಿವರಾತ್ರಿ ಹಬ್ಬದ ಪಾವನ ಪ್ರಯುಕ್ತವಾಗಿ ಮೈಸೂರಿನ ಜಯನಗರದಲ್ಲಿರುವ ಮರುಳೇಶ್ವರ ದೇವಸ್ಥಾನದ ಆವರಣದಲ್ಲಿ, ಮರುಳೇಶ್ವರ ಸೇವಾ ಟ್ರಸ್ಟ್, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಹಾಗೂ ನೇಗಿಲ ಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ವತಿಯಿಂದ ಭಕ್ತಿಭಾವಪೂರ್ಣವಾಗಿ “ಶಿವ ದೀಪೋತ್ಸವ” ಕಾರ್ಯಕ್ರಮವನ್ನು ಭವ್ಯವಾಗಿ ಹಮ್ಮಿಕೊಳ್ಳಲಾಯಿತು. ಶಿವರಾತ್ರಿ ಅಂಗವಾಗಿ ಅಹೋರಾತ್ರಿ ಜಾಗರಣೆ ನಡೆಸಿ, ಅದರೊಂದಿಗೆ ಭರತನಾಟ್ಯ,ರಂಗಗೀತೆಗಳು, ಶಿವ ಪಂಚಾಕ್ಷರಿ ಮಂತ್ರ ಪಾರಾಯಣ ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಭಕ್ತರ ಮನಸ್ಸನ್ನು ಭಕ್ತಿರಸದಲ್ಲಿ...
Latest News

ಮೈಸೂರು ವಿಶೇಷ ಒಲಿಂಪಿಕ್ಸ್ ಕರ್ನಾಟಕ ಕ್ರಿಕೆಟ್ ತಂಡ ಆಯ್ಕೆ — ಮೈಸೂರು ಟ್ರಯಲ್ಸ್ ಯಶಸ್ವಿ

ಮೈಸೂರು: ವಿಶೇಷ ಸಾಮರ್ಥ್ಯ ಹೊಂದಿದ ಕ್ರೀಡಾಪಟುಗಳ ಪ್ರತಿಭೆ, ಹಠಮಾರಿ ಮನೋಭಾವ ಮತ್ತು ಕ್ರೀಡಾ ಮನೋಭಾವವನ್ನು ಪ್ರತಿಬಿಂಬಿಸುವಂತೆ, ವಿಶೇಷ ಒಲಿಂಪಿಕ್ಸ್ ಕರ್ನಾಟಕ ರಾಜ್ಯ ಕ್ರಿಕೆಟ್ ಆಯ್ಕೆ ಟ್ರಯಲ್ಸ್ ಮೈಸೂರಿನ ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ & ರಿಸರ್ಚ್ ನಲ್ಲಿ ಯಶಸ್ವಿಯಾಗಿ ನಡೆಯಿತು. ವಿಶೇಷ ಒಲಿಂಪಿಕ್ಸ್ ಕರ್ನಾಟಕ ಮತ್ತು ದೇವದಾನ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಟ್ರಯಲ್ಸ್ನಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಸುಮಾರು 60 ವಿಶೇಷ ಸಾಮರ್ಥ್ಯ ಹೊಂದಿದ ಕ್ರೀಡಾಪಟುಗಳು...
Latest News

ಕೆಇಆರ್ಸಿ ವತಿಯಿಂದ ಸೆಸ್ಕ್ನ ಟ್ರೂಯಿಂಗ್ ಅಪ್-ಎಪಿಆರ್ ಬಗ್ಗೆ ಸಾರ್ವಜನಿಕ ವಿಚಾರಣೆ

2024-25ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ಪರಿಶೀಲನೆ : ಪ್ರಗತಿ ಮತ್ತು ಸಾಧನೆಗಳ ವಿವರಣೆ ನೀಡಿದ ಕೆ.ಎಂ.ಮುನಿಗೋಪಾಲ್ ರಾಜು ಮೈಸೂರು, ಫೆ.16, 2026: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)ದ 528.12 ಕೋಟಿ ರೂ. ಗಳ ನಿವ್ವಳ ಆದಾಯ ಕೊರತೆ ಸರಿದೂಗಿಸಲು ಸೂಕ್ತ ಆದೇಶ ಹೊರಡಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿತು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣದ ಅಧ್ಯಕ್ಷ ಪಿ.ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ...
Latest News

