Latest News

ಮೈಸೂರಿನಲ್ಲಿ ಸೈಕಲ್ ದಿನದ ಸಂಭ್ರಮ: ಸ್ವಚ್ಛತಾ ಚಾಂಪಿಯನ್ನರಿಗೆ ಪಾಲಿಕೆ ಗೌರವ

ಮೈಸೂರು: ಸಾಂಸ್ಕೃತಿಕ ನಗರಿಯ ಪರಿಸರ ಸಂರಕ್ಷಣೆ ಮತ್ತು ನಾಗರಿಕರ ಆರೋಗ್ಯ ವೃದ್ಧಿಯ ಆಶಯದೊಂದಿಗೆ ಆಯೋಜಿಸಲಾಗಿದ್ದ ‘ಮೈಸೂರು ಸೈಕಲ್ ದಿನ’ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಮೈಸೂರು ಮಹಾನಗರ ಪಾಲಿಕೆ, ಜಿಐಝಡ್ ಇಂಡಿಯಾ ಸಹಯೋಗದೊಂದಿಗೆ ಇಎಸ್ಎಎಫ್ ಫೌಂಡೇಶನ್ ಇದನ್ನು ಆಯೋಜಿಸಿತ್ತು. ದೇವರಾಜ ಅರಸು ರಸ್ತೆಯಲ್ಲಿ ನಡೆದ ಈ ಅಭಿಯಾನದಲ್ಲಿ ನಗರದ ವಿವಿಧೆಡೆಯಿಂದ 350ಕ್ಕೂ ಹೆಚ್ಚು ಸೈಕಲ್ ಪ್ರೇಮಿಗಳು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಾಲಿಕೆ ಆಯುಕ್ತರಾದ ಶ್ರೀ...
Latest News

ಜಾಗತಿಕ ಶೃಂಗಸಭೆಯ ಘಟನೆ ಕಾಂಗ್ರೆಸ್‌ನ ದುರುದ್ದೇಶ ಮನೋಭಾವಕ್ಕೆ ಸಾಕ್ಷಿ: ಸಂತೋಷ್ ಕುಮಾರ್

ಮೈಸೂರು: ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಜಾಗತಿಕ ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ವರ್ತನೆ ರಾಷ್ಟ್ರದ ಗೌರವಕ್ಕೆ ಧಕ್ಕೆಯುಂಟುಮಾಡುವಂತದ್ದಾಗಿದೆ ಎಂದು ಮೈಸೂರು ಮಹಾನಗರ ಮಾಧ್ಯಮ ಸಹ ಸಂಚಾಲಕರಾದ ಸಂತೋಷ್ ಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ವಿರೋಧ ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದ್ದರೂ, ದೇಶದ ಘನತೆಯನ್ನು ಹಾನಿಗೊಳಿಸುವ ರೀತಿಯ ನಡೆ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಜಾಗತಿಕ ವೇದಿಕೆಯಲ್ಲಿ ಅಸಭ್ಯ ರೀತಿಯ ಪ್ರತಿಭಟನೆ ನಡೆಸಿರುವುದು ಕಾಂಗ್ರೆಸ್‌ನ ಹೊಣೆಗಾರಿಕೆಯ ಕೊರತೆಯನ್ನು...
Latest News

