Latest News

ಸಮೃದ್ಧಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಕ್ಯಾಲೆಂಡರ್ ವಿತರಣೆ

ಮೈಸೂರು:-  ಸಮಾಜಮುಖಿ ಕಾರ್ಯಚಟುವಟಿಕೆಗಳ ಭಾಗವಾಗಿ ಸಮೃದ್ಧಿ ಟ್ರಸ್ಟ್ ವತಿಯಿಂದ ನಗರದ ಸುದರ್ಶನ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕ್ಯಾಲೆಂಡರ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕ್ಯಾಲೆಂಡರ್‌ಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಸಮಯಪಾಲನೆ ಹಾಗೂ ಶಿಕ್ಷಣದತ್ತ ಆಸಕ್ತಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಆಯೋಜಕರು ತಿಳಿಸಿದ್ದಾರೆ. ಶಾಲಾ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಟ್ರಸ್ಟ್ ಸದಸ್ಯರು ಹಾಗೂ ಶಾಲಾ ಆಡಳಿತ ಮಂಡಳಿಯವರು ಸೇರಿ ವಿದ್ಯಾರ್ಥಿಗಳಿಗೆ ಕ್ಯಾಲೆಂಡರ್‌ಗಳನ್ನು...
Latest News

ನಮ್ಮೂರ ಶಾಲೆ ನಮ್ಮ ಅಸ್ತಿತ್ವ, ಶಾಲೆ ಮುಚ್ಚಲು ಬಂದರೆ, ಬಲಿಷ್ಠ ಹೋರಾಟಕ್ಕೆ ಸಿದ್ಧವೆಂದ ಗ್ರಾಮಸ್ಥರು

ನಂಜನಗೂಡಿನ ಡಾ. ಬಿ. ಆರ್ ಅಂಬೇಡ್ಕರ್ ಸರ್ಕಲ್ ಬಳಿ, ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆ ಅಡಿಯಲ್ಲಿ ಮುಚ್ಚುತ್ತಿರುವ ಹದಿನಾರುಮೋಳೆ , ಮೂಡಹಳ್ಳಿ, ಮಲ್ಲರಾಜನಹುಂಡಿ, ಮಾದಯ್ಯನಹುಂಡಿ, ಆಲತ್ತೂರು, ಇಮ್ಮಾವು, ಇಮ್ಮಾವುಹುಂಡಿ (ಉಪ್ಪಲಿಗರ ಉಂಡಿ), ಕೆಂಪಿಸಿದ್ದನಹುಂಡಿ, ಹುಳಿಮಾವು, ತೊರೆಮಾವು, ಬೊಕ್ಕಹಳ್ಳಿ, ಗೀಕಹಳ್ಳಿಹುಂಡಿ, ಆಲಂಬೂರು ಮುಂಟಿ, ಅಳಗಂಚಿ  ಶಾಲೆಗಳನ್ನು ಉಳಿಸಲು, AIDSO ನೇತೃತ್ವದಲ್ಲಿ ನಂಜನಗೂಡು ತಾಲೂಕು  ಮಟ್ಟದ ಪ್ರತಿಭಟನಾ ಸಮಾವೇಶವನ್ನು  ಸಂಘಟಿಸಲಾಗಿತ್ತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸುಭಾಷ್ ಬೆಟ್ಟದ ಕೊಪ್ಪ ಅವರು...
Latest News

ಕೆಂಪಿಸಿದ್ದನ ಹುಂಡಿ ಗ್ರಾಮದ ಸರ್ಕಾರಿ ಶಾಲೆ ಉಳಿವಿಗಾಗಿ ಗ್ರಾಮಸ್ಥರ ಪ್ರತಿಭಟನೆ.

