Latest News

01-03-2026 ರ ದಿನ ಭವಿಷ್ಯ

  ಮೇಷ: ಬ್ಯಾಂಕಿಂಗ್ ಕ್ಷೇತ್ರದ ವ್ಯವಹಾರದಲ್ಲಿ ಲಾಭ. ವಾಹನ ಚಾಲಕರಿಂದ ಮಾಲೀಕರಿಗೆ ಲಾಭ, ಅವಿವಾಹಿತರಿಗೆ ವಿವಾಹ ಯೋಗ. ಶುಭಸಂಖ್ಯೆ: 5 ವೃಷಭ: ರಾಜಕೀಯ ಕ್ಷೇತ್ರದವರಿಗೆ ಶುಭ. ಸ್ವಯಂ ಉದ್ಯೋಗದ ಮಹಿಳೆಯರಿಗೆ ಯಶಸ್ಸು. ವಿದೇಶಿ ಪದಾರ್ಥಗಳ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 1 ಮಿಥುನ: ಕಚೇರಿಯ ಕೆಲಸದಲ್ಲಿ ಯಶಸ್ಸು, ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಇಂದು ಆರ್ಥಿಕವಾಗಿ ಪ್ರಗತಿ ಹೊಂದುತ್ತೀರಿ. ಶುಭಸಂಖ್ಯೆ: 7 ಕಟಕ: ಸಮಾಜಸೇವೆಯಿಂದ ಜನಪ್ರಿಯತೆ ಸಿಗಲಿದೆ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ಹಣಕಾಸಿನ...
Latest News

ಟಿ.ನರಸೀಪುರದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಎಂ. ಅನಿಲ್ ಕುಮಾರ್ ನೇಮಕ

ಟಿ.ನರಸೀಪುರ, ಫೆ.28: ಭಾರತೀಯ ಜನತಾ ಪಾರ್ಟಿ ಮೈಸೂರು ಗ್ರಾಮಾಂತರ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷರಾಗಿ ಎಂ. ಅನಿಲ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಮೈಸೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎನ್. ಸುಬ್ಬಣ್ಣ (ಕುಂಭರಹಳ್ಳಿ ಸುಬ್ಬಣ್ಣ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಕ್ಷದ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಎಸ್‌ಸಿ ಮೋರ್ಚಾ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಈ ನೇಮಕಾತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಎಂ. ಅನಿಲ್ ಕುಮಾರ್ ಅವರು...
Latest News

ಮಿರ್ಲೆ ಸಮೀಪ ಹುಣಸಮ್ಮ ತಾಯಿಯ ಜಾತ್ರೆ ವೈಭವ – ಒಂಬತ್ತು ಗ್ರಾಮಗಳ ಭಕ್ತರ ಮಹಾಸಾಗರ

ಇತಿಹಾಸ ಪ್ರಸಿದ್ಧ ಹುಣಸಮ್ಮ ದೇವಿ ಸಿಡಿ ಮತ್ತು ರಥೋತ್ಸವಕ್ಕೆ ಭಕ್ತರ ಮಹಾಜಾತ್ರೆ ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಫೆ. 28:- ಇತಿಹಾಸ ಪ್ರಸಿದ್ಧ ಹು ಣಸಮ್ಮ ದೇವಿಯ ಸಿಡಿ ಮತ್ತು ರಥೋತ್ಸವ ದೇವಾಲಯದ ಪ್ರಧಾನ ಅರ್ಚಕ ಕುಮಾರಸ್ವಾಮಿ ದೇವಾಲಯದ ಧರ್ಮದರ್ಶಿ ಲೋಕೇಶ್ ಒಂಬತ್ತು ಗ್ರಾಮಗಳ ಯಜಮಾನರ ನೇತೃತ್ವದಲ್ಲಿ ಅತ್ಯಂತ ಅದ್ದೂರಿಯಾಗಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಇಂದು ನಡೆಯಿತು. ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದ ಸಮೀಪವಿರುವ ಹುಣಸಮ್ಮ ತಾಯಿಯ...
Latest News

ಎಚ್.ಡಿ.ಕೋಟೆ: ಸಫಾರಿ ವಾಹನದ ಮುಂದೆ ಅಂಜಿಕೆ ಇಲ್ಲದೆ ಕಾಣಿಸಿಕೊಂಡ ಹೆಣ್ಣು ಹುಲಿ – ಛಾಯಾಗ್ರಾಹಕ ಕ್ಯಾಮೆರಾದಲ್ಲಿ ಸೆರೆ