ಜಿಲ್ಲಾ ಧಾರ್ಮಿಕ ಪರಿಷತ್ತು ಅತಂತ್ರ; ಭಕ್ತರ ಆಸ್ಥೆಗೆ ಕುತ್ತು

ಧಾರ್ಮಿಕ ಆಡಳಿತದಲ್ಲಿ ರಾಜಕೀಯದ ನೆರಳು; ಭಕ್ತರ ಆಸ್ಥೆಗೆ ಹಾಸನದಲ್ಲಿ ಕುತ್ತು : ಹುಂಡಿ ಹಣದ ಮೇಲೆ ಕಣ್ಣು, ಅಭಿವೃದ್ಧಿಗೆ ಬೆನ್ನು…? ರಘುನಂದನ್ ಎಸ್.ಎ ಹಾಸನ ಜಿಲ್ಲೆಯ ಐತಿಹಾಸಿಕ ಮುಜರಾಯಿ ದೇವಾಲಯಗಳು ಮತ್ತು ಸಾಂಪ್ರದಾಯಿಕ ರಥೋತ್ಸವಗಳು ಇಂದು ಆಡಳಿತಾತ್ಮಕ ಅನಾಥಪ್ರಜ್ಞೆಗೆ ತುತ್ತಾಗಿವೆ. ಇದಕ್ಕೆ ಪ್ರಮುಖ ಕಾರಣ, ‘ಜಿಲ್ಲಾ ಧಾರ್ಮಿಕ ಪರಿಷತ್ತು’ ರಚನೆಯಲ್ಲಿ ಸರ್ಕಾರ ತೋರುತ್ತಿರುವ ದಿವ್ಯ ನಿರ್ಲಕ್ಷ್ಯ ಮತ್ತು ಅಧಿಕಾರ ಹಂಚಿಕೆಯ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಜಿದ್ದಾಜಿದ್ದಿ. ಈಗಾಗಲೇ ಹಳೆಯ ಸಮಿತಿ...
Latest News

ಪ್ರೀತಿ ಮದುವೆಗೆ ವಿರೋಧ: ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ ? ಎಲ್ಲವೂ ಭಸ್ಮ

ಮಂಡ್ಯ, ಫೆ.21: ಪ್ರೀತಿಸಿ ಮದುವೆಯಾಗಿದ್ದಕ್ಕೆ ಆಕ್ರೋಶಗೊಂಡ ಮಾವನೊಬ್ಬ ಅಳಿಯನ ಮನೆಗೆ ಬೆಂಕಿ ಹಚ್ಚಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಅನೇಕ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚುಂಚಗಹಳ್ಳಿ ಗ್ರಾಮದ ವಿನೋದ್ ಹಾಗೂ ಕಾವ್ಯಾ ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇತ್ತೀಚೆಗೆ ಕುಟುಂಬದವರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಕಾವ್ಯಾ ಮನೆಯವರು ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೂ...
Latest News

22-02-2026 ರ ದಿನ ಭವಿಷ್ಯ

  ಮೇಷ: ಹಣಕಾಸಿನ ವ್ಯವಹಾರದಲ್ಲಿ ಲಾಭ ಗಳಿಕೆ. ತಾಮ್ರ, ಬೆಳ್ಳಿ ವ್ಯಾಪಾರಸ್ಥರಿಗೆ ಬೇಡಿಕೆ, ರೇಷ್ಮೆ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತದೆ. ಶುಭಸಂಖ್ಯೆ: 5 ವೃಷಭ: ತಾಂತ್ರಿಕ ಪದವೀಧರರಿಗೆ ಕೃಷಿಯತ್ತ ಒಲವು. ಮಹಿಳಾ ವೈದ್ಯರಿಗೆ ವಿಶೇಷ ದಿನ. ಬ್ಯಾಂಕಿಂಗ್ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ:8 ಮಿಥುನ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಭಿವೃದ್ಧಿ. ವಾಹನ ಚಾಲಕರಿಗೆ ಅನಿರೀಕ್ಷಿತ ಲಾಭ. ವಿವಾಹಕ್ಕೆ ಕಂಕಣ ಕೂಡಿಬರಲಿದೆ. ಶುಭಸಂಖ್ಯೆ:7 ಕಟಕ: ಸಮಾಜಸೇವೆಯಿಂದ ಜನಪ್ರಿಯತೆ. ಮಕ್ಕಳ ಆರೋಗ್ಯ ಗಮನಿಸಿ. ರಾಜಕೀಯದಲ್ಲಿ...
Latest News

