Latest News

ಕರ್ನಾಟಕದ ಬಿಯರ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ: ದಿಗ್ಗಜ ಬ್ರ್ಯಾಂಡ್‌ಗಳಿಗೆ ‘ಸನ್ನಿ ಬೀಚಸ್’ ಕಠಿಣ ಪೈಪೋಟಿ

ಬೆಂಗಳೂರು: ರಾಜ್ಯದ ಬಿಯರ್ ಮಾರುಕಟ್ಟೆಯಲ್ಲಿ ದಶಕಗಳಿಂದ ಪಾರುಪತ್ಯ ಮೆರೆಯುತ್ತಿದ್ದ ಹಳೆಯ ಹಾಗೂ ದಿಗ್ಗಜ ಬ್ರ್ಯಾಂಡ್‌ಗಳಿಗೆ ಈಗ ಹೊಸ ಸವಾಲು ಎದುರಾಗಿದೆ. ಎಸ್‌ಒಎಂ (SOM) ಗ್ರೂಪ್ ಆಫ್ ಕಂಪನೀಸ್‌ನ ಅಂಗಸಂಸ್ಥೆಯಾದ ‘ವುಡ್‌ಪೆಕ್ಕರ್ ಡಿಸ್ಟಿಲರೀಸ್ ಅಂಡ್ ಬ್ರೂವರೀಸ್’ ಮಾರುಕಟ್ಟೆಗೆ ಪರಿಚಯಿಸಿರುವ ಸ್ವದೇಶಿ ಬಿಯರ್ ‘ಸನ್ನಿ ಬೀಚಸ್’ (Sunny Beaches), ಅತ್ಯಲ್ಪ ಅವಧಿಯಲ್ಲೇ ಗ್ರಾಹಕರ ಗಮನ ಸೆಳೆಯುವ ಮೂಲಕ ಭರ್ಜರಿ ಯಶಸ್ಸು ಕಂಡಿದೆ. ಮಾರುಕಟ್ಟೆ ಪ್ರವೇಶಿಸಿದ ಕೆಲವೇ ತಿಂಗಳುಗಳಲ್ಲಿ ಈ ಬ್ರ್ಯಾಂಡ್ ಶೇ. 3ಕ್ಕೂ...
Latest News

ಮಹಾನಗರಪಾಲಿಕೆಯಿಂದ 10.2ಕೋಟಿ ಉಳಿತಾಯ ಬಜೆಟ್

10.2 ಕೋಟಿ ಉಳಿತಾಯದ “ಸ್ವಚ್ಚ ಮೈಸೂರು” ಬಜೆಟ್: ಸ್ವಚ್ಛತೆ, ಹಸಿರು ಮತ್ತು ಡಿಜಿಟಲ್ ಸೇವೆಗಳಿಗೆ ಮಹಾನಗರಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆ ಮೈಸೂರು, ಮಾ.25: ನಗರವನ್ನು ಸ್ವಚ್ಛತೆ ಮತ್ತು ಪರಿಸರ ಸ್ನೇಹಿತ್ವದ ದಿಕ್ಕಿನಲ್ಲಿ ಮುನ್ನಡೆಸುವ ಗುರಿಯೊಂದಿಗೆ ಮೈಸೂರು ಮಹಾನಗರಪಾಲಿಕೆ 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ₹10.2 ಕೋಟಿ ಉಳಿತಾಯದ ಸಮತೋಲನ ಬಜೆಟ್ ರೂಪಿಸಿದೆ. “ಸ್ವಚ್ಚ ಮೈಸೂರು” ಎಂಬ ಆಶಯದಡಿ ಮಂಡನೆಯಾದ ಈ ಬಜೆಟ್ನಲ್ಲಿ ಸ್ವಚ್ಛತೆ, ಹಸಿರು ಪರಿಸರ ಮತ್ತು ತಂತ್ರಜ್ಞಾನ ಆಧಾರಿತ ಸೇವೆಗಳಿಗೆ...
Latest News

ಗ್ಲಾಕೋಮಾ ಮೌನ ಕಳ್ಳ: ಮುಂಚಿತ ಪತ್ತೆ ಮಾಡಿದರೆ ದೃಷ್ಟಿ ರಕ್ಷಣೆ ಸಾಧ್ಯ – ಜಾಗೃತಿ ಅಭಿಯಾನಕ್ಕೆ ಚಾಲನೆ