ಮೈಸೂರು :-  ಕೆಂಪಿಸಿದ್ದನ ಹುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಹೊರಟಿರುವ ಸರ್ಕಾರದ ನಡೆ ಖಂಡಿಸಿ ಎಐಡಿಎಸ್ಓ ನೇತೃತ್ವದಲ್ಲಿ ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯನ್ನು ಉದ್ದೇಶಿಸಿ AIKKMS ರೈತ ಸಂಘಟನೆಯ ಕೆಂಪಿಸಿದ್ದನ ಹುಂಡಿ ಗ್ರಾಮ ಸಮಿತಿಯ ಸದಸ್ಯರಾದ ರವಿ ಅವರು ಮಾತನಾಡಿ ಕೆ.ಪಿ.ಎಸ್ ಶಾಲೆಗಳಿಗಾಗಿ ಸರ್ಕಾರವು ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ನಿಂದ 2000 ಕೋಟಿ ಸಾಲವನ್ನು ಈಗಾಗಲೇ...
Latest News

ಮ್ಯೂನಿಕ್‌ನಲ್ಲಿ ತಂತ್ರಜ್ಞಾನದ ಸಂವಾದಗಳಲ್ಲಿ ಪಾಲ್ಗೊಂಡ ಯದುವೀರ್ ಒಡೆಯರ್‌: ಭಾರತ–ಯುರೋಪ್ ಸಹಕಾರ ಬಲಪಡಿಸುವತ್ತ ಹೆಜ್ಜೆ

ಮ್ಯೂನಿಕ್ (ಜರ್ಮನಿ), ಫೆಬ್ರವರಿ 2026: ಮೈಸೂರು ಸಂಸದ ಹಾಗೂ ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಫೆಬ್ರವರಿ 11ರಿಂದ 15ರವರೆಗೆ ಜರ್ಮನಿಯ ಬವೇರಿಯಾದ ಮ್ಯೂನಿಕ್ ನಗರದಲ್ಲಿ ನಡೆಯುತ್ತಿರುವ ಉನ್ನತ ಮಟ್ಟದ ರಾಜತಾಂತ್ರಿಕ ಹಾಗೂ ನೀತಿ ಸಂವಾದಗಳಲ್ಲಿ ಭಾಗವಹಿಸುತ್ತಿದ್ದಾರೆ. ಭಾರತ, ಬವೇರಿಯಾ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಸಹಕಾರ ಬಲಪಡಿಸುವ ಉದ್ದೇಶದಿಂದ ನಡೆಯುತ್ತಿರುವ ಈ ಕಾರ್ಯಕ್ರಮಗಳಲ್ಲಿ ಅವರು ಪ್ರಮುಖ ಭಾಷಣಕಾರರಾಗಿ ಮತ್ತು ಸಂವಾದ ಭಾಗಿಯಾಗಿದ್ದಾರೆ. ಈ ಭೇಟಿಯ...
Latest News

ವಿವಿ ಅತಿಥಿ ಉಪನ್ಯಾಸಕರ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

  ಮೈಸೂರು: ನಗರದ ಮಾನಸಗಂಗೋತ್ರಿಯಲ್ಲಿರುವ ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರ (ಎಂಎಂಟಿಟಿಸಿ)ದಲ್ಲಿ ಮೈಸೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರಿಗಾಗಿ ಆಯೋಜಿಸಿರುವ ಎರಡು ದಿನಗಳ ತರಬೇತಿ ವಿಚಾರಸಂಕಿರಣಕ್ಕೆ ಗುರುವಾರ ಚಾಲನೆ ದೊರೆಯಿತು. ರೂಸಾ 2.0 ಯೋಜನೆಯ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ‘ಪರಿಣಾಮಕಾರಿ ಬೋಧನೆಗೆ ಅಗತ್ಯವಾದ ಕೌಶಲಗಳು’ ಎಂಬ ವಿಷಯದ ಮೇಲೆ ಕೇಂದ್ರೀಕರಿಸಿದೆ. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಅವರು ಮಾತನಾಡಿ, ಶಿಕ್ಷಕ ವೃತ್ತಿಯ ಮಹತ್ವವನ್ನು...
Latest News

