“ಬಂಡಿಪುರ–ನಾಗರಹೊಳೆ ಉಳಿಸಿ” ಘೋಷಣೆಗಳೊಂದಿಗೆ ರೈತ ಸಂಘಟನೆಗಳ ಆಕ್ರೋಶ: ಹಳ್ಳಿಕೆರೆಹುಂಡಿ ಭಾಗ್ಯರಾಜ್
ಮೈಸೂರು, ಫೆ.19:- ಬಂಡಿಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ಹಗಲು ವೇಳೆಯಲ್ಲಿ ಶೇಕಡಾ 50ರಷ್ಟು ಸಫಾರಿ ನಡೆಸಲು ಅವಕಾಶ ನೀಡಿರುವ ಅರಣ್ಯ ಸಚಿವರ ನಿರ್ಧಾರವನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಮುಂದೆ ಪ್ರತಿಭಟನೆ ನಡೆಯಿತು. ಸಫಾರಿ ತಕ್ಷಣ ಬಂದ್ ಮಾಡಬೇಕೆಂದು ಆಗ್ರಹಿಸಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು. ದಿನಾಂಕ 19-02-2026 ರಂದು ಬೆಳಿಗ್ಗೆ 11.45ಕ್ಕೆ ಅರಣ್ಯ ಭವನದ...