ಟಿ.ನರಸೀಪುರದಲ್ಲಿ ರೈತ ಸಂಘಟನೆಗಳ ಆಕ್ರೋಶ : ಮುಕ್ತ ವ್ಯಾಪಾರ ಒಪ್ಪಂದ ವಿರೋಧಿಸಿ ಸಹಿಪತ್ರ ದಹನ

 ವರದಿ :-ಎಂ ನಾಗೇಂದ್ರ ಕುಮಾರ್. ಟಿ.ನರಸೀಪುರ, ಫೆ.16: ಕೇಂದ್ರ ಸರ್ಕಾರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಹಿನ್ನೆಲೆಯಲ್ಲಿ ರೈತ ಸಮುದಾಯದ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಟಿ.ನರಸೀಪುರ ತಾಲ್ಲೂಕಿನ ಕಿರಗಸೂರು ಗ್ರಾಮದಲ್ಲಿ ನಡೆದಿದೆ. ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಕರೆ ಹಿನ್ನೆಲೆಯಲ್ಲಿ ಕಿರಗಾಸೂರು  ಗ್ರಾಮ ಪಂಚಾಯತಿ ಕಚೇರಿ ಮುಂಭಾಗದಲ್ಲಿ ರೈತರು ಕರಾರು ಒಪ್ಪಂದದ ಸಹಿಪತ್ರದ ಪ್ರತಿಯನ್ನು...
Latest News

ಗೊಲ್ಲರ ಬೀದಿಯಲ್ಲಿ ಕಿಡಿಗೇಡಿಗಳ ಕೃತ್ಯ: ರಾಗಿ ಹುಲ್ಲಿನ ಮೇದೆಗೆ ಬೆಂಕಿ, ಸಾವಿರಾರು ರೂ. ಮೇವು ಭಸ್ಮ

   ವರದಿ:- ಪಿರಿಯಾಪಟ್ಟಣ ಪ್ರಸನ್ನ. ಪಿರಿಯಾಪಟ್ಟಣ, ಫೆ.16: ನಗರದ ಗೊಲ್ಲರ ಬೀದಿತಲ್ಲಿ ಕಿಡಿಗೇಡಿಗಳಿಂದ ರಾಗಿ ಹುಲ್ಲಿನ ಮೇದೆಗೆ ಬೆಂಕಿ ಹಚ್ಚಿದ ಪರಿಣಾಮ ಸಾವಿರಾರು ರೂಪಾಯಿ ಮೌಲ್ಯದ ಮೇವು ಸುಟ್ಟು ಭಸ್ಮವಾಗಿರುವ ಘಟನೆ ಪಿರಿಯಾಪಟ್ಟಣ ಪಟ್ಟಣದ ಗೊಲ್ಲರ ಬೀದಿಯಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದೆ. ಈ ಘಟನೆಯಿಂದ ರೈತನಿಗೆ ತಮ್ಮ ಜಾನುವಾರುಗಳಿಗೆ ಮೇವು ಇಲ್ಲಾದಂತಾಗಿ  ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಪಟ್ಟಣದ ನಿವಾಸಿ ಹಾಗೂ ರೈತ ರೇವಣ್ಣ ಅವರಿಗೆ ಸೇರಿದ ರಾಗಿ ಹುಲ್ಲಿನ...
Latest News

ನಮ್ಮೂರ ಸರ್ಕಾರಿ ಶಾಲೆ, ಮುಚ್ಚಲು ಬಿಡುವುದಿಲ್ಲ – ಶಿರಮಳ್ಳಿ ಗ್ರಾಮಸ್ಥರ ಆಗ್ರಹ.

