Latest News

ಕಾರಿಗೆ ಆಕಸ್ಮಿಕ ಬೆಂಕಿ ಕ್ಷಣಾರ್ಧದಲ್ಲಿ ಕಾರು ಸುಟ್ಟು ಭಸ್ಮ…!

ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಚಾಮರಾಜನಗರದ ಹನೂರು ತಾಲೂಕಿನ‌ ಸೂಳೇರಿಪಾಳ್ಯದಲ್ಲಿ ನಡೆದಿದೆ. ಸೂಳೇರಿಪಾಳ್ಯ ಪಂಚಾಯಿತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದಿಂದ ಬೆಂಗಳೂರಿಗೆ ಹೊರಟಿದ್ದ ಕಾರಿಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರು ಕಾಂಚಳ್ಳಿ ಗ್ರಾಮದ ರಾಜು ಎಂಬುವರಿಗೆ ಸೇರಿದ್ದಾಗಿದೆ. ಇನ್ನು ಚಾಲಕ ವೆಂಕಟರಾಜು, ಶ್ರೀನಿವಾಸ್ ಮತ್ತು ರಘು ಎಂಬುವವರು ಕಾರ್ಯನಿಮಿತ್ತ...
Latest News

ಹಸುಗೂಸಿಗೆ ಚಿತ್ರಹಿಂಸೆ ನೀಡಿದ ಕ್ರೂರಿ ತಾಯಿಯ ಬಂಧನ

ಪುಟ್ಟ ಮಗುವಿಗೆ ತಾಯಿಯ ಚಿತ್ರಹಿಂಸೆ ವೀಡಿಯೋ ವೈರಲ್, ಮಹಿಳೆಯ ಬಂಧನ ಇನ್ನೂ ಮಾತೂ ಬರದ ಮಗುವೆಂಬುದನ್ನೂ ಮರೆತು ಚಪ್ಪಲಿಯಿಂದ ಹೊಡೆದು, ಗಲ್ಲದ ಮೇಲೆ ರಕ್ತ ಬರುವಂತೆ ಬಾಯಿಗೆ  ಗುದ್ದಿ ತಾನೇ ಮೋಬೈಲ್ ನಲ್ಲಿ ವೀಡಿಯೋ ಚಿತ್ರೀಕರಿಸಿದ್ದ ಆ ತಾಯಿಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿತ್ತು. ತನ್ನ ಹದಿನೆಂಟು ತಿಂಗಳ ಮಗನನ್ನು ಕ್ರೂರವಾಗಿ ಥಳಿಸಿದ 22 ವರ್ಷದ ಮಹಿಳೆಯನ್ನು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಭಾನುವಾರ ತಮಿಳುನಾಡು ಪೋಲಿಸರು ಬಂಧಿಸಿದ್ದಾರೆ. ಬಂಧಿತ ಮಹಿಳೆ ತುಳಸಿಗೆ ವಡಿವಾಜಗನ್ ಎಂಬಾತನೊಂದಿಗೆ 5...
Latest News

ಮೈಸೂರಿನಲ್ಲಿ ದರೋಡೆ ಪ್ರಕರಣ – 6 ಮಂದಿ ಪೊಲೀಸರ ವಶಕ್ಕೆ!