ಮೈಸೂರು, ಮಾ.25: ಕಣ್ಣಿನ ಆರೋಗ್ಯದ ಮೇಲೆ ಮೌನವಾಗಿ ದಾಳಿ ಮಾಡುವ ಗಂಭೀರ ಕಾಯಿಲೆಯಾದ ಗ್ಲಾಕೋಮಾವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ದೃಷ್ಟಿ ಕಳೆದುಕೊಳ್ಳುವುದನ್ನು ತಡೆಯಬಹುದು ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಪ್ರೊ. ಎಸ್.ಪಿ. ಮಂಜುನಾಥ್ ತಿಳಿಸಿದರು. ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಬುಧವಾರ ಆಯೋಜಿಸಿದ್ದ “ಗ್ಲಾಕೋಮಾ ಜಾಗೃತಿ ಅಭಿಯಾನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವ ದೇಹದಲ್ಲಿ ಕಣ್ಣು ಅತ್ಯಂತ ಪ್ರಮುಖ ಅಂಗವಾಗಿದ್ದು, ಇತರ ಕಾಯಿಲೆಗಳಂತೆ ಗ್ಲಾಕೋಮಾ ಯಾವುದೇ ಸ್ಪಷ್ಟ ಮುನ್ಸೂಚನೆ...
Latest News

ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಒಬ್ಬ ಮಾನಸಿಕ ರೋಗಿ,

ಮೈಸೂರು :- ದಾವಣಗೆರೆಯ ಚುನಾವಣ ಪ್ರಚಾರದಲ್ಲಿ ಬಿ ಜೆ ಪಿ ಗರಿಗೆ ಅವಹೇಳನ ಮಾಡಿರುವುದು, ಕಾರ್ಯಕರ್ತರಿಗೆ ಮಾಡಿದ ಅಪಮಾನವಾಗಿದೆ, ಯಾವುದೇ ಪಕ್ಷವಾಗಲಿ ಕಾರ್ಯಕರ್ತರಿಗೆ ಅದರದೇ ಆದ ಗೌರವವಿದೆ, ಶಾಸಕನಾಗಿ  ಚುನಾವಣೆ ಪ್ರಚಾರದಲ್ಲಿ ಏನು ಮಾತನಾಡಬೇಕು ಎನ್ನುವುದರ ಪರಿಜ್ಞಾನವಿಲ್ಲದ ಒಬ್ಬ ಮಾನಸಿಕ ರೋಗಿ ಪ್ರದೀಪ್ ಈಶ್ವರ್ ಎಂದರೆ ತಪ್ಪಾಗಲಾರದು ಬಿ ಜೆ ಪಿ ಪಕ್ಷವನ್ನು ಕಾರ್ಯಕರ್ತರನ್ನು ಲಘುವಾಗಿ ಮಾತನಾಡಿರುವ ಲಾಟರಿ ಶಾಸಕ ಪ್ರದೀಪ್ ಈಶ್ವರ್ ರವರೂ ಮಾನಸಿಕ ರೋಗಿಯಾಗಿದ್ದಾರೆ, ಶಾಸಕರ ವೈದ್ಯಕೀಯ...
Latest News

ಮಠಾಧಿಪತಿಗಳ ವಿರುದ್ಧ ಅವಹೇಳನ ಖಂಡನೆ: ಮೈಸೂರಿನಲ್ಲಿ ಸೇವ್ ಹಿಂದೂ ಟೆಂಪಲ್ಸ್ ವತಿಹಿಂದ ಮೌನ ಪ್ರತಿಭಟನೆ

