ಫೆ.17ರಂದು ನಾದಬ್ರಹ್ಮ ಸಭೆಯಲ್ಲಿ ಶಿವನಸ್ಮರಣೆ ಭಕ್ತಿಗೀತೆಗಳ ಕಾರ್ಯಕ್ರಮ
ಮೈಸೂರು: ಮಹಾ ಶಿವರಾತ್ರಿ ಅಂಗವಾಗಿ ನಗರದ ಸಾಂಸ್ಕೃತಿಕ ವಾತಾವರಣಕ್ಕೆ ಭಕ್ತಿರಸದ ಹೊಳೆ ಹರಿಸುವ ಉದ್ದೇಶದಿಂದ ರಾಘವೇಂದ್ರ ನಗರದ ಡಾ. ರಾಜ್ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ವಿಶೇಷ ಭಕ್ತಿಗೀತೆಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಫೆಬ್ರವರಿ 17ರಂದು ಸಂಜೆ 5 ಗಂಟೆಯಿಂದ ರಾತ್ರಿ 9.30ರವರೆಗೆ ಜೆಎಲ್ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾಭವನದಲ್ಲಿ “ಶಿವನಸ್ಮರಣೆ” ಶೀರ್ಷಿಕೆಯಡಿ ಈ ಸಂಗೀತ ಸಂಜೆಯು ನಡೆಯಲಿದೆ ಎಂದು ತಂಡದ ಗಾಯಕ ಸುಧೀಂದ್ರ ಸುದ್ದಿಗಾರರಿಗೆ ತಿಳಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾ ಶಿವರಾತ್ರಿ ಹಬ್ಬವು ಭಕ್ತಿಭಾವ, ಧ್ಯಾನ ಮತ್ತು ಸಂಗೀತದ ಮೂಲಕ ಆತ್ಮಶಾಂತಿಯನ್ನು ಅನುಭವಿಸುವ ಪವಿತ್ರ ಸಂದರ್ಭವಾಗಿದ್ದು, ಈ ಹಿನ್ನೆಲೆಯಲ್ಲಿ ಶಿವಭಕ್ತಿಗೀತೆಗಳ ಮೂಲಕ ಜನರಿಗೆ ಆಧ್ಯಾತ್ಮಿಕ ಅನುಭವ ನೀಡುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು. ಭಕ್ತಿಪರ ಕಾವ್ಯ ಮತ್ತು ಸಂಗೀತದ ಪರಂಪರೆಯನ್ನು ಜೀವಂತವಾಗಿಡಲು ತಂಡ ಹಲವು ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿ...







