archiveFarmer

Articles

ತನ್ನ ಪ್ರೀತಿಯ ಪುತ್ರಿಗೆ ಅನ್ನದಾತನ ಬಿನ್ನಹ!!

ಹಚ್ಚ ಹಸಿರ ಭೂಮಿ... ಕಡುಕಪ್ಪು ಮೋಡ... ಬಣ್ಣದ ಕನಸುಗಳ ಬಿತ್ತೋಣ ಬಾರ!! ಶಾಲೆಯಂತೂ‌ ತೆರೆಯಲಿಲ್ಲ!! ಜೊತೆಯಾಗಿ ಕೂಡಿ‌ ಆಡೊಂಗಿಲ್ಲ!! ಪ್ರಕೃತಿಯ‌‌ ಮಡಿಲಲ್ಲಿ ಆಡುವಂತೆ ಬಾರ!! ಹೊಲಗದ್ದೆಯ‌ ತುಂಬೆಲ್ಲಾ ಹರಡಿಹದು ಹಸಿರೆಂಬ ಉಸಿರು! ಈ ಹಸಿರಲ್ಲಡಗಿದೆ ನನ್ನಂತ ಕೋಟ್ಯಾಂತರ ಜನರ ಉಸಿರು!! ಹಗರಿಳಿರುಳು ನಾ ದುಡಿಯುವೆ ಕೂಡಿಸಲು ನಿನಗಾಗಿ ನಾಕು ಕಾಸು! ನನ್ನಂತೆ ಇಲ್ಲಿಹರು ನೂರಾರು ಜನರು!! ಚೆನ್ನಾಗಿ ಓದಿ ನೀ ಆಗಬೇಕು ಅಸಹಾಯಕರಿಗೆ ಬೆಳಕು! ಬೆಳಗಿಸಬೇಕು ನೀನು‌ ಸಮಾಜದ ನೂರಾರು...
gaanada oil askmysuru
Agriculture

ಪೆಟ್ರೋಲಿಯಂ ಉತ್ಪನ್ನಗಳ ಕಲಬೆರಕೆಯ ರಿಫೈನ್ಡ್ ಎಣ್ಣೆ ಬೇಕೋ..? ಆರೋಗ್ಯಕ್ಕೆ ಪೂರಕವಾದ ಅಂಶಗಳೇ ತುಂಬಿರುವ ಗಾಣದ ಎಣ್ಣೆ ಬೇಕೋ..?

ಆತ್ಮೀಯ ರೈತ ಬಾಂಧವರೇ ಯುವ ರೈತರೇˌ ಕೆ.ಆರ್.ನಗರ ತಾಲ್ಲೂಕಿನ ಅಡಗನಹಳ್ಳಿ ಗ್ರಾಮದಲ್ಲಿ ಸಾವಯವ ಕೃಷಿಯೊಂದಿಗೆ ಮರದ ಎತ್ತಿನಗಾಣವಾಡಿಸುತ್ತಾ ಅದರ ದೇಸಿ ಸೊಗಡನ್ನು ದೇಶದಾದ್ಯಂತ ಹಾಗೂ ಕೆಲವು ಹೊರದೇಶಗಳಿಗೂ ಪಸರಿಸುತ್ತಿರುವ ಶ್ರೀ ನವೀನ್ ಕುಮಾರ್ ರವರ ಕ್ಷೇತ್ರಕ್ಕೆ ಸ್ನೇಹಿತನೊಂದಿಗೆ ತೆರಳಿದ್ದೆನು. ನಿಜಕ್ಕೂ ಅಲ್ಲಿ ನನಗಾದಂತಹ ಅನುಭವ ಅದ್ಬುತ. 2 ಎಕರೆ ಪ್ರದೇಶದಲ್ಲಿ ಸುಭಾಷ್ ಪಾಳೇಕಾರ್ ಪದ್ದತಿಯಲ್ಲಿ ನುಗ್ಗೆˌ ಸೀಬೆˌ ಪಪಾಯˌ ಸೊಪ್ಪುˌ ತರಕಾರಿಗಳುˌ ಅಲಸಂದೆˌ ತೆಂಗುˌಅಡಿಕೆˌ ಶುಂಠಿˌ ಅರಿಶಿನˌ ಬೆಂಡೆ ˌಹೀಗೆ...
Articles

ದುಡಿವ ನೀವೇ ಮಡಿದ ಮೇಲೆ ಯಾರು ಜಗಕೆ ಆಸರೆ

ರೈತರ ಆತ್ಮಹತ್ಯೆ ದುಡುಕಬೇಡಿ ರೈತರೇ ನಾಡಿನನ್ನದಾತರೇ ದುಡಿವ ನೀವೇ ಮಡಿದ ಮೇಲೆ ಯಾರು ಜಗಕೆ ಆಸರೆ || ಬಾಳಿನಲ್ಲಿ ಕಷ್ಟಸುಖಗಳೆರಡು ಸಹಜವಲ್ಲವೇ ಇರುಳು ಕಳೆದ ಮೇಲೆ ಮತ್ತೆ ಹಗಲು ಬರುವುದಿಲ್ಲವೇ ಸಾಲಕಂಜಿ ಶೂಲಕೇಕೆ ಕೊರಳ ನೀಡುತ್ತಿರುವಿರಿ ಆತ್ಮಹತ್ಯೆ ಮಹಾಪಾಪ ಎನ್ನುವ ನಿಜವರಿಯಿರಿ || ತಾಯಿಹಾಲು ಮಗುವಿಗೆಂದು ಕೊಲ್ಲುವ ನಂಜಾಗದು ಬೆಳೆವಭೂಮಿ ದುಡಿಯುವವರಿಗೆಂದು ವಿಷವನುಣಿಸದು ನಾಣ್ಯದೆರಡು ಮುಖಗಳಂತೆ ಲಾಭ ನಷ್ಟವಲ್ಲವೇ ಸೋಲಿನ ಸೋಪಾನಗಳಲ್ಲಿ ಗೆಲುವಿನ ಗುರಿಯಿಲ್ಲವೇ || ಹಬ್ಬಗಳಲಿ ಬೇವು ಬೆಲ್ಲ...
error: Content is protected !!