Latest News

ಮೈಸೂರಿನಲ್ಲಿ ಕರಾಮುವಿ ಕುಲಪತಿಗೆ ‘ಸಿ.ಎನ್.ಆರ್. ರಾವ್ ವಿಜ್ಞಾನ ಪುರಸ್ಕಾರ’ ಪ್ರಧಾನ

ಮೈಸೂರು, ಮಾ.07: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕರಾಮುವಿ) ಆವರಣದಲ್ಲಿ ಶನಿವಾರ ನಡೆದ ವಿಶೇಷ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರಿಗೆ ‘ಭಾರತ ರತ್ನ ಡಾ. ಸಿ.ಎನ್.ಆರ್. ರಾವ್ ವಿಜ್ಞಾನ ಪುರಸ್ಕಾರ–2026’ ಪ್ರದಾನ ಮಾಡಲಾಯಿತು. ಬೆಂಗಳೂರಿನ ಸ್ವದೇಶಿ ವಿಜ್ಞಾನ ಆಂದೋಲನ–ಕರ್ನಾಟಕ ವತಿಯಿಂದ ಈ ಪ್ರತಿಷ್ಠಿತ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಸ್ವದೇಶಿ ವಿಜ್ಞಾನ ಆಂದೋಲನದ ಅಧ್ಯಕ್ಷರಾದ ಡಾ. ಎಂ.ಎಸ್. ಜಗದೀಶ್ ಅವರು ಪ್ರೊ. ಶರಣಪ್ಪ ವಿ. ಹಲಸೆ ಅವರಿಗೆ ಪ್ರಶಸ್ತಿ ಫಲಕ, ಗೌರವಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲದ ಸೇವೆ, ಸಂಶೋಧನೆಗೆ ನೀಡಿದ ಕೊಡುಗೆ ಮತ್ತು ಶೈಕ್ಷಣಿಕ ಆಡಳಿತದಲ್ಲಿ ತೋರಿದ ದೂರದೃಷ್ಟಿಯ ನಾಯಕತ್ವವನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗಿದೆ ಎಂದು ಆಯೋಜಕರು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಂ.ಎಸ್. ಜಗದೀಶ್, “ಪ್ರೊ. ಶರಣಪ್ಪ ವಿ....
Latest News

ಕಪ್ಪಡಿ ಜಾತ್ರೆಯಲ್ಲಿ ಕೃಷಿ ಮೇಳ ಉದ್ಘಾಟನೆ: ಕೆ.ಆರ್.ನಗರಕ್ಕೆ ದೇಶಮಟ್ಟದ ಹೆಸರು ತರೋಣ ಎಂದ ಸಿದ್ದಲಿಂಗರಾಜೇ ಅರಸ್

ವರದಿ:-ವಡ್ಡರಕೊಪ್ಪಲುಶಿವರಾಮು. ಕೆ.ಆರ್.ನಗರ. ಮಾ. 07:- ಮಠದ ಅಭಿವೃದ್ಧಿಯ ಜೊತೆಗೆ ಮಠಕ್ಕೆ ಬರುವ ಭಕ್ತರ ಹಿತ ಮತ್ತು ಕ್ಷೇಮವನ್ನ ಅತ್ಯಂತ ಕಾಳಜಿಯಿಂದ ನಮ್ಮ ಮಟ್ಟದ ಭಕ್ತರು ನೋಡಿಕೊಳ್ಳಲಿದ್ದಾರೆ ಎಂದು...
Latest News

