ಜೆಡಿಎಸ್ ಏಕಚಕ್ರಾಧಿಪತ್ಯಕ್ಕೆ ಸವಾಲು: ಕೆಆರ್ ನಗರ ರಾಜಕೀಯ ಕಾದಾಟ
ಕೆಆರ್ ನಗರದಲ್ಲಿ ಜೆಡಿಎಸ್ ಬಿಕ್ಕಟ್ಟು: ನಾಯಕತ್ವಕ್ಕಾಗಿ ಜಿಟಿ–ಸಾರಾ ಶಕ್ತಿ ಪ್ರದರ್ಶನ ವಿಶೇಷ ವರದಿ:-ವಡ್ಡರಕೊಪ್ಪಲು ಶಿವರಾಮು. ಕೆಆರ್ ನಗರ ರಾಜಕೀಯದ ಕೇಂದ್ರಬಿಂದು: ಜಿಟಿ ದೇವೇಗೌಡರ ಶಕ್ತಿ vs ಸಾರಾ ಮಹೇಶ್ ಪ್ರಭಾವ ಕೆ ಆರ್ ನಗರ. ಫೆ. 03:- ಮೈಸೂರು ಜಿಲ್ಲೆಯ ಜೆಡಿಎಸ್ ಪಕ್ಷದಲ್ಲಿಗ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಾಜಿ ಸಚಿವ ಸಾರಾ ಮಹೇಶ್ ಅವರ ನಡುವೆ ನಿನಾ ನಾನ ಎಂಬ ಜಿದ್ದಿನಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದನ್ನು 2028ರ ವಿಧಾನಸಭಾ ಚುನಾವಣೆಯವರಿಗೂ ಕಾಯಬೇಕಾಗಿದೆ. ಜಿ ಟಿ ದೇವೇಗೌಡ:- ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಹೋದ ನಂತರ ಜೆಡಿಎಸ್ ನಾಯಕತ್ವವನ್ನು ಹೊತ್ತಿಕೊಂಡ ಜಿಟಿ ದೇವೇಗೌಡ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವರ ಅವಧಿಯಲ್ಲಿ ಸಚಿವರಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ...










