Latest News

ಶ್ರೀರಾಮನವಮಿ ಪ್ರಯುಕ್ತ ಮಾ.27ರಂದು ಮೈಸೂರು ನಗರದಲ್ಲಿ ಮಾಂಸ ಮಾರಾಟ ಸಂಪೂರ್ಣ ನಿಷೇಧ

ಮೈಸೂರು, ಮಾ.24: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾರ್ಚ್ 27ರಂದು ಶ್ರೀ ರಾಮನವಮಿ ಅಂಗವಾಗಿ ಎಲ್ಲಾ ವಿಧದ ಮಾಂಸ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಮೈಸೂರು ನಗರದ ಧಾರ್ಮಿಕ ಸಂವೇದನೆ ಮತ್ತು ಸಾರ್ವಜನಿಕ ಶಾಂತಿಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೈಸೂರು ಮಹಾ ನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಆದೇಶದ ಪ್ರಕಾರ, ಪಾಲಿಕೆಗೆ ವ್ಯಾಪ್ತಿಗೆ  ಸೇರಿದ ಕುರಿ ಮತ್ತು ಮೇಕೆಗಳ ಕಸಾಯಿ...
Latest News

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ: ಮೈಸೂರಿನಲ್ಲಿ ಕೆರಿಯರ್ ಮೇಳಕ್ಕೆ ಆಹ್ವಾನ

ಮೈಸೂರುಮಾರ್ಚ್ 26ರಂದು ಮೈಸೂರು ಡಯಟ್ನಲ್ಲಿ “ಕೆರಿಯರ್ ಮೇಳ”: ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿದೀಪ ಮೈಸೂರು, ಮಾ.24: ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮಾರ್ಗದರ್ಶನದ ದೀಪ ಹಚ್ಚುವ ಉದ್ದೇಶದಿಂದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ಮಾರ್ಚ್ 26ರಂದು “ಕೆರಿಯರ್ ಮೇಳ”ವನ್ನು ಆಯೋಜಿಸಲಾಗಿದೆ. ನಜರ್ಬಾದ್ನ ವಸಂತಮಹಲ್ನಲ್ಲಿರುವ ಡಯಟ್ ಆವರಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಪಿ.ಎ.ಬಿ ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕದ...
Latest News

ಯದುವೀರ್ ಹುಟ್ಟುಹಬ್ಬಕ್ಕೆ ಅರ್ಥಪೂರ್ಣ ಸ್ಪರ್ಶ: ವೃದ್ಧರಿಗೆ ಭೋಜನ, ಮನಗಳಿಗೆ ಸಂತೋಷ

ಯದುವೀರ್ ಜನ್ಮದಿನ: ವೃದ್ಧಾಶ್ರಮದಲ್ಲಿ ಅನ್ನಸಂತರ್ಪಣೆ ಮೂಲಕ ಮಾನವೀಯ ಸೇವೆ ಮೈಸೂರು: ಮೈಸೂರು–ಕೊಡಗು ಕ್ಷೇತ್ರದ ಸಂಸದರು ಹಾಗೂ ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹುಟ್ಟುಹಬ್ಬವನ್ನು ಹಿನಕಲ್ನ ವಾತ್ಸಲ್ಯ ಸೇವಾಶ್ರಮದಲ್ಲಿ ಸಮಾಜಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವು ಸಂಭ್ರಮದ ಸದ್ದಿಲ್ಲದೆ, ಮೌನದ ಮಧುರತೆಯ ನಡುವೆ ನಡೆದ ಈ ಕಾರ್ಯಕ್ರಮದಲ್ಲಿ ವೃದ್ಧರಿಗೆ ಹಾಗೂ ಹಿರಿಯ ನಾಗರಿಕರಿಗೆ ಭೋಜನ ಕೂಟ ಏರ್ಪಡಿಸಿ, ಮಾನವೀಯ ಮೌಲ್ಯಗಳಿಗೆ ಮತ್ತೊಮ್ಮೆ ಜೀವ ತುಂಬಲಾಯಿತು.ಮೈಸೂರಿನ ಹಿನಕಲ್ ನಲ್ಲಿ...
Latest News