ಮೈಸೂರು: ಸಮಾಜದ ಧಾರ್ಮಿಕ ಮೌಲ್ಯಗಳು ಹಾಗೂ ಸಂಪ್ರದಾಯಗಳನ್ನು ಕಾಪಾಡುವ ನಿಟ್ಟಿನಲ್ಲಿ, ಮಠಾಧಿಪತಿಗಳು ಮತ್ತು ಧರ್ಮಗುರುಗಳ ವಿರುದ್ಧ ನಡೆಯುತ್ತಿರುವ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿ ಮೈಸೂರಿನಲ್ಲಿ 25th March, 2026, ಬುಧವಾರ 10.00 ಗಂಟೆಗೆ ಹಳೆ ಡಿಸಿ ಆಫೀಸ್ ಬಳಿ ಮೌನ ಪ್ರತಿಭಟನೆ ನಡೆಸಲಾಯಿತು. ಸಾರ್ವಜನಿಕ ವೇದಿಕೆಗಳಲ್ಲಿ ಸ್ವಾಮೀಜಿಗಳ ಬಗ್ಗೆ ಅವಮಾನಕಾರಿ ರೀತಿಯಲ್ಲಿ ಮಾತನಾಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ‘ಸೇವ್ ಹಿಂದೂಸ್ ಟೆಂಪಲ್ಸ್...
Latest News

ಶ್ರೀರಾಮನವಮಿ ಪ್ರಯುಕ್ತ ಮಾ.27ರಂದು ಮೈಸೂರು ನಗರದಲ್ಲಿ ಮಾಂಸ ಮಾರಾಟ ಸಂಪೂರ್ಣ ನಿಷೇಧ

ಮೈಸೂರು, ಮಾ.24: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾರ್ಚ್ 27ರಂದು ಶ್ರೀ ರಾಮನವಮಿ ಅಂಗವಾಗಿ ಎಲ್ಲಾ ವಿಧದ ಮಾಂಸ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಮೈಸೂರು ನಗರದ ಧಾರ್ಮಿಕ ಸಂವೇದನೆ ಮತ್ತು ಸಾರ್ವಜನಿಕ ಶಾಂತಿಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೈಸೂರು ಮಹಾ ನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಆದೇಶದ ಪ್ರಕಾರ, ಪಾಲಿಕೆಗೆ ವ್ಯಾಪ್ತಿಗೆ  ಸೇರಿದ ಕುರಿ ಮತ್ತು ಮೇಕೆಗಳ ಕಸಾಯಿ...
Latest News

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ: ಮೈಸೂರಿನಲ್ಲಿ ಕೆರಿಯರ್ ಮೇಳಕ್ಕೆ ಆಹ್ವಾನ

ಮೈಸೂರುಮಾರ್ಚ್ 26ರಂದು ಮೈಸೂರು ಡಯಟ್ನಲ್ಲಿ “ಕೆರಿಯರ್ ಮೇಳ”: ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿದೀಪ ಮೈಸೂರು, ಮಾ.24: ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮಾರ್ಗದರ್ಶನದ ದೀಪ ಹಚ್ಚುವ ಉದ್ದೇಶದಿಂದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ಮಾರ್ಚ್ 26ರಂದು “ಕೆರಿಯರ್ ಮೇಳ”ವನ್ನು ಆಯೋಜಿಸಲಾಗಿದೆ. ನಜರ್ಬಾದ್ನ ವಸಂತಮಹಲ್ನಲ್ಲಿರುವ ಡಯಟ್ ಆವರಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಪಿ.ಎ.ಬಿ ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕದ...
Latest News

ಯದುವೀರ್ ಹುಟ್ಟುಹಬ್ಬಕ್ಕೆ ಅರ್ಥಪೂರ್ಣ ಸ್ಪರ್ಶ: ವೃದ್ಧರಿಗೆ ಭೋಜನ, ಮನಗಳಿಗೆ ಸಂತೋಷ

ಯದುವೀರ್ ಜನ್ಮದಿನ: ವೃದ್ಧಾಶ್ರಮದಲ್ಲಿ ಅನ್ನಸಂತರ್ಪಣೆ ಮೂಲಕ ಮಾನವೀಯ ಸೇವೆ ಮೈಸೂರು: ಮೈಸೂರು–ಕೊಡಗು ಕ್ಷೇತ್ರದ ಸಂಸದರು ಹಾಗೂ ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹುಟ್ಟುಹಬ್ಬವನ್ನು ಹಿನಕಲ್ನ ವಾತ್ಸಲ್ಯ ಸೇವಾಶ್ರಮದಲ್ಲಿ ಸಮಾಜಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವು ಸಂಭ್ರಮದ ಸದ್ದಿಲ್ಲದೆ, ಮೌನದ ಮಧುರತೆಯ ನಡುವೆ ನಡೆದ ಈ ಕಾರ್ಯಕ್ರಮದಲ್ಲಿ ವೃದ್ಧರಿಗೆ ಹಾಗೂ ಹಿರಿಯ ನಾಗರಿಕರಿಗೆ ಭೋಜನ ಕೂಟ ಏರ್ಪಡಿಸಿ, ಮಾನವೀಯ ಮೌಲ್ಯಗಳಿಗೆ ಮತ್ತೊಮ್ಮೆ ಜೀವ ತುಂಬಲಾಯಿತು.ಮೈಸೂರಿನ ಹಿನಕಲ್ ನಲ್ಲಿ...
Latest News