ಮಹನೀಯರ ಸಂದೇಶಗಳನ್ನು ಸಮಾಜಕ್ಕೆ ತಿಳಿಸಲು ಅರ್ಥಪೂರ್ಣವಾಗಿ ಜಯಂತಿಗಳ ಆಚರಣೆ – ಡಾ.ಪಿ.ಶಿವರಾಜು

ಮೈಸೂರು ಫೆ.11:- ವಿವಿಧ ಜಯಂತಿಗಳನ್ನು ಅರ್ಥಪೂರ್ಣವಾಗಿ ಹಾಗೂ ಸಾಧಕರ ಸಂದೇಶಗಳನ್ನು ಸಮಾಜಕ್ಕೆ ಸಾರಲು, ಅವರ ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಸಲುವಾಗಿ ವಿವಿಧ ಮಹನೀಯರ ಜಯಂತಿಗಳ ಆಚರಣೆ ಮಾಡಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ವಿವಿಧ ಜಯಂತಿಗಳಾದ ಛತ್ರಪತಿ ಶಿವಾಜಿ ಜಯಂತಿ, ಸಂತ ಕವಿ ಸರ್ವಜ್ಞ ಜಯಂತಿ, ಶ್ರೀ ರೇಣುಕಾಚಾರ್ಯ ಜಯಂತಿ, ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ ಆಚರಣೆ...
Latest News

ಸಿಸಿಬಿ–ಮಂಡಿ ಪೊಲೀಸರ ಕಾರ್ಯಾಚರಣೆ ಮುಂದುವರಿಕೆ: ಡ್ರಗ್ಸ್ ವಿರುದ್ಧ ಕಠಿಣ ಕ್ರಮ

  ಸಿಸಿಬಿ ಹಾಗೂ ಮಂಡಿ ಠಾಣಾ ಪೊಲೀಸರ ನಿರಂತರ ಕಾರ್ಯಾಚರಣೆ: ಎಂ.ಡಿ.ಎಂ.ಎ ಮತ್ತು ಗಾಂಜಾ ವಶ, ಹಲವರು ಬಂಧನ ಮೈಸೂರು:- ನಗರದಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟ, ಸಾಗಾಟ ಹಾಗೂ ಬಳಕೆಯನ್ನು ಕಡಿಗಟ್ಟುವ ಉದ್ದೇಶದಿಂದ ಮೈಸೂರು ನಗರ ಪೊಲೀಸರು ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳು ಮುಂದುವರಿದಿವೆ. ನಗರದ ಸಿಸಿಬಿ (ಸಿಟಿ ಕ್ರೈಂ ಬ್ರಾಂಚ್) ಹಾಗೂ ಮಂಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಸಂಯುಕ್ತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಎಂ.ಡಿ.ಎಂ.ಎ ಹಾಗೂ ಗಾಂಜಾ ಸೇರಿದಂತೆ ವಿವಿಧ ಮಾದಕ...
Latest News

ಮೈಸೂರಿನಲ್ಲಿ ಹೈ ಲೈಫ್ ಬ್ರೈಡ್ಸ್‌ಗೆ ಭವ್ಯ ಚಾಲನೆ

ಮೈಸೂರು: February 11:- ಭಾರತದ ಪ್ರಮುಖ ಮತ್ತು ಪ್ರೀಮಿಯಂ ಮದುವೆ ಹಾಗೂ ಲಕ್ಸುರಿ ಫ್ಯಾಷನ್ ಪ್ರದರ್ಶನಗಳಲ್ಲಿ ಒಂದಾದ ಹೈ ಲೈಫ್ ಬ್ರೈಡ್ಸ್ ಮೈಸೂರಿನಲ್ಲಿ ಭವ್ಯವಾಗಿ ಉದ್ಘಾಟನೆಗೊಂಡಿತು. ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್‌ನಲ್ಲಿ ನಡೆಯುತ್ತಿರುವ ಈ ಎರಡು ದಿನಗಳ ಪ್ರದರ್ಶನ ಫೆಬ್ರವರಿ 11 ಮತ್ತು 12ರಂದು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಸಾರ್ವಜನಿಕರಿಗೆ ತೆರೆದಿರಲಿದೆ. ಈ ಪ್ರದರ್ಶನದಲ್ಲಿ ವಧುವಿನ ಉಡುಪುಗಳು, ಡಿಸೈನರ್ ಸೀರೆಗಳು, ಲೆಹೆಂಗಾಗಳು, ಆಧುನಿಕ ಗೌನ್‌ಗಳು, ಕೈಮಗ್ಗ ಆಭರಣಗಳು ಹಾಗೂ...
Latest News