PUC ಹುಡುಗ–SSLC ಹುಡುಗಿ ಪ್ರೇಮ: ಲವ್ ಜಿಹಾದ್ ವಿವಾದಕ್ಕೆ ತಿರುವು

ಪ್ರೇಮ ಪ್ರಕರಣಕ್ಕೆ ಲವ್ ಜಿಹಾದ್ ಲೇಬಲ್: ಹಲ್ಲೆ ಆರೋಪದೊಂದಿಗೆ ತನಿಖೆ ಚಿಕ್ಕಮಗಳೂರು, ಮಾ.24:- ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಅಪ್ರಾಪ್ತ ಹುಡುಗ-ಹುಡುಗಿ ನಡುವಿನ ಪ್ರೇಮ ಪ್ರಕರಣ ‘ಲವ್ ಜಿಹಾದ್’ ಆರೋಪದೊಂದಿಗೆ ತೀವ್ರ ಉದ್ವಿಗ್ನತೆಗೆ ಕಾರಣವಾಗಿದ್ದು, ಹಲ್ಲೆ ಆರೋಪ ಹಾಗೂ ಪೋಕ್ಸೊ ಪ್ರಕರಣ ಸೇರಿ ದ್ವಂದ್ವ ದೂರುಗಳಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದ ಪಿಯುಸಿ ಓದುತ್ತಿರುವ ಬಾಲಕ ಮತ್ತು ಎಸ್‌ಎಸ್‌ಎಲ್‌ಸಿ ಓದುತ್ತಿರುವ ಬಾಲಕಿ ಪ್ರತಿದಿನ...
Latest News

ಪರಿಶಿಷ್ಟ ಪಂಗಡದ ರಾಷ್ಟೀಯ ಆಯೋಗದ ಸದಸ್ಯರಿಂದ ಹೆಚ್.ಡಿ.ಕೋಟೆ ವಿವಿಧ ಸ್ಥಳಗಳ ಭೇಟಿ

ಮೈಸೂರು, ಮಾ.24:-ಪರಿಶಿಷ್ಟ ಪಂಗಡದ ರಾಷ್ಟೀಯ ಆಯೋಗದ ಸದಸ್ಯೆ ಡಾ: ಆಶಾ ಲಕ್ರಾ ಅವರು ಇಂದು ಹೆಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್ ಬಳಿ ಜೇನು ಕುರುಬ ಮಹಿಳೆಯರು ನಡೆಸುತ್ತಿರುವ ಸಿರಿಧಾನ್ಯ ಸ್ಟೋರ್ ಗೆ ಭೇಟಿ ನೀಡಿ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಸರಿಧಾನ್ಯ ಸ್ಟೋರ್ ನ್ನು 11 ಮಹಿಳೆಯರು ನಡೆಸುತ್ತಿದ್ದು, ರತ್ನಮ್ಮ ಎಂಬುವರು ಈ ಹಿಂದೆ ಜೀವನ ಕಷ್ಟಕರವಾಗಿತ್ತು‌ ಕೆಲಸಕ್ಕಾಗಿ ಕೊಡಗು ಕೇರಳಕ್ಕೆ ವಲಸೆ ಹೋಗುತ್ತಿದ್ದೆ, ಪ್ರತಿ ದಿನ ಬೆಳಗಿನಿಂದ ರಾತ್ರಿಯವರೆಗೆ ಕೂಲಿ ಕೆಲಸ...
Latest News

ಸ್ಥಳೀಯ ದೇಸೀಯ ಕಲಾವಿದರಿಗೆ ವೇದಿಕೆ: ರಾಜ್ಯಾದ್ಯಂತ ಮುನ್ನಲೆಗೆ ತರುವ ಶಪಥ – ಸಾಧುಕೋಕಿಲ

ಮೈಸೂರು ಕಲಾವಿದರಿಗೆ ಹೊಸ ವೇದಿಕೆ: ಸಾಧು ಕೋಕಿಲ ಘೋಷಣೆ ಮೈಸೂರು, ಮಾ. 23: ಸಾಂಸ್ಕೃತಿಕ ಪರಂಪರೆಯ ನಾಡಾಗಿರುವ ಮೈಸೂರು ನಗರದಲ್ಲಿ ಸ್ಥಳೀಯ ಹಾಗೂ ದೇಸೀಯ ಕಲಾವಿದರ ಬದುಕಿಗೆ ಹೊಸ ದಿಕ್ಕು ನೀಡುವ ಸಂಕಲ್ಪದೊಂದಿಗೆ ಮಹತ್ವದ ಕಾರ್ಯಕ್ರಮೊಂದು ಜರುಗಿತು. ಕರ್ನಾಟಕ ರಾಜ್ಯ ಕಾಂಗ್ರೆಸ್ ಸಮಿತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ವತಿಯಿಂದ ನಗರ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾದ ಮೈಸೂರು ಜಿಲ್ಲಾ ಘಟಕದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ಸಾಧುಕೋಕಿಲ ಅವರು, ಸ್ಥಳೀಯ...
Latest News

ಉಪ್ಪಾರ ಸಮಾಜದವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಕರೆ ನೀಡಿದರು.