ಡಕಾಯಿತಿ, ಫೈರಿಂಗ್ ವಿಚಾರವಾಗಿ ಮೈಸೂರಿನಲ್ಲಿ ಡಿಜಿ & ಐಜಿ ಸುದ್ದಿಗೋಷ್ಠಿ ನಡೆಸಿದ್ದು, ಐದು ಟೀಂನಿಂದ ದೇಶದ ಬೇರೆ ಬೇರೆ ಭಾಗಕ್ಕೆ ಹೋಗಿದ್ರು. ಮೈಸೂರು ಪೊಲೀಸ್ ಆಯುಕ್ತರು ತಂಡ ರಚನೆ ಮಾಡಿದ್ರು. ಪ್ರಕರಣ ಸಂಬಂಧ ಆರು ಮಂದಿಯ ಬಂಧನ. ಮೈಸೂರಿನ ಒಬ್ಬರು ಈ ಪ್ರಕರಣದಲ್ಲಿ ಭಾಗಿಯಾಗಿದ್ದರು. ವೆಸ್ಟ್ ಬೆಂಗಾಲ್, ಮುಂಬಯಿ, ರಾಜಸ್ಥಾನ, ಜಮ್ಮು ಅಂಡ್ ಕಾಶ್ಮೀರ್‌ನಲ್ಲಿ ಅರೆಸ್ಟ್ ಮಾಡಲಾಗಿದೆ. 8 ಮಂದಿಯಲ್ಲಿ 6 ಮಂದಿಯನ್ನ ಈಗಾಗಲೇ ವಶಕ್ಕೆ ಪಡೆದಿದ್ದೇವೆ. ಪ್ಲಾನ್ ಮಾಡಿದ್ದು...
Latest News

ಎಂಎಲ್’ಎ ಟಿಕೆಟ್ !!! ನಾನು ಕಾಂಗ್ರೆಸ್ ಸೇರಬೇಕಾದರೆ ನನ್ನ ಮಗನಿಗೆ ಟಿಕೆಟ್ ನೀಡಬೇಕು

ಮೈಸೂರು: ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ನನ್ನ ಮಗ ಜಿ.ಡಿ. ಹರೀಶ‍್ ಗೌಡ ಅವರಿಗೆ  ಕಾಂಗ್ರೆಸ್ ವಿಧಾನಸಭೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದರೆ ನಾವು ಕಾಂಗ್ರೆಸ್ ಸೇರ್ಪಡೆಯಾಗುತ್ತೇವೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು. ಹೂಟಗಳ್ಳಿ ನಗರಸಭೆಯನ್ನು ಶುಕ್ರವಾರ ಉದ್ಘಾಟಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ನಿಲುವನ್ನು ಈಗಾಗಲೇ ಪ್ರಕಟ ಮಾಡಿದ್ದೇನೆ. 2 ವರ್ಷದಿಂದ ಜೆಡಿಎಸ್ ಪಕ್ಷದಿಂದ ನಾನು ದೂರ ಉಳಿದುಕೊಂಡಿದ್ದೇನೆ. ಅವರು ಸಹ ನನ್ನನ್ನು ಕರೆಯುತ್ತಿಲ್ಲ. ಕಳೆದ...
Latest News

ಇಂತಹ ದುಷ್ಕೃತ್ಯ ಎಲ್ಲಿಯೂ ನಡೆಯಬಾರದು ಅಂತಹ ಶಿಕ್ಷೆಗಳು ಆಗಬೇಕು – ಇಂದ್ರಜಿತ್ ಲಂಕೇಶ್

ಮೈಸೂರು: ನಿರ್ಭಯಾ ಕೇಸ್‍ ನಂತರ ಅತ್ಯಾಚಾರಿಗಳಿಗೆ ಯಾವ ಶಿಕ್ಷೆಯನ್ನು ನೀಡಬೇಕೆಂದು ಸುಪ್ರೀಂಕೋರ್ಟ್ ತೀರ್ಮಾನ ಮಾಡಿದೆಯೋ ಅದನ್ನೇ ಮೈಸೂರಿನ ಪ್ರಕರಣಕ್ಕೂ ಜಾರಿ ಮಾಡಬೇಕು ಎಂದು ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರು ಹೆಣ್ಣು ಮಕ್ಕಳು ಮಧ್ಯರಾತ್ರಿಯಲ್ಲಿ ಓಡಾಡುವಂತಾದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಂತೆ ಎಂದಿದ್ದರು. ಆದರೆ ಇವತ್ತು ಈ ಪ್ರಕರಣದ ಬಗ್ಗೆ ರಾಜಕಾರಣಿಗಳು ಆ ಯುವತಿ ಆ ಜಾಗಕ್ಕೆ ಏಕೆ  ಹೋಗಿದ್ರು ಅಂತ ಕೇಳುತ್ತಿದ್ದಾರೆಯೇ...
Latest News