PUC ಹುಡುಗ–SSLC ಹುಡುಗಿ ಪ್ರೇಮ: ಲವ್ ಜಿಹಾದ್ ವಿವಾದಕ್ಕೆ ತಿರುವು

ಪ್ರೇಮ ಪ್ರಕರಣಕ್ಕೆ ಲವ್ ಜಿಹಾದ್ ಲೇಬಲ್: ಹಲ್ಲೆ ಆರೋಪದೊಂದಿಗೆ ತನಿಖೆ ಚಿಕ್ಕಮಗಳೂರು, ಮಾ.24:- ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಅಪ್ರಾಪ್ತ ಹುಡುಗ-ಹುಡುಗಿ ನಡುವಿನ ಪ್ರೇಮ ಪ್ರಕರಣ ‘ಲವ್ ಜಿಹಾದ್’ ಆರೋಪದೊಂದಿಗೆ ತೀವ್ರ ಉದ್ವಿಗ್ನತೆಗೆ ಕಾರಣವಾಗಿದ್ದು, ಹಲ್ಲೆ ಆರೋಪ ಹಾಗೂ ಪೋಕ್ಸೊ ಪ್ರಕರಣ ಸೇರಿ ದ್ವಂದ್ವ ದೂರುಗಳಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದ ಪಿಯುಸಿ ಓದುತ್ತಿರುವ ಬಾಲಕ ಮತ್ತು ಎಸ್‌ಎಸ್‌ಎಲ್‌ಸಿ ಓದುತ್ತಿರುವ ಬಾಲಕಿ ಪ್ರತಿದಿನ...
Latest News

ಪರಿಶಿಷ್ಟ ಪಂಗಡದ ರಾಷ್ಟೀಯ ಆಯೋಗದ ಸದಸ್ಯರಿಂದ ಹೆಚ್.ಡಿ.ಕೋಟೆ ವಿವಿಧ ಸ್ಥಳಗಳ ಭೇಟಿ

ಮೈಸೂರು, ಮಾ.24:-ಪರಿಶಿಷ್ಟ ಪಂಗಡದ ರಾಷ್ಟೀಯ ಆಯೋಗದ ಸದಸ್ಯೆ ಡಾ: ಆಶಾ ಲಕ್ರಾ ಅವರು ಇಂದು ಹೆಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್ ಬಳಿ ಜೇನು ಕುರುಬ ಮಹಿಳೆಯರು ನಡೆಸುತ್ತಿರುವ ಸಿರಿಧಾನ್ಯ ಸ್ಟೋರ್ ಗೆ ಭೇಟಿ ನೀಡಿ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಸರಿಧಾನ್ಯ ಸ್ಟೋರ್ ನ್ನು 11 ಮಹಿಳೆಯರು ನಡೆಸುತ್ತಿದ್ದು, ರತ್ನಮ್ಮ ಎಂಬುವರು ಈ ಹಿಂದೆ ಜೀವನ ಕಷ್ಟಕರವಾಗಿತ್ತು‌ ಕೆಲಸಕ್ಕಾಗಿ ಕೊಡಗು ಕೇರಳಕ್ಕೆ ವಲಸೆ ಹೋಗುತ್ತಿದ್ದೆ, ಪ್ರತಿ ದಿನ ಬೆಳಗಿನಿಂದ ರಾತ್ರಿಯವರೆಗೆ ಕೂಲಿ ಕೆಲಸ...
1 2 3 4 5 6 52
Page 4 of 52