ನಿಖಿಲ್ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ : ಜಿ.ಪಂ. ಮಾಜಿ ಸದಸ್ಯ ಅಮಿತ್ ವಿ ದೇವರಟ್ಟಿ

ವರದಿ:-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಫೆ.11:- ಜೆಡಿಎಸ್ ಪಕ್ಷದ ವತಿಯಿಂದ ಮತದಾರ ಪರಿಷ್ಕರಣೆ ಮತ್ತು ಬೂತ್ ಮಟ್ಟದ ಏಜೆಂಟ್ರುಗಳ ನೇಮಕ ನೇಮಕ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಮಿತ್  ವಿ ದೇವರೆಟ್ಟಿ ಮಾತನಾಡುತ್ತಿರುವುದು. ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಯೊಂದು ಬೂತ್ ಮಟ್ಟದಲ್ಲಿ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುವವರು ಮತದಾರರ ಪಟ್ಟಿಯನ್ನು ಪರಿಶೀಲಿಸಿ ಮೃತರಾದವರು ಗ್ರಾಮದಿಂದ ಹೊರ ಹೋಗಿರುವವರು ಅವರುಗಳನ್ನು ಮತದಾರ ಪಟ್ಟಿಯಿಂದ ಕೈ ಬಿಡಿಸಿ ಮತ್ತು ಹೊಸದಾಗಿ 18 ವರ್ಷ...
Latest News

ಈಗ (Gold loan) ಚಿನ್ನದ ಸಾಲ ಪಡೆಯುವವರಿಗೆ ಒಳ್ಳೆಯ ಸುದ್ದಿ , ಇನ್ನೂ ಮುಂದೆ 10 ಗ್ರಾಂ ಚಿನ್ನಕ್ಕೆ 85% ವರೆಗೆ ಸಾಲ ಸೀಗುತ್ತದೆ ಆರ್.ಬಿ.ಐ ಹೊಸ ರೂಲ್ಸ್ .

ಇನ್ನೂ ಮುಂದೆ Gold loan ಚಿನ್ನದ ಮೇಲೆ ಸಾಲ ಪಡೆಯುವವರಿಗೆ 2026ರಲ್ಲಿ ಅತಿ ದೊಡ್ಡ ಮಟ್ಟದ ಅನುಕೂಲ ಚಿನ್ನ ಇಟ್ಟಿರುವ ಎಲ್ಲರಿಗೂ ದೊರೆಯಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿನ್ನದ ಸಾಲ ವ್ಯವಸ್ಥೆಯನ್ನು ಇನ್ನಷ್ಟುಸುಲಭವಾಗೊ ಗ್ರಾಹಕರ ಸ್ನೇಹಿಯಾಗಿಸಲು ಹೊಸ ನಿಯಮಗಳನ್ನು ತಂದಿದೆ . RBI ನ ಹೊಸ ಈ ನಿಯಮಗಳ ಮೂಲಕ ಸಣ್ಣ ಸಾಲಗಾರರಿಗೆ ಹೆಚ್ಚಿನ ಹಣ ಸಿಗಲಿದೆ ,ಕಡಿಮೆ ವೇಗದ ಪ್ರಕ್ರಿಯೆ ಮತ್ತು ಎಲ್ಲಾ ಬ್ಯಾಂಕುಗಳ ಮೇಲಿನ ಹೊಣೆಗಾರಿಕೆಯನ್ನು...
1 9 10 11 12 13 40
Page 11 of 40