ಮೈಸೂರು ಗ್ಯಾಂಗ್ ರೇಪ್ ಘಟನಾ ಸ್ಥಳಕ್ಕೆ ಎಡಿಜಿಪಿ ಭೇಟಿ

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಮೊಬೈಲ್‌ ಟವರ್‌ ಲೋಕೆಷನ್‌ ಬಳಸಲು ಪೊಲೀಸರು ಮುಂದಾಗಿದ್ದು, ಫಿಲ್ಟರ್‌ ಮೂಲಕ ಆರೋಪಿಗಳ ಪತ್ತೆ ಕಾರ್ಯ ಮುಂದುವರೆಸಿದ್ದಾರೆ.   ಹೈಲೈಟ್ಸ್‌: ಮೈಸೂರು ಗ್ಯಾಂಗ್‌ ರೇಪ್‌ ಘಟನಾ ಸ್ಥಳಕ್ಕೆ ಎಡಿಜಿಪಿ ಪ್ರತಾಪ್‌ ರೆಡ್ಡಿ ಭೇಟಿ ಮೊಬೈಲ್‌ ಟವರ್‌ ಲೋಕೆಷನ್‌ನಿಂದ ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರು ತನಿಖೆ ಪ್ರಗತಿ...
Latest News

ಕೊಡಗಿನ ಕೋಟೆ ಬೆಟ್ಟಕ್ಕೆ ಕುರಂಜಿ ಹೊದಿಕೆ

A Kurunji Blanket for the Kodagu Fort Hill ಮಡಿಕೇರಿ: ಕೊಡಗಿನ ಕೋಟೆ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕಾರಣ ಈ ಬೆಟ್ಟದಲ್ಲಿ ಕುರುಂಜಿ ಮತ್ತೆ ಹೂಬಿಟ್ಟಿದೆ. ಇದು ನೀಲಿ ಸುಂದರಿಯಾಗಿ ಕಣ್ಮನ ಸೆಳೆಯುತ್ತಿದೆ. ಮಡಿಕೇರಿ ಸಮೀಪ ಇರುವ ಮಾಂದಾಲಪಟ್ಟಿ ಬೆಟ್ಟಶ್ರೇಣಿಯಲ್ಲಿರುವ ಕೋಟೆ ಬೆಟ್ಟವು ಕುರುಂಜಿ ಗಿಡಗಳಿಂದ ಆವೃತವಾಗಿದ್ದು, ಇದುವರೆಗೆ ಹಸಿರಾಗಿದ್ದ ಗಿಡಗಳು ಹನ್ನೆರಡು ವರ್ಷದ ಬಳಿಕ ನೀಲಿ ಹೂಗಳನ್ನು ಬಿಟ್ಟಿರುವ ಕಾರಣದಿಂದ ಇಡೀ ಬೆಟ್ಟ ನೀಲಿಯಾಗಿ ಕಾಣುತ್ತಿದ್ದು,...
Latest News

ರಾಜಕೀಯ ಹಗ್ಗಜಗ್ಗಾಟದ ನಡುವೆಯೂ ಬಿಜೆಪಿಗೆ ಒಲಿದ ಮೇಯರ್‌ ಗಿರಿ

ಮೈಸೂರಿನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಬಿಜೆಪಿಗೆ ಮೇಯರ್ ಪಟ್ಟ ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ತಂತ್ರಗಾರಿಕೆಗೆ ಸಿಕ್ಕ ಜಯ. 38 ವರ್ಷಗಳ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಯವರು ಮೇಯರ್ ಮುಖ್ಯಮಂತ್ರಿಗಳು, ಬಿಜೆಪಿ ರಾಜ್ಯಾಧ್ಯಕ್ಷರಿಂದಲೂ ಸಚಿವರಾದ ಸೋಮಶೇಖರ್ ಅವರಿಗೆ ಅಭಿನಂದನೆ ಮೈಸೂರು: ಮೈಸೂರಿನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಭಾರತೀಯ ಜನತಾ ಪಕ್ಷ ಮೇಯರ್ ಹುದ್ದೆಯನ್ನು ಪಡೆದಿದೆ. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್...
Latest News

ಅಮೆರಿಕವನ್ನು ಹಿಂದಿಕ್ಕಿ ನಂ.2ನೇ ಸ್ಥಾನಕ್ಕೆ ಜಿಗಿದ ಭಾರತ !