ಭಾಷಾ ದಿನದ ಅಂಗವಾಗಿ ಸಂತ ಫಿಲೋಮೀನ ಕಾಲೇಜಿನಲ್ಲಿ ಸಾಹಿತ್ಯ ಜಾಗೃತಿ ಕಾರ್ಯಕ್ರಮ

ಮೈಸೂರು:- ಅಂತರರಾಷ್ಟ್ರೀಯ ತಾಯಿ ಭಾಷಾ ದಿನದ ಅಂಗವಾಗಿ ಸಂತ ಫಿಲೋಮೀನ ಕಾಲೇಜು (ಸ್ವಾಯತ್ತ), ಬನ್ನಿಮಂಟಪದಲ್ಲಿ ಫೆಬ್ರವರಿ 21, 2026 ರಂದು ಸಾಹಿತ್ಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಓಕ್ ಜ್ಯೂಬಿಲಿ ಸಂಭ್ರಮಾಚರಣೆ (1946–2026) ಅಂಗವಾಗಿ ನಡೆಯುತ್ತಿರುವ ವಿವಿಧ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯಲ್ಲಿ ಈ ಕಾರ್ಯಕ್ರಮವೂ ಒಂದಾಗಿದ್ದು, ಕಾಲೇಜಿನ ಸಾಹಿತ್ಯ ಸಂಘವು ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯುಎಸಿ) ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮವು ಬೆಳಿಗ್ಗೆ 11.30ಕ್ಕೆ...
Latest News

ಸಿವಿಲ್ ನ್ಯಾಯಾಧೀಶೆಯಾಗಿ ಅಧಿಕಾರ ಸ್ವೀಕಾರ: ಸಹೋದರಿ ಸೌಂದರ್ಯರಿಗೆ ಭಾವಪೂರ್ಣ ಅಭಿನಂದನೆ

ಮೈಸೂರು:- ನ್ಯಾಯಾಂಗ ಕ್ಷೇತ್ರದಲ್ಲಿ ಮತ್ತೊಂದು ಹೆಮ್ಮೆಯ ಅಧ್ಯಾಯ ಆರಂಭವಾಗಿದ್ದು, ಸಹೋದರಿ ಸೌಂದರ್ಯ ಅವರು ಸಿವಿಲ್ ನ್ಯಾಯಾಧೀಶೆಯಾಗಿ ನ್ಯಾಯಪೀಠ ಅಲಂಕರಿಸಿದ ಸಂದರ್ಭವು ಭಾವನಾತ್ಮಕ ಹಾಗೂ ಗಂಭೀರ ವಾತಾವರಣಕ್ಕೆ ಸಾಕ್ಷಿಯಾಯಿತು. ನ್ಯಾಯದ ತಕ್ಕಡಿಯನ್ನು ಸಮತೋಲನದಲ್ಲಿ ಹಿಡಿದುಕೊಂಡು, ನೊಂದವರ ಪಾಲಿಗೆ ನ್ಯಾಯದ ಬೆಳಕಾಗುವ ಸಂಕಲ್ಪದೊಂದಿಗೆ ಅವರು ತಮ್ಮ ವೃತ್ತಿ ಜೀವನದ ಹೊಸ ಪಯಣ ಆರಂಭಿಸಿದ್ದಾರೆ. ಅಧಿಕಾರ ಸ್ವೀಕಾರದ ಬಳಿಕ ನಡೆದ ಸರಳ ಅಭಿನಂದನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಬಂಧುಮಿತ್ರರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು....
Latest News

ಟಿ. ನರಸೀಪುರದಲ್ಲಿ ಹಲವು ದಶಕಗಳ ಕನಸು ನನಸು: 5 ಎಕರೆ ಭೂಮಿಯಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ

ಎಂ.ನಾಗೇಂದ್ರಕುಮಾರ್ ಟಿ. ನರಸೀಪುರ, ಫೆ. 20: ಹಲವು ವರ್ಷಗಳಿಂದ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳು ಎದುರು ನೋಡುತ್ತಿದ್ದ ತಾಲ್ಲೂಕು ಕ್ರೀಡಾಂಗಣ ನಿರ್ಮಾಣದ ಕನಸು ಇದೀಗ ನನಸಾಗುವ ಹಂತಕ್ಕೆ ಬಂದಿದೆ. ಪಟ್ಟಣದ ಜೋಡಿ ಮುಖ್ಯರಸ್ತೆಯಲ್ಲಿರುವ ಹಳೆಯ ಸಿಲ್ಕ್ ಫ್ಯಾಕ್ಟರಿ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಐದು ಎಕರೆ ಭೂಮಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದೆ. ಪೊಲೀಸ್ ಭದ್ರತೆಯಲ್ಲಿ ನಡೆದ ಭೂಮಿ ಹಸ್ತಾಂತರ ಪ್ರಕ್ರಿಯೆಯಲ್ಲಿ ತಹಶಿಲ್ದಾರ್ ಟಿ.ಜೆ. ಸುರೇಶ್ ಆಚಾರ್...
Latest News