ಮೈಸೂರು:-  ನಗರದ ಕರ್ನಾಟಕ ಕಲಾಮಂದಿರದಲ್ಲಿ ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ವತಿಯಿಂದ ಆಯೋಜಿಸಿದ್ದ ಸಂಘದ 30ನೇ ವಾರ್ಷಿಕ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಬಡ್ತಿ ಹೊಂದಿದ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯೆ ಇಲ್ಲದೆ ಇದ್ದರೆ ಸಮಾಜದಲ್ಲಿ ಏನನ್ನು ಸಾಧಿಸಲು ಆಗದು.  ಸಮಾಜದವರು ತಮ್ಮ ಮಕ್ಕಳುಗಳಿಗೆ  ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕು ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿ...
Latest News

ಮಾಜಿ ಸಚಿವ ಸಾರಾ ಮಹೇಶ್ ಪುತ್ರನ ಜನ್ಮದಿನ: ಅಭಿಮಾನಿಗಳಿಂದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ವರದಿ :-ವಡ್ಡರಕೊಪ್ಪಲು ಶಿವರಾಮು. ಕೆ ಆರ್ ನಗರ. ಮಾ. 23:- ಮಾಜಿ ಸಚಿವ ಸಾರಾ ಮಹೇಶ್ ಅವರ ಪುತ್ರ ಉದ್ಯಮಿ ಸಾರಾ ಜಯಂತ್ ಅವರ ಹುಟ್ಟುಹಬ್ಬವನ್ನು ಅತ್ಯಂತ ಸಡಗರ ಸಂಭ್ರಮ ಮತ್ತು ಅದ್ದೂರಿಯಾಗಿ ಆಚರಿಸಲಾಯಿತು.  ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಯುವ ಜೆಡಿಎಸ್ ವತಿಯಿಂದ ಮತ್ತು ಸಾರಾ ಮಹೇಶ್ ಅವರ ಅಭಿಮಾನಿಗಳ ಬಳಗದಿಂದ ಬೆಳಿಗ್ಗೆಯಿಂದಲೇ ಪಟ್ಟಣದ ಆದಿ ದೇವತೆ ತೋಪಮ್ಮತಾಯಿ ಬಸವೇಶ್ವರ ಬ್ಲಾಕ್ ನ ಮಲೈ ಮಾಹದೇಶ್ವರ ಸ್ವಾಮಿ...
Latest News

ಕರ್ನಾಟಕ ಜಾಹೀರಾತು ನೀತಿ ಪರಿಶೀಲನೆ: ಸಿಎಂ ಭರವಸೆ: ಸಿ.ಎಂ ಸಿದ್ದರಾಮಯ್ಯ

ದಾವಣಗೆರೆ:-ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ‌ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು...
Latest News

75 ವರ್ಷಗಳಿಂದ ಜೀವಜಲ ಕಾಪಾಡಿದ ಬಾವಿ: ಜವರಮ್ಮ ಸಿಂಗ್ರೇ ಗೌಡರ ಕುಟುಂಬಕ್ಕೆ ವಿಶ್ವ ಜಲ ದಿನದ ಗೌರವ

ವಿಶೇಷ ವರದಿ:-ವಡ್ಡರಕೊಪ್ಪಲುಶಿವರಾಮು. ಕೆ ಆರ್. ನಗರ. ಮಾ:- ಸುಮಾರು 75 ವರ್ಷಗಳ ಹಿಂದೆ ತಮ್ಮ ಕುಟುಂಬಕ್ಕಾಗಿ ನಿರ್ಮಿಸಿಕೊಂಡ ಜೀವ ಜಲದ ಬಾವಿಯನ್ನು ಇಂದಿಗೂ ರಕ್ಷಣೆ ಮಾಡಿಕೊಂಡು ಬಂದ ಜವರಮ್ಮ ಸಿಂಗ್ರೇ ಗೌಡರ  ಕುಟುಂಬಗಳಿಗೆ  ವಿಶ್ವ ಜಲ ದಿನದಂದು ನೆನೆಯುವ ಜೊತೆಗೆ ನಮಸ್ಕಾರವನ್ನು ತಿಳಿಸುವ ಹಾಗೂ ಇತರರು ಇವರಂತೆ ಹಳೆಯ ಬಾವಿಗಳನ್ನು ರಕ್ಷಿಸಿ ಅಂತರ್ಜಲವನ್ನು ಹೆಚ್ಚಿಸುವ ಕೆಲಸವನ್ನು ಮಾಡಿ ಎಂದು ತಿಳಿಸೋಣ.  ಸಾಲಿಗ್ರಾಮ ತಾಲೂಕಿನ ಮಿರ್ಲೆ ಹೋಬಳಿಯ ವಡ್ಡರ ಕೊಪ್ಪಲು ಎಂಬ...
1 2 3 48
Page 1 of 48