ಹೊಸದಿಲ್ಲಿ: ಭಾರತ ಇದೀಗ ವಿಶ‍್ವದ ನೆಚ್ಚಿನ ಉತ್ಪಾದಕರ ತಾಣವಾಗಿ ಹೊರ ಹೊಮ್ಮುತ್ತಿದ್ದು, ಅಮೆರಿಕವನ್ನು ಹಿಂದಿಕ್ಕಿ ಭಾರತ ನಂ.2ನೇ ಸ್ಥಾನ ಪಡೆದುಕೊಂಡಿದೆ. ಜಾಗತಿಕ ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ಕಶ್‌’ಮನ್‌ ಆ್ಯಂಡ್  ವೇಕ್‌ಫೀಲ್ಡ್‌ ಪ್ರಸಕ್ತ ವರ್ಷದ ಜಾಗತಿಕ ಉತ್ಪಾದನ ಸವಾಲುಗಳ ಸೂಚ್ಯಂಕವನ್ನು ಆಧರಿಸಿ ಈ ಮಾಹಿತಿ ಯನ್ನು ಪ್ರಕಟಿಸಿದೆ. ಯುರೋಪ್‌, ಅಮೆರಿಕ, ಏಷ್ಯಾ ಪೆಸಿಫಿಕ್‌ನ 47 ರಾಷ್ಟ್ರಗಳ ಪರಿಸ್ಥಿತಿಯನ್ನು ಅವಲೋಕಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಉತ್ಪಾದಕರ ಖರ್ಚು, ಸ್ಪರ್ಧಾತ್ಮಕತೆ, ಗುಣಮಟ್ಟಗಳನ್ನು ಪರಿಶೀಲಿಸಿ ವಿವಿಧ...
Health

ಕೊರೋನಾದ ಭಯದಲ್ಲಿ “ಕ್ಷಯ” ರೋಗದ ಲಕ್ಷಣ ಗಮನವಿರಲಿ !

ಕೊರೋನಾದ ಭಯದಲ್ಲಿರುವ ನಮಗೆ ಇತರೆ ರೋಗಗಳು ಬಾಧಿಸಿದರೂ ಗೊತ್ತಾಗುತ್ತಿಲ್ಲ. ಜತೆಗೆ ಆಸ್ಪತ್ರೆಗೆ ಹೋಗಲು ಬಹಳಷ್ಟು ಮಂದಿ ಭಯಪಡುತ್ತಿದ್ದಾರೆ. ಹೀಗಾಗಿಯೇ ಹೆಚ್ಚಿನ ಸಮಸ್ಯೆಗಳಿಗೆ ಜನ ಒಳಗಾಗುತ್ತಿದ್ದಾರೆ. ಕೆಲವೊಮ್ಮೆ ಕೆಮ್ಮು, ಜ್ವರ, ಕಫ ಕೇವಲ ಕೊರೋನಾದ ಲಕ್ಷಣಗಳು ಆಗಿರದೆ ಅದು ಕ್ಷಯ ರೋಗದ ಲಕ್ಷಣವಾಗಿದ್ದರೂ ಅಚ್ಚರಿಪಡಬೇಕಾಗಿಲ್ಲ. ಯಾರೇ ಆಗಲಿ ಮೇಲಿನ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರಿಗೆ ತೋರಿಸಿ ಪರೀಕ್ಷೆ ಮಾಡಿಸಿ ತಮಗೆ ಬಂದಿರುವ ಕಾಯಿಲೆ ಯಾವುದು ಎಂಬುದನ್ನು ಮೊದಲು ಅರಿತುಕೊಂಡು ಅದಕ್ಕೆ...
1 13 14 15 16 17 27
Page 15 of 27