ನಂಜನಗೂಡು:-  ತಾಲೂಕಿನ ಶಿರಮಳ್ಳಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಮುಚ್ಚಲಾಗುತ್ತಿದ್ದು ಇದನ್ನು ವಿರೋಧಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಹೇಮಾ ಅವರು ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಶಿರಮಳ್ಳಿ  ಶಾಲೆ ಮುಚ್ಚಿ ಇಲ್ಲಿನ ವಿದ್ಯಾರ್ಥಿಗಳನ್ನು ಹುಲ್ಲಹಳ್ಳಿ  ಕಳುಹಿಸಲಾಗುತ್ತಿದೆ. ಈ ರೀತಿ ಮೈಸೂರು ಜಿಲ್ಲೆಯಲ್ಲಿ 1,666 ಶಾಲೆಗಳನ್ನು ಮುಚ್ಚಲು ಪಟ್ಟಿ ತಯಾರಿಸಲಾಗಿದೆ. ರಾಜ್ಯವ್ಯಾಪಿ 40,000ಕ್ಕೂ...
Latest News

ಕಾವೇರಿ ತೀರದ ನೈಸರ್ಗಿಕ ಸೊಬಗಿನಲ್ಲಿ ಮೆರೆಯುವ ಶ್ರೀರಾಮಲಿಂಗೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಭಕ್ತರಿಂದ ಪೂಜೆ

ಪುರಾಣ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿರುವ ಶ್ರೀರಾಮಲಿಂಗೇಶ್ವ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಹಿನ್ನಲೆ ವಿಶೇಷ ಪೂಜೆ ನಡೆಯಲಿದೆ. ವರದಿ :-ಹೊಸೂರು ಆನಂದ. ಹೊಸೂರು :-ಚುಂಚನಕಟ್ಟೆ ಸಮೀಪದಲ್ಲಿರುವ ಶ್ರೀರಾಮಲಿಂಗೇಶ್ವರ ದೇಗುಲದ ಸನಿಹದಲ್ಲೇ ಜೀವ ನದಿ ಪವಿತ್ರ ಕಾವೇರಿಯ ನದಿ ಹರಿಯುತ್ತಿದೆ, ಹಚ್ಚ ಹಸಿರಿನ ಮರಗಿಡಗಳ ನೆರೆಯಲ್ಲಿ ಹಕ್ಕಿಗಳ ಚಿಲಿಪಿಲಿ ನಿನಾದ ಕಲರವ ಪ್ರವಾಸಿ ಪ್ರಿಯರ ತನುಮನ ತಣಿಸುವ ಸುಂದರ ಸೊಬಗಿನ ಪ್ರಕೃತಿ ನಡುವೆ ಇರುವ ಈ ದೇಗುಲ, ಕಷ್ಟ ಎಂದು ಬರುವ...
Latest News

ಬನ್ನೂರಿನಲ್ಲಿ ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ: ಕಬ್ಬು ಬೆಳೆಗಾರರಿಂದ  ಶಾಂತಿಯುತ ಪ್ರತಿಭಟನೆ

ಬನ್ನೂರು: ಇಂದು ಬನ್ನೂರಿನ ಸಂತೇಮಾಳದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧವಾಗಿ ರೈತರಿಂದ ಆಕ್ರೋಶ ಮತ್ತೊಮ್ಮೆ ಭುಗಿಲೆದ್ದಿದ್ದು, ಬನ್ನೂರಿನಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಬನ್ನೂರು ಗ್ರಾಮಾಂತರ ಘಟಕದ ವತಿಯಿಂದ ಶಾಂತಿಯುತ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಮಾಡಿಕೋಂಡಿರುವ ಒಪ್ಪಂದದ ಕರಾರು ಪ್ರತಿಯನ್ನು  ಸುಡುವ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಲಾಯಿತು. ಬನ್ನೂರು ಪಟ್ಟಣದ ಸಂತೆಮಾಳದ ಬಸವೇಶ್ವರ ವೃತ್ತದಲ್ಲಿರೈತರಿಂದ  ಸಂಘಟಿಸಲಾದ  ಈ ಪ್ರತಿಭಟನೆಯಲ್ಲಿ ರೈತ ಸಂಘದ ಪದಾಧಿಕಾರಿಗಳು...
1 29 30 31 32 33 62
Page 31 of 62