ಎಚ್.ಡಿ.ಕೋಟೆ, ಫೆ.27:- ತಾಲೂಕಿನ ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಪ್ರದೇಶದ ಸಫಾರಿಯಲ್ಲಿ ಸಂಜೆ ವೇಳೆ ಹೆಣ್ಣು ಹುಲಿ ಕಾಣಿಸಿಕೊಂಡು ಸಫಾರಿಗರಲ್ಲಿ ಉತ್ಸಾಹ ಮೂಡಿಸಿದ ಘಟನೆ ನಡೆದಿದೆ. ನಾಗರಹೊಳೆ ಅರಣ್ಯ ವ್ಯಾಪ್ತಿಯ ದಮ್ಮನಕಟ್ಟೆಯ ಹಳೆಯ ಎಂಎಂ ರಸ್ತೆ ಸಮೀಪದ ಕರಿಯಣ್ಣನ ಮನೆ ಬಳಿ ಸಂಜೆ ಸಫಾರಿಗೆ ತೆರಳಿದ್ದ ವೇಳೆ ಈ ಹೆಣ್ಣು ಹುಲಿ ಕಾಣಿಸಿಕೊಂಡಿತು. ಬೇಟೆಯ ಹುಡುಕಾಟದಲ್ಲಿ ಅರಣ್ಯದೊಳಗಿಂದ ಹೊರಬಂದ ಹುಲಿ ಕೆಲಕಾಲ ಸಫಾರಿ ವಾಹನದ ಸಮೀಪವೇ ತಿರುಗಾಡಿದ್ದು, ಪ್ರವಾಸಿಗರಿಗೆ ಅಪರೂಪದ ದೃಶ್ಯಾವಳಿಯನ್ನು...
Latest News

ಖಾಲಿ ಹುದ್ದೆಗಳ ಶೀಘ್ರ ನೇಮಕಾತಿಗೆ ಆಗ್ರಹಿಸಿ ಯುವಕರ ಪ್ರತಿಭಟನೆ – ಮನವಿ ಪತ್ರ ಸಲ್ಲಿಕೆ

ಮೈಸೂರು, ಫೆ.27: ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ನಗರದ ಚಿಕ್ಕ ಗಡಿಯಾರ ವೃತ್ತದ ಬಳಿ ಯುವಕರು ಹಾಗೂ ಉದ್ಯೋಗಾಕಾಂಕ್ಷಿಗಳು AIDYO ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ಯುವಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರಿ ಇಲಾಖೆಗಳಲ್ಲಿನ ಲಕ್ಷಾಂತರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಉದ್ಯೋಗಾಕಾಂಕ್ಷಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು....
Latest News

ಎರಡನೇ ದಿನಕ್ಕೂ ಮುಂದುವರೆದ ರೈತ ಸಂಘದ ಧರಣಿ – ಪರಿಹಾರ ಮತ್ತು ಉದ್ಯೋಗಕ್ಕೆ ಆಗ್ರಹ

ಮೈಸೂರು, ಫೆ.27: ನಂಜನಗೂಡು ತಾಲೂಕು ಇಮ್ಮಾವು ಗ್ರಾಮದ ಸರ್ವೆ ನಂ. 390ರಿಂದ 430ರವರೆಗೆ ಇರುವ ಜಮೀನಿನ ಗೇಣಿದಾರ ರೈತರಿಗೆ ಪರಿಹಾರ ಪಾವತಿಸುವಂತೆ ಹಾಗೂ ಕಾನೂನುಬಾಹಿರವಾಗಿ ಪರಿಹಾರ ಪಡೆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನಕ್ಕೂ ಮುಂದುವರಿಯಿತು. ಧರಣಿಯಲ್ಲಿ ಭಾಗವಹಿಸಿದ ರೈತರು ಸರ್ಕಾರ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿರುದ್ಧ...
Latest News