ಮೈಸೂರಿಗೆ ಮತ್ತೊಂದು ಹೆಜ್ಜೆ: ಮಾರ್ಚ್ 8ರಂದು ಪಾಲಿಕೆಯಿಂದ ಸ್ವಚ್ಛತಾ ರೋಡ್ ಶೋ

ಮೈಸೂರು: ನಗರದಲ್ಲಿ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಾರ್ಚ್ 8, 2026ರಂದು “ಸ್ವಚ್ಛತಾ ರೋಡ್ ಶೋ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೈಸೂರು ಮಹಾನಗರ ಪಾಲಿಕೆಯ ಘನ ತ್ಯಾಜ್ಯ ನಿರ್ವಹಣಾ ವಿಭಾಗ (SWM) ವತಿಯಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ನಗರದಲ್ಲಿ ಕಸ ವಿಂಗಡಣೆ, ಮನೆಮನೆಗೆ ತ್ಯಾಜ್ಯ ಸಂಗ್ರಹಣೆ ಮತ್ತು ಸ್ವಚ್ಛತಾ ಕ್ರಮಗಳ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿನ ವಿವಿಧ ಪ್ರದೇಶಗಳಲ್ಲಿ ಸ್ವಚ್ಛತಾ ಜಾಗೃತಿ ಮೆರವಣಿಗೆ ನಡೆಸಲಾಗುತ್ತದೆ. ಪಾಲಿಕೆ ಸಿಬ್ಬಂದಿ, ಸ್ವಚ್ಛತಾ ಕಾರ್ಯಕರ್ತರು ಹಾಗೂ ಸ್ವಯಂಸೇವಕರು ಭಾಗವಹಿಸಿ ಸಾರ್ವಜನಿಕರಿಗೆ ಕಸದ ಸರಿಯಾದ ವಿಂಗಡಣೆ, ತೇವ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ನೀಡುವ ಮಹತ್ವವನ್ನು ತಿಳಿಸಿಕೊಡಲಿದ್ದಾರೆ. ಮನೆಯಿಂದ ಮನೆಗೆ ತ್ಯಾಜ್ಯ ಸಂಗ್ರಹಣೆ (Door-to-Door...
Latest News

ಯುವಜನರಿಗೆ ನಿರಾಸೆಯನ್ನು ಉಂಟು ಮಾಡಿದ ಬಜೆಟ್ : ಎಐಡಿವೈಓ ಕರ್ನಾಟಕ ರಾಜ್ಯ ಸಮಿತಿ

ಮೈಸೂರು:- ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿದ 2026-27ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಮಣಿದು 56,432 ಹುದ್ದೆಗಳನ್ನು ಈ ವರ್ಷದಲ್ಲಿ ಭರ್ತಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿರುವುದು ಸ್ವಾಗತಾರ್ಹವಾದರೂ, 800 ಕೆಪಿಎಸ್ ಶಾಲೆಗಳನ್ನು ತೆರೆಯುವ ಯೋಜನೆಯಿಂದ 40,000ಕ್ಕೂ ಹೆಚ್ಚು ಶಾಲೆಗಳು ಮುಚ್ಚಲಿವೆ. ತತ್ಫಲವಾಗಿ ಸಾವಿರಾರು ಶಿಕ್ಷಕರ ಹುದ್ದೆಗಳು ಕಡಿತಗೊಳ್ಳಲಿವೆ. ಹೊಸ ಉದ್ಯೋಗ ಸೃಷ್ಟಿಯ ಬದಲಿಗೆ ಇರುವ ಉದ್ಯೋಗಗಳನ್ನು ನಾಶಗೊಳಿಸುವ ಯೋಜನೆ ಇದಾಗಿದೆ. ಯುವಜನರ ಸಮಗ್ರ ಅಭಿವೃದ್ಧಿಗೆ ಯಾವುದೇ ನಿರ್ದಿಷ್ಟ ಯೋಜನೆಗಳಿಲ್ಲದ, ಯಾವುದೇ ಸ್ಪಷ್ಟ ಉದ್ಯೋಗ ನೀತಿ ಇಲ್ಲದ, ಅದರಲ್ಲೂ ಮುಖ್ಯವಾಗಿ ಕಳೆದ ವರ್ಷ ಸರ್ಕಾರ ಘೋಷಿಸಿದ ಯುವಜನ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅವಶ್ಯಕತೆ ಇರುವ ಕಾರ್ಯಯೋಜನೆ ಇಲ್ಲದ ಬಜೆಟ್ ಇದಾಗಿದೆ. ನಿರುದ್ಯೋಗಿ ಯುವಜನರಿಗೆ ನೀಡುತ್ತಿದ್ದ ಯುವನಿಧಿ ಯೋಜನೆಗೆ ಈ ಸಲದ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವ ಕುರಿತು ಸ್ಪಷ್ಟತೆಗಳಿಲ್ಲ. ಮತ್ತೊಂದೆಡೆ ಜನಸಾಮಾನ್ಯರನ್ನು, ಅದರಲ್ಲೂ ಮುಖ್ಯವಾಗಿ ಯುವಜನರನ್ನು ಸಾಂಸ್ಕೃತಿಕವಾಗಿ ಹಾಳು...
Latest News

ಅಭಿವೃದ್ಧಿಯನ್ನು ದೂರ ತಳ್ಳುವ ಬಜೆಟ್ – ಮೈಸೂರು ಬಿಜೆಪಿ ಮಾಧ್ಯಮ ಸಹ ಸಂಚಾಲಕ ಸಂತೋಷ್ ಕುಮಾರ್ ಆರೋಪ

  ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಅಭಿವೃದ್ಧಿಯನ್ನು ದೂರಕ್ಕೆ ತಳ್ಳುವಂತೆಯೂ ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸುವಂತೆಯೂ ಇರುವ ಕರಾಳ ಅಧ್ಯಾಯವಾಗಿದೆ ಎಂದು ಮೈಸೂರು ಮಹಾನಗರದ ಮಾಧ್ಯಮ ಸಹ ಸಂಚಾಲಕರಾದ ಸಂತೋಷ್ ಕುಮಾರ್ ಬಿ.ಎಂ ತಿಳಿಸಿದ್ದಾರೆ. ಈ ಬಜೆಟ್ ಜನರ ಕಣ್ಣಿಗೆ ಧೂಳು ಎರಚುವ ತಂತ್ರದ ಬಜೆಟ್ ಆಗಿದ್ದು, ರಾಜ್ಯದ ಅಭಿವೃದ್ಧಿಗೆ ಸ್ಪಷ್ಟವಾದ ದಿಕ್ಕು ನೀಡುವಲ್ಲಿ ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರವು ಪಂಚ ಗ್ಯಾರಂಟಿಗಳಿಗೆ ಯಾವುದೇ ಹೊಸ ಆರ್ಥಿಕ ಮೂಲಗಳನ್ನು ಸೃಷ್ಟಿಸದೇ, ವಿವಿಧ ಇಲಾಖೆಗಳ ಅನುದಾನವನ್ನು ಕಡಿತಗೊಳಿಸಿ ಅದನ್ನು ಗ್ಯಾರಂಟಿ ಯೋಜನೆಗಳಿಗೆ ಜೋಡಿಸಿರುವುದು ಸರಿಯಾದ ಆರ್ಥಿಕ ನೀತಿಯಾಗಿಲ್ಲ ಎಂದು ಸಂತೋಷ್ ಕುಮಾರ್ ಬಿ.ಎಂ ಅವರು ಹೇಳಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ 44,632 ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಸರ್ಕಾರ ಹೇಳಿಕೊಂಡಿದ್ದರೂ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕೇವಲ 1,336 ಕೋಟಿ ರೂ....
Latest News

ಜನಮಾನಸದ  ನಿತ್ಯ ಚಾಂಪಿಯನ್  ಶ್ರೀ  ಸಿದ್ದರಾಮಯ್ಯ  – ಡಾ. ಬಿಜೆವಿ 

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಂಡಿಸಿದ 17ನೇ ದಾಖಲೆ ಬಜೆಟ್  ಸರ್ವಾಂಗಿಣ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಪ್ರಾದೇಶಿಕ ಅಸಮಾತೋಲನವನ್ನು ನಿವಾರಣೆ ಮಾಡಲು ವೈಜ್ಞಾನಿಕ ನೆಲಗಟ್ಟಿನ  ಗಟ್ಟಿತನದ ಬಜೆಟ್. ಕರ್ನಾಟಕದ ಸರ್ಕಾರದ ಅಭಿವೃದ್ಧಿಯ  ಪರ ಯೋಜನೆ ಗಳಿಂದಾಗಿ 2025 -26 ರಲ್ಲಿ ಕರ್ನಾಟಕದ   ಜಿಎಸ್‌ಡಿಪಿ   8.1 % ಬೆಳವಣಿಗೆಯು  ರಾಷ್ಟ್ರೀಯ ಬೆಳವಣಿಗೆ ದರವಾದ  7.4 % ಗಿಂತ ಹೆಚ್ಚಾಗಿದೆ.  ಬಜೆಟ್ ಸಂದರ್ಭದಲ್ಲಿ ಚೊಂಬು ಹಿಡಿದು ಪ್ರತಿಭಟನೆ ಆದಿ ತುಳಿದ ಬಿಜೆಪಿಯ  ಪ್ರತಿಪಕ್ಷ ನಾಯಕರು ಇದಕ್ಕೆ ವೈಜ್ಞಾನಿಕ ಉತ್ತರ ನೀಡಲಿ. 4.48.004 ಲಕ್ಷ ಕೋಟಿ  ಈ ಸಾಲಿನ ಒಟ್ಟು ಬಜೆಟ್ ನಲ್ಲಿ, 38, 455 ಕೋಟಿ ಈ ಬಾರಿ ಹೆಚ್ಚುವರಿ ಬಜೆಟ್ ಆಗಿದೆ.   ಆದ್ದರಿಂದ ಅಭಿವೃದ್ಧಿಗೆ ಪೂರಕವಾದ ಆರ್ಥಿಕ ಇಲಾಖೆಯ ಸಮಗ್ರ ವರ್ಗೀಕರಣದ  ವರದಿ ಅನುಸಾರ ಜಿಎಸ್ಟಿ ಹಣ ಕೇಂದ್ರ ಪೂರ್ಣಪ್ರಮಾಣದಲ್ಲಿ  ನೀಡಿಲ್ಲವಾದರೂ , ಭಾರತದಲ್ಲಿ ಕರ್ನಾಟಕ ಜಿಎಸ್​ಟಿ ಹಣ ಸಂಗ್ರಹದಲ್ಲಿ  ಎರಡನೇ...
Latest News