ಗದಗದಲ್ಲಿ ದೇವಾಲಯಗಳ ಧ್ವಂಸ: ಎರಡು ಗ್ರಾಮಗಳಲ್ಲಿ ವಿಗ್ರಹಗಳಿಗೆ ಹಾನಿ, ಗ್ರಾಮಸ್ಥರ ಆಕ್ರೋಶ

    ಗದಗ, ಫೆಬ್ರವರಿ 19: ರಾಜ್ಯದ ಗದಗ ಜಿಲ್ಲೆಯಲ್ಲಿ ಹಿಂದೂ ದೇವಾಲಯಗಳ ಮೇಲಿನ ವಿಧ್ವಂಸಕೃತ್ಯಗಳು ಮುಂದುವರಿದಿದ್ದು, ಎರಡು ಗ್ರಾಮಗಳಲ್ಲಿ ಹಿಂದೂ ದೇವರ ವಿಗ್ರಹಗಳಿಗೆ ಹಾನಿ ಮಾಡಿರುವ ಘಟನೆಗಳು ಬೆಳಕಿಗೆ ಬಂದಿವೆ. ಈಗಾಗಲೇ ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ಈಶ್ವರ, ನಂದಿ ಹಾಗೂ ಹೊನ್ನತ್ತೆಮ್ಮ ದೇವರುಗಳ ಮೂರ್ತಿಗಳನ್ನು ಕಿಡಿಗೆಡಿಗಳು ಧ್ವಂಸಗೊಳಿಸಿದ್ದ ಪ್ರಕರಣದ ತನಿಖೆಯನ್ನು ಪೋಲಿಸರು  ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೆ ಮಲ್ಲಿಕಾರ್ಜುನಪುರ ಮತ್ತು ಆದರಳ್ಳಿ ಗ್ರಾಮಗಳಲ್ಲಿ ಇಂತಹ ಘಟನೆಗಳು ಸಂಭವಿಸಿರುವುದು ಜನರಲ್ಲಿಭಯ...
Latest News

20-02-2026 ರ ದಿನ ಭವಿಷ್ಯ

  ಮೇಷ: ಜ್ಯುವೆಲ್ಲರಿ ಮಾಲೀಕರಿಗೆ ಕೆಲಸಗಾರರಿಂದ ಲಾಭ. ಹೋಟೆಲ್ ವ್ಯವಹಾರ ವಿಸ್ತರಿಸುವ ಯೋಚನೆ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 6 ವೃಷಭ: ಧಾರ್ವಿುಕ ಸಮಾರಂಭದಲ್ಲಿ ಪಾಲ್ಗೊಳ್ಳಲು ದೂರ ಪ್ರಯಾಣ. ಮಗನ ವಿವಾಹ ಯತ್ನ ಸಫಲ. ಬ್ಯಾಂಕ್ ಅಧಿಕಾರಿಗಳಿಗೆ ವರ್ಗ. ಶುಭಸಂಖ್ಯೆ:3 ಮಿಥುನ: ನಂಬಿದವರಿಂದಲೇ ಮೋಸವಾದೀತು. ವಿಚ್ಛೇದಿತರಿಗೆ ವಿವಾಹ ಸಿದ್ದಿ. ಮನೆಯ ಹಿರಿಯರ ಆರೋಗ್ಯ ಸುಧಾರಣೆಯಾಗಲಿದೆ. ಶುಭಸಂಖ್ಯೆ:2 ಕಟಕ: ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಗೊಂದಲ ದಲ್ಲಿದ್ದ ವಿವಾಹಕ್ಕೆ ಪಾಲಕರ ಸಮ್ಮತಿ ಸಿಗಲಿದೆ....
1 4 5 6 7 8 39
Page 6 of 39