ಬಿ.ಎಸ್.ಯಡಿಯೂರಪ್ಪ ಧೀಮಂತ ನಾಯಕರು-ಶ್ರೀವತ್ಸ ಬಣ್ಣನೆ

ಮೈಸೂರು: ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ಶಾಸಕ ಟಿ ಎಸ್ ಶ್ರೀವತ್ಸ ಅವರ ನೇತೃತ್ವದಲ್ಲಿ ಬಿ ಎಸ್ ವೈ ಹೆಸರಿನಲ್ಲಿ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಜನರಿಗೆ ಸಿಹಿ ವಿತರಿಸಲಾಯಿತು. ಪೂಜಾ ನಂತರ ಮಾತನಾಡಿದ ಶ್ರೀವತ್ಸ ಅವರು,ರೈತರ ಪರ ಹೋರಾಟಗಾರರು ಜನನಾಯಕರು, ರಾಜಕೀಯ ಕ್ಷೇತ್ರದಲ್ಲಿ 50 ವಸಂತಗಳನ್ನು ಪೂರೈಸಿದ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರಾದ ಬಿ.ಎಸ್...
Latest News

ಪರಿಸರ ಸಂರಕ್ಷಿಸದಿದ್ದರೆ ಭೂಮಿಯ ವಿನಾಶ : ಭೇರ್ಯ ರಾಮಕುಮಾರ್ ಎಚ್ಚರಿಕೆ

ಕೆ.ಆರ್.ನಗರ:- ಭೂಮಿ ಮನುಷ್ಯನ ಏಕೈಕ ಆವಾಸ ತಾಣ. ಪರಿಸರ ನಾಶ ಮಾಡುತ್ತಾ ಹೋದರೆ ಭೂಮಿಯ ಜೊತೆಗೆ ಮಾನವ ಸಂತತಿಯೂ ವಿನಾಶ ಆಗುವುದು ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಪರಿಸರ ಚಿಂತಕ ಡಾ. ಭೇರ್ಯ ರಾಮಕುಮಾರ್ ಆತಂಕ ವ್ಯಕ್ತಪಡಿಸಿದರು. ಮೈಸೂರು ಜಿಲ್ಲೆ ತಿಪ್ಪುರು ಗ್ರಾಮದ ಸರಕಾರಿ ಪ್ರೌಢ ಶಾಲೆಯ ಪರಿಸರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪರಿಸರ ಸಂರಕ್ಷಣೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ...
Latest News

ಮೈಸೂರು ವಕೀಲರ ಗೃಹ ನಿರ್ಮಾಣ ಸಹಕಾರ ಸಂಘದ ನೂತನ ನಿರ್ದೇಶಕರಿಗೆ ಸನ್ಮಾನ

ಮೈಸೂರು, ಫೆ.22: ಮೈಸೂರು ವಕೀಲರ ಗೃಹ ನಿರ್ಮಾಣ ಸಹಕಾರ ಸಂಘದ 2026–31ನೇ ಅವಧಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರಿಗೆ ಮೈಸೂರು ವಕೀಲರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು. ನಗರದ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್ ಹಾಗೂ ಕಾರ್ಯದರ್ಶಿ ಎ.ಜಿ. ಸುಧೀರ್ ಅವರು ನೂತನ ನಿರ್ದೇಶಕರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ...
Latest News

ಸಮರ್ಥನಂ ಸಂಸ್ಥೆ: ವಿಕಲಚೇತರಿಗೆ ಸಾಧನ ಸಲಕರಣೆ ವಿತರಣೆ

ಮೈಸೂರು:- ಸಮರ್ಥನಂ ಅಂಗವಿಕಲರ ಸಂಸ್ಥೆಯ 29ನೇ ವಾರ್ಷಿಕೋತ್ಸವದ ಅಂಗವಾಗಿ  ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯ ಆವರಣದಲ್ಲಿಂದು  ವಿಕಲಚೇತನರಿಗೆ ವಿವಿಧ ಸಹಾಯಕ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶಿವರಾಮ ದೇಶಪಾಂಡೆ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ತಂತ್ರಜ್ಞಾನದ ಅವಶ್ಯಕತೆ ಇರುತ್ತದೆ. ಆದರೆ ವಿಶೇಷ ಚೇತನರಿಗೆ ಇನ್ನಷ್ಟು ಸುಧಾರಿತ ಹಾಗೂ ನೆರವಾಗುವ ತಂತ್ರಜ್ಞಾನದ ಅಗತ್ಯ ಹೆಚ್ಚಾಗಿದೆ. ತಂತ್ರಜ್ಞಾನದಿಂದ ಯಾರೂ ಹೊರತಲ್ಲ; ಎಲ್ಲರೂ ಅದರ ಸದುಪಯೋಗ ಪಡೆಯಬೇಕು...
1 19 20 21 22 23 58
Page 21 of 58