ಸಮಾಜದಲ್ಲಿ ಆರೋಗ್ಯಕರ ಮಾಧ್ಯಮ ಅವಶ್ಯಕ : ಪ್ರೊ . ಬಿ.ಕೆ.ರವಿ

ಮೈಸೂರು :- ಮಾಧ್ಯಮದಲ್ಲಿ ಮಹಿಳೆಯರಿಗಾಗಿ ರುವ ಅವಕಾಶಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ರೂಸಾ 2.0 ಇವರ...
Latest News

ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಅಪಾರ ಅವಕಾಶಗಳು, ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು: ಕಾರ್ಯಗಾರದಲ್ಲಿ ತಜ್ಞರ ಅಭಿಪ್ರಾಯ

ಮೈಸೂರು:-  ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಇಂದು ಅನೇಕ ಅವಕಾಶಗಳು ದೊರೆಯುತ್ತಿವೆ. ಆದರೆ ಅದೇ ಸಮಯದಲ್ಲಿ ವಿವಿಧ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ. ಆ ಸವಾಲುಗಳನ್ನು ಆತ್ಮವಿಶ್ವಾಸ ಮತ್ತು ಪರಿಶ್ರಮದೊಂದಿಗೆ ಎದುರಿಸಿದರೆ...
Latest News

ಸೆಸ್ಕ್ ಪ್ರಧಾನ ಕಚೇರಿಯ ನಾಲ್ಕನೇ ಮಹಡಿ ಕಾರ್ಯಾಲಯ ಉದ್ಘಾಟನೆ

ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರಿಂದ ಲೋಕಾರ್ಪಣೆ ಮೈಸೂರು, ಮಾ.5, 2026: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)ದ ಪ್ರಧಾನ ಕಚೇರಿಯಲ್ಲಿ ನಿರ್ಮಿಸಿರುವ ನಾಲ್ಕನೇ ಮಹಡಿ ಕಚೇರಿಯ ಉದ್ಘಾಟನಾ...
Latest News

ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಂ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮೈಸೂರು ಮಾರ್ಚ್ 5 :- ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಾರ್ಚ್ 5 ಹಾಗೂ ಏಪ್ರಿಲ್ 14 ರಂದು ಕ್ರಮವಾಗಿ ರಾಜ್ಯಮಟ್ಟದಲ್ಲಿ ಡಾ. ಬಾಬು ಜಗಜೀವನ ರಾಂ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ರವರ ಜನ್ಮದಿನಾಚರಣೆಯ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ 2026-27ನೇ ಸಾಲಗೆ ಸದರಿ ರಾಷ್ಟ್ರನಾಯಕರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಜನಾಂಗದವರ ಶ್ರೇಯಸ್ಸಿಗಾಗಿ ಪ್ರೋತ್ಸಾಹಿಸಿ, ಶ್ರಮಿಸಿ, ಗಣನೀಯ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿಗಳನ್ನು ಗುರುತಿಸಿ, ರಾಜ್ಯ ಮಟ್ಟದ ಡಾ: ಬಾಬು ಜಗಜೀವನರಾಂ ಹಾಗೂ ರಾಜ್ಯ ಮಟ್ಟದ ಡಾ: ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಜಿಲ್ಲಾ ಹಂತದಲ್ಲಿ ರಾಜ್ಯ ಮಟ್ಟದ ರಾಜ್ಯ ಪ್ರಶಸ್ತಿಯ ಬಗ್ಗೆ ಪ್ರಚಾರ ಮಾಡಿ ರಾಜ್ಯ ಪ್ರಶಸ್ತಿಗಾಗಿ ಅರ್ಜಿಸಲ್ಲಿಸುವ ಅರ್ಜಿಗಳನ್ನು ಸಂಗ್ರಹಿಸಿ, ಅರ್ಹ ವ್ಯಕ್ತಿಗಳನ್ನು ಮಾನ್ಯ ಜಿಲ್ಲಾಧಿಕಾರಿಗಳಿಂದ ಧೃಡೀಕರಿಸಿ’ ಕೇಂದ್ರ ಕಚೇರಿಗೆ ಕಳುಹಿಸಬೇಕಾಗಿರುತ್ತದೆ. ಅರ್ಹ ವ್ಯಕ್ತಿಗಳು ಆಯಾ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ...
1 5 6 7 8 9 49
Page 7 of 49