೩ಅಂಕಗಳಿಗೆ ಕಿರುಪರೀಕ್ಷೆಯಲ್ಲಿ ‘ನಿಮ್ಮಬಗ್ಗೆ’ ಕೇಳಲಾಗಿತ್ತು
‘ಅಜ್ಜನ ತೋಟ’ ಅಂತ ಒಂದು ಗದ್ಯಭಾಗ ೮ನೇ ತರಗತಿಯ ತೃತೀಯ ಭಾಷೆ ಕನ್ನಡದಲ್ಲಿ ಇತ್ತು. (ಈಗ ಅದು ಅಜ್ಜಿಯ ತೋಟ ಎಂದು ಬದಲಾಗಿದೆ) ಅದರ ಲೇಖಕರು ಡಾ.ಕೆ.ಸಿ.ಶಶಿಧರ್ ಶಿವಮೊಗ್ಗದಲ್ಲಿಯೇ ನೆಲೆಸಿರುವವರು. ಪಾಠವನ್ನು ಮಾಡುವಾಗ ಅವರನ್ನು ಬೇಕಾದರೆ ಭೇಟಿ ಮಾಡಬಹುದು ನೋಡಿ ಎಂದು ಹೇಳಿದ್ದೆ. ೯ನೇ ತರಗತಿಯಲ್ಲಿ ಸವಿತಾನಾಗಭೂಷಣ ಅವರ ರಚನೆಯ ಪದ್ಯವಿತ್ತು. ಅವರೂ ಸಹ ಶಿವಮೊಗ್ಗದಲ್ಲಿಯೇ ನೆಲೆಸಿದ್ದಾರೆ ಎನ್ನುವುದನ್ನು ತಿಳಿಸಿದ್ದೆ. ತರಗತಿ ಮುಗಿದ ನಂತರದಲ್ಲಿ ಒಂದಿಷ್ಟು ವಿದ್ಯಾರ್ಥಿಗಳು ಬಂದರು, ‘ಸರ್...